AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಟಿಗಾಲಿನಲ್ಲಿ ಒಂಟಿಗೈಯಲ್ಲಿ ನಿತ್ಯವೂ ಬದುಕಿನ ಬಂಡಿ ಎಳೆಯುವ ಈ ದಿವ್ಯಾಂಗ

Specially Abled : ಭಾರತದ ಶ್ರೀಮಂತರು ಇಂಥ ಕಷ್ಟಜೀವಿಗಳತ್ತ ತಿರುಗಿ ನೋಡಬಾರದೆ? ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಂದು ಏನೆಲ್ಲವೂ ಸಾಧ್ಯವಿದೆ. ಒಮ್ಮೆ ಈ ವಿಡಿಯೋ ನೋಡಿ. ನಿಮ್ಮ ಸುತ್ತಮುತ್ತಲೂ ಇಂಥ ಅನೇಕರು ಇದ್ಧಾರೆ.

ಒಂಟಿಗಾಲಿನಲ್ಲಿ ಒಂಟಿಗೈಯಲ್ಲಿ ನಿತ್ಯವೂ ಬದುಕಿನ ಬಂಡಿ ಎಳೆಯುವ ಈ ದಿವ್ಯಾಂಗ
ಹೊಟ್ಟೆಪಾಡಿಗಾಗಿ ಒಂಟಿಗಾಲು, ಒಂಟಿಕೈಯಲ್ಲಿ ಸೈಕಲ್ ಎಳೆಯುತ್ತಿರುವ ದಿವ್ಯಾಂಗ
TV9 Web
| Edited By: |

Updated on:Jan 21, 2023 | 2:12 PM

Share

Viral Video : ನಮ್ಮ ನಡುವಿನ ಅನೇಕ ದಿವ್ಯಾಂಗರು (Specially Ablded) ಸ್ವಾಭಿಮಾನಿಗಳು. ಅವರಿಗೆ ದುಡಿದು ತಿನ್ನುವ ಛಲ. ಆದರೆ ಸಮಾಜ ಅವರನ್ನು ಇನ್ನೂ ಅಸಹಾಯಕರಂತೆಯೇ ನಡೆಸಿಕೊಳ್ಳುತ್ತಿದೆ. ಸ್ವಲ್ಪ ನಮ್ಮನ್ನು ಕೈ ಹಿಡಿದೆತ್ತಿದರೆ ಸಾಕು, ನಮಗೂ ಕನಸುಗಳಿಗೂ ಬಲ ಬರುತ್ತದೆ ಎಂಬ ನಿಲುವು ದಿವ್ಯಾಂಗರದು. ಆದರೆ ಏನು ಮಾಡುವುದು, ಸಮಾಜಕ್ಕೆ ಯೋಚಿಸುವ ಪುರಸೊತ್ತಿಲ್ಲ, ಅತೀಕರುಣೆ ತೋರಿಸಿ ಅವರನ್ನು ಮತ್ತಷ್ಟು ಅಸಹಾಯಕತೆಗೆ ತಳ್ಳಿ ಹೊರಟುಬಿಡುತ್ತದೆ. ಆಗ ಅವರು ಹೀಗೆ ತುಸು ಹೆಚ್ಚಿಗೆಯೇ ಕಷ್ಟಕ್ಕೆ ಬೀಳಬೇಕಾಗುತ್ತದೆ. ಮುಂದುವರಿದ ತಂತ್ರಜ್ಞಾನ ಯುಗದಲ್ಲಿ ಉಳ್ಳವರು ಇಂಥವರ ಸಹಾಯಕ್ಕಾಗಿ ಸ್ವಲ್ಪಾದರೂ ಯೋಚಿಸಬೇಕಲ್ಲವೆ?

ದಿವ್ಯಾಂಗ ವ್ಯಕ್ತಿಯೊಬ್ಬರು ಒಂದು ಕೈಯಿಂದ ಸೈಕಲ್​ ಎಳೆಯುತ್ತ ಇನ್ನೊಂದು ಕೈಯಲ್ಲಿ ಊರುಗೋಲು ಹಿಡಿದುಕೊಂಡು ಒಂಟಿಗಾಲಿನಲ್ಲಿ ಸಾಗುತ್ತಿದ್ಧಾರೆ. 11 ಸೆಕೆಂಡುಗಳ ಈ ವಿಡಿಯೋ ಟ್ವೀಟ್ ನೆಟ್ಟಿಗರಲ್ಲಿ ಸ್ಫೂರ್ತಿ ತುಂಬುತ್ತಿದೆ. ಈ ವಿಡಿಯೋ ಅನ್ನು ಈತನಕ ಸುಮಾರು 16,000 ಜನರು ನೋಡಿದ್ದಾರೆ. 10,300 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಗರ್ಭಿಣಿಯಾಗಲು ಸೊಸೆಗೆ ಮೂಳೆಪುಡಿ ಸೇವಿಸಲು ಒತ್ತಾಯಿಸಿದ ಅತ್ತೆ

ಇವರ ಶ್ರಮದ ಕೆಲಸ ಮೆಚ್ಚುವಂಥದ್ದು ಮತ್ತು ಯೋಚಿಸುವಂಥದ್ದು. ಜಗತ್ತಿನ ಶ್ರೀಮಂತ ವ್ಯಕ್ತಿಗಳು ಈ ದೃಶ್ಯವನ್ನು ನೋಡಿ ಪಶ್ಚಾತ್ತಾಪ ಪಡಬೇಕು ಎಂದಿದ್ದಾರೆ ಒಬ್ಬರು. ನಮ್ಮ ನಡುವೆ ಬಹಳ ಜನ ಬದುಕು ಸಾಗಿಸಲು ಹೀಗೆ ದಿನವೂ ಕಷ್ಟಪಡುತ್ತಾರೆ, ಅಂಥವರಿಗೆ ನನ್ನ ಪ್ರಣಾಮಗಳು ಎಂದಿದ್ದಾರೆ ಮತ್ತೊಬ್ಬರು. ​ನನ್ನ ದೇಶವನ್ನು ಆಳುತ್ತಿರುವ ಸರ್ಕಾರಕ್ಕೆ ಈ ಬಡವರು ಯಾವಾಗ ಕಣ್ಣಿಗೆ ಬೀಳುವರೋ? ಎಂದು ಕೇಳಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:10 pm, Sat, 21 January 23

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು