ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

SUV : 4.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಲಾಂಗ್​ ಡ್ರೈವ್ ಹೋದಾಗೆಲ್ಲ ಇಂಥ ಸಾಹಸ ಮಾಡುತ್ತೇನೆ ಎಂದಿದ್ದಾರೆ ಒಬ್ಬರು. ನೀಲಿ ಕಾರು ಆದಷ್ಟು ಬೇಗ ಟಯರ್​ ಬದಲಾಯಿಸಬೇಕಾಗುತ್ತೆ ಎಂದಿದ್ದಾರೆ ಇನ್ನೊಬ್ಬರು.

ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್
ಎದುರುಬದುರಾದ ಎಸ್​ಯುವಿ​ ಕಾರ್​ಗಳು ಸೇತುವೆ ಮೇಲೆ ಚಲಿಸಿದ್ದು ಹೀಗೆ...
Follow us
| Updated By: ಶ್ರೀದೇವಿ ಕಳಸದ

Updated on:Jan 19, 2023 | 1:38 PM

Viral Video : ಕಣ್​ ಕಾಣಲ್ವೇನೋ ಅಂತ ಅವ. ನಿನಗೆ ಕಾಣಲ್ವಾ ಅಂತ ಇವ. ಅಂಥಾ ಏನು ಅವಸರ ಇದೆ ಅಂತ ಇವ, ನಿನಗೇನಂಥಾ ಅವಸರ ಇದೆ ಅಂತ ಇವ. ಇಂಥ ಬಾಯಿಬಾಯಿ, ಕೈಕೈಮಿಲಾಯಿಸುವ ಯಾವ ಸಂದರ್ಭವೂ ಇಲ್ಲಿ ಉಂಟಾಗುವುದಿಲ್ಲ. ಜನರಂತೂ ಮೊದಲೇ ಇಲ್ಲಿ ಸೇರುವುದಿಲ್ಲ. ಯಾಕೆ ಅಂತ ನೀವೇ ವಿಡಿಯೋ ನೋಡಿ ತಿಳಿದುಕೊಳ್ಳಿ. ಇದು ಡ್ರೈವಿಂಗ್ ಸೀಟ್​ನಲ್ಲಿರುವವರ ಕೌಶಲಕ್ಕೆ ಸಂಬಂಧಿಸಿದ್ದು. ಇಕ್ಕಟ್ಟಾಗಿರುವ ಈ ಸೇತುವೆಯ ಮೇಲೆ ಎರಡೂ ಕಾರ್​ಗಳು ಹೀಗೆ ಎದುರುಬದುರಾಗುತ್ತವೆ. ನಿಮಿಷಗಳ ಲೆಕ್ಕದಲ್ಲಿ ಚೂರು ಪರಸ್ಪರ ಧಕ್ಕೆ ಮಾಡಿಕೊಳ್ಳದೆ ಚಲಿಸುತ್ತವೆ. ನೋಡಿದ ಯಾರಿಗೂ ಅಬ್ಬಾ! ಎನ್ನಿಸದೇ ಇರದು. ನೆಟ್ಟಿಗರು ಹೆವಿ ಡ್ರೈವರ್​ ಎಂದು ಬೆರಗಿನಿಂದ ಹೇಳುತ್ತಿದ್ಧಾರೆ.

ಭಯಂಕರ ವಿಡಿಯೋ ಅಲ್ವಾ?! ಈತನಕ ಇದನ್ನು 4.4 ಮಿಲಿಯನ್​ ಜನರು ನೋಡಿದ್ದಾರೆ. ಅನೇಕರು ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ನಾನು ಲಾಂಗ್​ ಡ್ರೈವ್ ಹೋಗುವಾಗೆಲ್ಲ ಎರಡು ಮೂರು ಸಲವಾದರೂ ಇಂಥ ಸಾಹಸವನ್ನು ಮಾಡುತ್ತೇನೆ ಎಂದಿದ್ದಾರೆ ಒಬ್ಬರು. ನೀಲಿ ಕಾರು ಆದಷ್ಟು ಬೇಗ ತನ್ನ ಟಯರ್​ಗಳನ್ನು ಬದಲಾಯಿಸಬೇಕಾಗುತ್ತೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ವಯಸ್ಸು 80, ಮೈಗೆ ಸೀರೆ, ಕೈಗೆ ರಾಷ್ಟ್ರಧ್ವಜ, ಕಾಲಿಗೆ ಸ್ನೀಕರ್ಸ್​​, 4.2 ಕಿ.ಮೀ ಮ್ಯಾರಥಾನ್

ಇದೊಂದು ಪೂರ್ವನಿಯೋಜಿತ ವಿಡಿಯೋ. ಕಾರು ಕಂಪೆನಿಯ ಜಾಹೀರಾತಿಗಾಗಿಯೇ ಇದನ್ನು ಮಾಡಲಾಗಿದೆ ಎಂದಿದ್ಧಾರೆ ಇನ್ನೊಬ್ಬರು. ಅನವಶ್ಯಕ ಸಾಹಸ ಬೇಕಿತ್ತಾ ಎಂದಿದ್ದಾರೆ ಮತ್ತೊಬ್ಬರು. ಜಾಹೀರಾತೋ ಸಾಹಸವೋ ಒಟ್ಟಿನಲ್ಲಿ ಡ್ರೈವರ್ ಕೌಶಲ ನಿಜ ತಾನೇ ಎಂದಿದ್ಧಾರೆ ಮಗದೊಬ್ಬರು. ಅದು ಕೌಶಲ ಅಲ್ಲ ಪ್ರತಿಭೆ ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ‘ಆಪ್ತತೆ’ ಎಂಬ ಅಮೂಲ್ಯ ರತ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದೆ

ಒಟ್ಟಿನಲ್ಲಿ ಇದೆಲ್ಲವೂ ಸಾಧ್ಯವಾಗಬೇಕೆಂದರೆ, ಪ್ರತಿಭೆ, ಪರಿಶ್ರಮ, ಕೌಶಲ, ಸಾಹಸ ಎಲ್ಲವೂ ಮೇಳೈಸಿದೆ. ಈ ವಿಡಿಯೋ ನೋಡಿ ನೀವೇನಾದರೂ ಇಂಥ ಸಾಹಸಗಳನ್ನು ಪ್ರಯತ್ನಿಸೀರಿ. ಹುಷಾರು!

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 1:36 pm, Thu, 19 January 23

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು