AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ನೆಗೆದಾಟ ಬಂದ್​, ಎಲ್ಲಾ ಆನ್​ಲೈನ್ ಆರ್ಡರ್ ಮಾಡೋಣ; ಮಂಗಗಳ ಡಿಜಿಟಲ್​ ಸಾಕ್ಷರತೆ

Monkey : ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗಿದೆ ಎಂದು ಮೊಬೈಲ್​ನಲ್ಲಿ ಮುಳುಗಿದ್ದ ಮನುಷ್ಯರನ್ನು ಇನ್ನೂ ಬಯ್ಯುತ್ತಲೇ ಇರುತ್ತಾರೆ. ಆದರೆ ಈಗ ಈ ಮಂಗಗಳಿಗೆ ಏನೆಂದು ಹೇಳುವುದು?

ಇನ್ನು ನೆಗೆದಾಟ ಬಂದ್​, ಎಲ್ಲಾ ಆನ್​ಲೈನ್ ಆರ್ಡರ್ ಮಾಡೋಣ; ಮಂಗಗಳ ಡಿಜಿಟಲ್​ ಸಾಕ್ಷರತೆ
ಒಬ್ಬೊಬ್ಬರೇ ನೋಡ್ರೋ
TV9 Web
| Edited By: |

Updated on:Jan 20, 2023 | 12:17 PM

Share

Viral Video : ಓಹ್​ ಇದರಲ್ಲಿ ಹೀಗೆಲ್ಲ ಇದೆಯಾ? ಇನ್​ ಮೇಲೆ ನಾವು ಮರದಿಂದ ಮರಕ್ಕೆ, ಕಾಂಪೌಂಡಿಂದ ಕಾಂಪೌಂಡಿಗೆ ನೆಗೆಯೋದೆಲ್ಲ ಸಾಕು ಮಾಡೋಣಲ್ಲವಾ. ಅಮೇಝಾನ್​ನಲ್ಲಿ ಬಾಳೆಹಣ್ಣು ಸಿಗತ್ತಾ, ಪೇರಲೆ ಹಣ್ಣು? ಈ ಸ್ವಿಗ್ಗಿ ಅಂದ್ರೆ ಏನು? ಅದರಲ್ಲಿ ಏನೇನು ಸಿಗತ್ತೆ. ಮಿಂತ್ರಾ ಅಂತೊಂದಿದೆಯಲ್ಲ ಒಂದು ಶರ್ಟ್​ ತರಿಸಿ ನೋಡೋಣ್ವಾ ತುಂಬಾ ಚಳಿ ಇದೆ. ಈ ಕೋತಿಯಮ್ಮ, ಮಕ್ಕಳು, ಕಸಿನ್ಸ್​ ಎಲ್ಲ ಸೇರಿ ಮೊಬೈಲ್​ನಲ್ಲಿ ಆ್ಯಪ್​ಗಳನ್ನು ತಡಕಾಡ್ತಿರೋ ಗಂಭೀರತೆ ನೋಡಿದರೆ ಹೀಗೇ ತಾನೇ ಅನ್ನಿಸೋದು?

ಮಂಗನ ಕೈಗೆ ಮೊಬೈಲ್​ ಕೊಟ್ಟರೆ ಇನ್ನೇನಾಗಬೇಡ. ನಮ್ಮ ಪೂರ್ವಜರೇ ಅವರು. ಮರದ ಮೇಲೆ ಇರ್ತಾರೆ ಅಂತ ಪ್ರಾಣಿಗಳು. ಮನೆಯೊಳಗಿಟ್ಟುಕೊಂಡರೆ ಮನುಷ್ಯರೇ. ಈಗಾಗಲೇ ಆನ್​ಲೈನ್​​ನಲ್ಲಿ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೀರಿ. ಸಾಕಿದ ಮಂಗಗಳು ತರಕಾರಿ ಕತ್ತರಿಸುವಲ್ಲಿ ಸಹಾಯ ಮಾಡುವುದು, ಶಾಲೆಗೆ ಹೋಗುವುದು, ಬಟ್ಟೆ ಒಗೆಯುವುದು, ಮಗುವನ್ನು ಆಡಿಸುವುದು, ಅಂಗಡಿಗೆ ಹೋಗುವುದು ಹೀಗೆ…

ಇದನ್ನೂ ಓದಿ : ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

ಕೇಂದ್ರ ಸಚಿವ ಕಿರಣ ರಿಜಿಜು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.  ಡಿಜಿಟಲ್​ ಕ್ರಾಂತಿಯ ಅಭೂತಪೂರ್ವ ಯಶಸ್ಸನ್ನು ನೋಡಿ ಎಂಬ ನೋಟ್ ಬರೆದಿದ್ದಾರೆ. ಈ ವಿಡಿಯೋ ಅನ್ನು ಈತನಕ 1.23 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಅಬ್ಬಾ! ಎಂಥ ಅದ್ಭುತವಾದ ವಿಡಿಯೋ ಇದು ಎಂದಿದ್ಧಾರೆ ಒಬ್ಬರು. ಇವರೆಲ್ಲರ ಕುತೂಹಲ ಮತ್ತು ಚಕಚಕನೆ ಸ್ಕ್ರಾಲ್​​ ಮಾಡುವುದನ್ನು ನೋಡಿ ಎಂದಿದ್ಧಾರೆ ಮತ್ತೊಬ್ಬರು. ಎಷ್ಟು ಆಸ್ಥೆ, ಸಮಾಧಾನದಿಂದ ಒಬ್ಬೊಬ್ಬರೇ ನೋಡುತ್ತಿದ್ದಾರೆ ನೋಡಿ ಎಂದಿದ್ದಾರೆ ಮಗದೊಬ್ಬರು.

ಕಲ್ಪಿಸಿಕೊಳ್ಳಿ ಮಂಗಗಳ ಮೊಬೈಲ್​ ಇಟ್ಟುಕೊಂಡು ಓಡಾಡಲು ಶುರು ಮಾಡಿದರೆ ಹೇಗೆ ಎಂದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:15 pm, Fri, 20 January 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ