Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್

News Anchor: ಲೈವ್​ ನ್ಯೂಸ್​ನಲ್ಲಿ ಸುದ್ದಿ ನಿರೂಪಕರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ಧ್ವನಿಯೋ, ಮುಖಭಾವವೋ ಅಥವಾ ಎಡರುತೊಡರೋ ಆದರೆ ಇಡೀ ಜಗತ್ತೇ ನಕ್ಕುಬಿಡುತ್ತದೆ. ಅಂಥದ್ದರಿಂದ ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುದ್ದಿನಿರೂಪಕಿ ನಕ್ಕಿದ್ದಾರೆ. ಅದರಲ್ಲೂ ಬಾಗ್ಮತಿ ಪ್ರವಾಹದಂಥ ಗಂಭೀರ ಸುದ್ದಿಯನ್ನು ಓದುವಾಗ!

Viral Video: ಬಾಗ್ಮತಿ ನದಿಯ ಪ್ರವಾಹದ ಸುದ್ದಿ ಓದುವಾಗ ನಕ್ಕ ನಿರೂಪಕಿಯ ವಿಡಿಯೋ ವೈರಲ್
ಬಾಗ್ಮತಿ ನದಿ ಪ್ರವಾಹದ ಬಗ್ಗೆ ಓದುತ್ತಿರುವಾಗ ನಗುತ್ತಿರುವ ಆ್ಯಂಕರ್
Follow us
ಶ್ರೀದೇವಿ ಕಳಸದ
|

Updated on: Sep 15, 2023 | 11:34 AM

Bihar: ಸುದ್ದಿನಿರೂಪಕರು (News Anchor) ಲೈವ್​ನಲ್ಲಿದ್ದಾಗ ಇಡೀ ಜಗತ್ತೇ ಅವರನ್ನು ನೋಡುತ್ತಿರುತ್ತದೆ. ಚೂರು ಏರುಪೇರಾದರೂ ಶರವೇಗದಲ್ಲಿ ಫುಟೇಜ್​ ಜಗತ್ತಿಗೆ ತಲುಪಿಬಿಡುತ್ತವೆ. ಇದೀಗ ಈ ಸುದ್ದಿ ನಿರೂಪಕಿ ಬಾಗ್ಮತಿ ನದಿಯ (Bagmati Flood)) ಪ್ರವಾಹದ ಕುರಿತು ಸುದ್ದಿ ಓದುವಾಗ ನಕ್ಕುಬಿಟ್ಟಿದ್ದಾರೆ. ಬಿಹಾರ್ ಮತ್ತು ಜಾರ್ಖಂಡ ಮೂಲದ ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ನಿರೂಪಕಿ ಇಂಥ ಗಂಭೀರ ಸುದ್ದಿಯನ್ನು ಪ್ರಸ್ತುತಪಡಿಸುತ್ತಿರುವಾಗ ನಕ್ಕಿದ್ದು ಏಕೆ, ಕಾರಣವೇನು? ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. X ನಲ್ಲಿ ಈ ವಿಡಿಯೋ ಅನ್ನು ಸಂಜಯ ತ್ರಿಪಾಠಿ ಎನ್ನುವವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಚಿಲ್ಲಿ ರೋಲ್ ಐಸ್ಕ್ರೀಂ; ಇವನಿಗೆ ಯಾವ ಅವಾರ್ಡ್​ ಕೊಡಬೇಕು ಎನ್ನುತ್ತಿರುವ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 14ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈತನಕ 18,200 ಜನರು ನೋಡಿದ್ದಾರೆ. 200ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು 50 ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ ಮತ್ತು ರೀಪೋಸ್ಟ್ ಮಾಡಿದ್ದಾರೆ. ಆಕೆಯ ನೌಕರಿ ಇದೆಯೇ ಇನ್ನೂ? ಎಂದು ಕೇಳಿದ್ದಾರೆ ಕೆಲವರು.

ಬಾಗ್ಮತಿ  ನದಿಯ ಪ್ರವಾಹದ ಬಗ್ಗೆ ಸುದ್ದಿ ಓದುತ್ತಿದ್ದಾಗ ನಕ್ಕ ನಿರೂಪಕಿ

ಇದು ನ್ಯೂಸ್​ ಚಾನೆಲ್​ನ​ ಮೇಲೆ ಕೆಟ್ಟ ಅಭಿಪ್ರಾಯ ಹೊಮ್ಮಿಸುತ್ತದೆ ಎಂದಿದ್ದಾರೆ ಒಬ್ಬರು. ಈ ಮೇಡಮ್​ಗೆ ಬಿಹಾರ್ ಪ್ರವಾಹದ ಬಗ್ಗೆ ರಿಪೋರ್ಟಿಂಗ್ ಮಾಡಲು ಕಳಿಸಬೇಕು, ಆಗ ಅವರಿಗೆ ಇನ್ನಷ್ಟು ಮಜಾ ಬರುತ್ತದೆ ಎಂದಿದ್ದಾರೆ ಇನ್ನೊಬ್ಬರು. ಈಗಾಗಲೇ ಈಕೆ ಕೆಲಸವನ್ನು ಕಳೆದುಕೊಂಡಿರಬಹುದು ಎಂದು ಕೆಲವರು ಹೇಳಿದ್ಧಾರೆ. ಕ್ಯಾಮೆರಾಮ್ಯಾನ್​ ಏನೋ ಸನ್ನೆ ಮಾಡಿರಬೇಕು ಅದಕ್ಕೇ ಆಕೆಗೆ ನಗು ಬಂದಿದೆ ಎಂದಿದ್ದಾರೆ ಒಂದಿಷ್ಟು ಜನ.

ಇದನ್ನೂ ಓದಿ : Viral Video: ಅಥ್ಲೀಟ್​ ಬಿಪಾಶಾ ಫುಟ್​ಬಾಲ್​ ಕೌಶಲ; ರೊನಾಲ್ಡೋ ಮೆಸ್ಸಿಗೂ ಅಸಾಧ್ಯ ಎನ್ನುತ್ತಿರುವ ನೆಟ್ಟಿಗರು

ಮೋದಿ ಹೈ ತೋ ಮುಮ್ಕಿನ್​ ಹೈ ಎಂದು ಹಿಂದೆಯಿಂದ ಯಾರೋ ಹೇಳಿದ್ದಿರಬಹುದು ಎಂದಿದ್ಧಾರೆ ಒಬ್ಬರು. ಈಕೆಯ ಮನೆಗೆಲಸದ ಸಹಾಯಕಿಯ ಹೆಸರು ಬಾಗ್ಮತಿ ಇರಬೇಕು. ಅದಕ್ಕೇ ಆಕೆಗೆ ನಗು ಬಂದಿದೆ ಎಂದಿದ್ದಾರೆ ಇನ್ನೊಬ್ಬರು. ಈ ಭಾಗವನ್ನು ಕಟ್ ಮಾಡದೇ ಪ್ರಸಾರ ಮಾಡಿದ್ದೇಕೆ? ಎಂದಿದ್ದಾರೆ ಮತ್ತೊಬ್ಬರು. ಲೈವ್​ ನ್ಯೂಸ್​ನಲ್ಲಿ ಯಾರಾದರೂ ನಗಲು ಸಾಧ್ಯವೆ? ಎಂದು ಕೇಳಿದ್ಧಾರೆ ಮಗದೊಬ್ಬರು.

ಈ ಸುದ್ದಿನಿರೂಪಕಿಗೆ ನಕ್ಕಿದ್ದು ಯಾಕೆ ಎಂದು ನಿಮಗೇನಾದರೂ ಹೊಳೆಯಬಹುದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ