Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೋಸೆ ಮಾಡೋದಕ್ಕಿಂತ ಚೆಲ್ಲೋದೇ ಜಾಸ್ತಿಯಾಯ್ತಲ್ಲಣ್ಣೋ’ ನೆತ್ತಿಗೇರಿದ ನೆಟ್ಟಿಗರ ಕೋಪ

Dosa : ಇವ ದೋಸೆ ಹುಯ್ಯುವ ರೀತಿಗೆ ಬ್ಯಾಕ್ಟೀರಿಯಾಗಳೂ ಆತ್ಮಹತ್ಯೆ ಮಾಡಿಕೊಂಡುಬಿಡುತ್ತವೆ! ಅಣ್ಣಾ, ಈ ಕೆಲಸ ನೀ ಬಿಟ್ಟುಬಿಡು, ಸಣ್ಣಮಕ್ಕಳು ನಿನ್ನನ್ನು ಅನುಕರಿಸಿದರೆ ಗತಿ ಏನು? ನೆಟ್ಟಿಗರು ಪರಿಪರಿಯಾಗಿ ಪ್ರತಿಕ್ರಿಯಿಸಿದ್ದಾರೆ.

'ದೋಸೆ ಮಾಡೋದಕ್ಕಿಂತ ಚೆಲ್ಲೋದೇ ಜಾಸ್ತಿಯಾಯ್ತಲ್ಲಣ್ಣೋ' ನೆತ್ತಿಗೇರಿದ ನೆಟ್ಟಿಗರ ಕೋಪ
ಜೈಪುರದ ದೋಸಾ ಕೆಫೆಯಲ್ಲಿ ದೋಸೆ ಮಾಡುವ ಪರಿ!
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 16, 2023 | 2:40 PM

Viral Video : ಜೈಪುರದ ಮಾಲ್ವಿಯಾನಗರದ ದೋಸಾ ಕೆಫೆಯಲ್ಲಿ ಹೀಗೆ ಅದ್ಭುತವಾಗಿ ಈತ ರವೆದೋಸೆ ಮಾಡುತ್ತಿದ್ದಾನೆ. ಅವನ ಈ ಕೌಶಲವನ್ನು ನೀವು ಕಣ್ಣಾರೆ ನೋಡಲೇಬೇಕು. ನೆಟ್ಟಿಗರು ಇವನ ಮೇಲೆ ಯಾಕೆ ಇಷ್ಟೊಂದು ಕೋಪಗೊಂಡಿದ್ದಾರೆ ಎನ್ನುವ ಸತ್ಯ ಅರ್ಥವಾಗುತ್ತದೆ. ಫುಡ್ ಬ್ಲಾಗರ್​ ರೇಕಿಬ್ ಅಲಮ್​ ಎನ್ನುವವರು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Rekib Alam (@food.india93)

ಏ. 9ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 2 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಆಹಾ ದೋಸೆ ಎನ್ನುವ ಬದಲು ಏನಾಗಿದೆಯೋ ನಿನಗೆ, ಇಷ್ಟೊಂದು ಹಿಟ್ಟು ಹಾಳು ಮಾಡುತ್ತಿದ್ದೀಯಾ, ಎಲ್ಲಿಂದ ಕಲಿತೆ ಹೀಗೆ ದೋಸೆ ಮಾಡುವುದನ್ನು ಎಂದು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ.

ಇದನ್ನೂ ಓದಿ : ಅಮ್ಮ ಎಲ್ಲಿ ಹೋದಳೋ?; ಪರ್ವಾಗಿಲ್ಲ, ಫೀಡಿಂಗ್​ ಟಂಬ್ಲರಮ್ಮ ಇದಾಳಲ್ಲ

ಶೇ. 80 ರಷ್ಟು ತವಾ ಮೇಲಿದೆ, ಶೇ. 20 ರಷ್ಟು ವ್ಯರ್ಥವಾಗುತ್ತಿದೆ. ಇವನಿಗೆ ಕೆಲಸ ಕೊಟ್ಟವರು ಗಮನಿಸುತ್ತಿಲ್ಲವೆ? ಎಂದು ಕೇಳಿದ್ದಾರೆ ಕೆಲವರು. ವೇಗವಾಗಿ ಮಾಡಿದರೂ ಹಿಟ್ಟು ವ್ಯರ್ಥವಾಗದಂತೆ ಮಾಡಪ್ಪಾ ಎಂದು ಅನೇಕರು ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ

ಇಷ್ಟು ಕೆಟ್ಟದಾಗಿ ದೋಸೆ ಮಾಡುವುದನ್ನು ಈತನಕ ಎಲ್ಲಿಯೂ ನೋಡಿಲ್ಲ. ರವೆದೋಸೆ ತಿನ್ನುವ ಆಸೆಯೇ ಕಡಿಮೆಯಾಯಿತು ಎಂದು ಒಬ್ಬರು ಬೇಸರಿಸಿಕೊಂಡಿದ್ದಾರೆ. ಅಣ್ಣಾ ನೀನು ದೋಸೆ ಮಾಡುವುದಕ್ಕಿಂತ ಮೊದಲು ಶುಚಿತ್ವವನ್ನು ರೂಢಿಸಿಕೊಂಡರೆ ಒಳ್ಳೇಯದು ಎಂದಿದ್ದಾರೆ ಮತ್ತೊಬ್ಬರು. ಹೀಗೆ ದೋಸೆ ಹುಯ್ದರೆ ನಿನಗೆ ಯಾರಾದರೂ ಬಹುಮಾನ ಕೊಡುತ್ತೇನೆಂದು ಹೇಳಿದ್ದಾರೋ ಏನೋ? ಎಂದು ಕೇಳಿದ್ದಾರೆ ಮಗದೊಬ್ಬರು.

ಇದನ್ನು ಓದಿ : ಆಮ್​ರಸ್​ ಚೀಝ್​ ದೋಸೆ; ಕೊಲ್ಲಬೇಡಿರೋ ದೋಸೆಯನ್ನು ಎನ್ನುತ್ತಿರುವ ನೆಟ್ಟಿಗರು

ಬ್ಯಾಕ್ಟೀರಿಯಾಗಳು ಸೋಂಕು ತಗುಲಿ ಸತ್ತೇ ಹೋಗುತ್ತವೇ ಇವ ದೋಸೆ ಮಾಡುವ ರೀತಿಗೆ ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು. ಮೂರ್ಖತನದ ಪರಮಾವಧಿ ಮೊದಲು ಇವನನ್ನು ಓಡಿಸಬೇಕು. ಇಲ್ಲವಾದರೆ ದೋಸೆ ಮಾಡುವ ವಿಧಾನ ಹೀಗೆಯೇ ಎಂದು ತಿಳಿದುಕೊಳ್ಳುತ್ತದೆ ಯುವಪೀಳಿಗೆ ಎಂದಿದ್ದಾರೆ ಇನ್ನೂ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:40 pm, Tue, 16 May 23

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ