AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವು ಆಕಳಿಸಿದಾಗ; ‘ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ’ ಎಂದ ನೆಟ್ಟಿಗ

Snake : ಹಸು, ಬೆಕ್ಕು, ನಾಯಿ ಆಕಳಿಸುವುದನ್ನು ನೋಡಿದ್ದೀರಿ. ಆದರೆ ಹಾವು? ಬಹುಶಃ ನೀವು ಹಾವಿನ ಆಕಳಿಕೆ ಈತನಕ ನೋಡಿಯೇ ಇಲ್ಲವೇನೋ. ಬನ್ನಿ ಹಾಗಿದ್ದರೆ ಈ ವಿಡಿಯೋ ನೋಡಿ.

ಹಾವು ಆಕಳಿಸಿದಾಗ; 'ಬೆಳಗ್ಗೆ ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ' ಎಂದ ನೆಟ್ಟಿಗ
ಆಕಳಿಸುತ್ತಿರುವ ಹಾವು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 03, 2023 | 12:07 PM

Viral Video : ಹಾವು! ಆದಿ, ಜಾನಪದ ಮತ್ತು ಪುರಾಣಕಾಲದಿಂದಲೂ ಈ ಜೀವಿಗೆ ವಿಶಿಷ್ಟ ಸ್ಥಾನ. ಭಯ ಭಕ್ತಿ ಮೋಹದೊಂದಿಗೆ ಮನುಷ್ಯನನ್ನು ಅಂತರದಲ್ಲಿರಿಸಿಕೊಂಡೇ ತನ್ನ ಬಗ್ಗೆ ವಿಶೇಷ ಆಕರ್ಷಣೆ ಉಳಿಸಿಕೊಂಡು ಬಂದಿದೆ. ಕಾವ್ಯ, ಸಿನೆಮಾ, ನಾಟಕ, ನೃತ್ಯ ಮುಂತಾದ ಕಲಾಪ್ರಕಾರಗಳಲ್ಲಿ ನಾಗರಾಜ, ನಾಗಿಣಿಯರ ವೈಭವ ಹೇಳತೀರದು. ಉಳಿದಂತೆ ಈ ಚುರುಕಾದ ಜೀವಿಗಳ ಚಲನವಲನದ ಬಗ್ಗೆಯಂತೂ ಎಂದಿಗೂ ಕುತೂಹಲ ಕಟ್ಟಿಟ್ಟಿದ್ದೇ.

ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಹುಶಃ ಹಾವು ಆಕಳಿಸುವುದನ್ನು ನೀವು ನೋಡುತ್ತಿರುವುದು ಇದೇ ಮೊದಲಿರಬಹುದು. ಯಾವ ಪರಿ ಇದು ತನ್ನ ಬಾಯನ್ನು ಹಿಗ್ಗಿಸಿದೆ ನೋಡಿ. ಅಚ್ಚರಿ ಮತ್ತು ಭಯ ಒಮ್ಮೆಲೇ ಆಗುವುದಲ್ಲದೆ?

ಇದನ್ನೂ ಓದಿ : ಹಾವು ಕಚ್ಚಿತೆಂದು, ಹಾವನ್ನೇ ಕಚ್ಚಿ ಕೊಂದ ವ್ಯಕ್ತಿ; ವಿಡಿಯೋ ವೈರಲ್​​

ಇಷ್ಟೊಂದು ದೊಡ್ಡದಾಗಿ ಆಕಳಿಸಲು ಅದೆಷ್ಟು ರಾತ್ರಿ ನಿದ್ದೆಗೆಟ್ಟಿತ್ತೋ ಏನೋ. ಯಾವೂರಿಗೆ ಪ್ರವಾಸಕ್ಕೆ ಹೋಗಿತ್ತೋ ಏನೋ. ನೆಟ್ಟಿಗರೊಬ್ಬರಂತೂ, ಬೆಳಗಿನ ಹೊತ್ತು ನನ್ನ ಹೆಂಡತಿ ಹೀಗೆಯೇ ಮುದ್ದಾಗಿ ಕಾಣುತ್ತಾಳೆ ಎಂದಿದ್ದಾರೆ. ಹಾವನ್ನು ಮತ್ತು ಹೆಂಡತಿಯನ್ನು ಹೀಗೆಲ್ಲ ಪ್ರೀತಿಸುವವರೂ ಇದ್ದಾರೆ ಎಂದಾಯಿತಲ್ಲವೆ?

ಇದನ್ನೂ ಓದಿ : Viral Video: ಏರ್​ಪೋರ್ಟ್​ನಲ್ಲಿ ತಪಾಸಣೆಗೆಂದು ಮಹಿಳೆಯ ಬ್ಯಾಗ್​ ತೆರೆದು ನೋಡಿ ದಂಗಾದ ಸಿಬ್ಬಂದಿ, ಅಲ್ಲಿತ್ತು 22 ಜೀವಂತ ಹಾವುಗಳು

ಮುದ್ದು ಮಗುವಿನಂತೆ ಇದು ಎಷ್ಟು ನಿರಾಯಾಸವಾಗಿ ಆಕಳಿಸಿದೆಯಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಹಾ ಇದನ್ನು ಈಗಲೇ ಎತ್ತಿಕೊಂಡು ಮಲಗಿಸಬೇಕು ಎನ್ನಿಸುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:05 pm, Wed, 3 May 23

ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ರೈಲುಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್ ಹಿಡಿದು ಸ್ಲೀಪರ್ ಕೋಚ್ ಹತ್ತುವಂತಿಲ್ಲ
ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ, ಘಟನೆ ವಿವರಿಸಿದ ಸುಧಾ ನಾಗರಾಜ್
ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಹಲ್ಲೆ, ಘಟನೆ ವಿವರಿಸಿದ ಸುಧಾ ನಾಗರಾಜ್
ಅಧಿಕಾರಿಗಳನ್ನು ಸಿಎಂ ಯಾವತ್ತೂ ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ: ಡಾ ಯತೀಂದ್ರ
ಅಧಿಕಾರಿಗಳನ್ನು ಸಿಎಂ ಯಾವತ್ತೂ ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ: ಡಾ ಯತೀಂದ್ರ