AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್

ಕಸದ ಲಾರಿ ಮುಂದೆ ಹೋಗುತ್ತಿದ್ದಂತೆ ವೇಗವಾಗಿ ರಸ್ತೆ ದಾಟಲು ನೋಡಿದ ಬಾಲಕ ಇನ್ನೇನು ಕಾರಿನಡಿ ಸಿಲುಕುವುದರಲ್ಲಿದ್ದ. ಆದರೆ, ಅಷ್ಟರಲ್ಲಿ ಅಲ್ಲೇ ಇದ್ದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ, ಕಾಪಾಡಿದ್ದಾರೆ.

Viral Video: ಕಾರಿನಡಿ ಸಿಲುಕುತ್ತಿದ್ದ ಬಾಲಕನ ಜೀವ ಕಾಪಾಡಿದ ಪೌರ ಕಾರ್ಮಿಕ; ವಿಡಿಯೋ ವೈರಲ್
ವೈರಲ್ ವಿಡಿಯೋ
TV9 Web
| Edited By: |

Updated on: Sep 07, 2021 | 1:16 PM

Share

ಇನ್ನೇನು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಆ ಬಾಲಕ ಕಾರಿನ ಅಡಿ ಸಿಲುಕಿ ಅಪ್ಪಚ್ಚಿಯಾಗುತ್ತಿದ್ದ. ಆದರೆ, ಅಷ್ಟರಲ್ಲಿ ದೇವರಂತೆ ಬಂದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ ದೊಡ್ಡ ಅಪಾಯದಿಂದ ಪಾರು ಮಾಡಿದ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಚಿಕ್ಕ ಬಾಲಕನ ಜೀವ ಉಳಿಸಿದ ಆ ಪೌರ ಕಾರ್ಮಿಕನ ಸಮಯಪ್ರಜ್ಞೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ಘಟನೆ ಬ್ರೆಜಿಲ್​ನ ರೋಲಾಂಡಿಯದಲ್ಲಿ ನಡೆದಿದೆ. ಆ ಬಾಲಕನ ತಾತ ಮನೆಯ ಗೇಟ್ ದಾಟಿ ಮುಂದೆ ಹೋಗಿದ್ದರು. ಅವರ ಜೊತೆ ಹೊರಟಿದ್ದ ಮೊಮ್ಮಗನೂ ಇನ್ನೇನು ರಸ್ತೆ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ಕಸದ ಲಾರಿ ಬಂದಿತು. ಆ ಕಸದ ಲಾರಿಯ ಹಿಂಭಾಗದಿಂದ ಇನ್ನೊಂದು ಕಾರು ಬರುತ್ತಿತ್ತು. ಆದರೆ, ಎದುರಿನಲ್ಲಿ ಲಾರಿ ಇದ್ದುದರಿಂದ ಬಾಲಕನಿಗೆ ಆ ಕಾರು ಕಾಣಲಿಲ್ಲ.

ಕಸದ ಲಾರಿ ಮುಂದೆ ಹೋಗುತ್ತಿದ್ದಂತೆ ವೇಗವಾಗಿ ರಸ್ತೆ ದಾಟಲು ನೋಡಿದ ಬಾಲಕ ಇನ್ನೇನು ಕಾರಿನಡಿ ಸಿಲುಕುವುದರಲ್ಲಿದ್ದ. ಆದರೆ, ಅಷ್ಟರಲ್ಲಿ ಅಲ್ಲೇ ಇದ್ದ ಪೌರ ಕಾರ್ಮಿಕ ಆ ಬಾಲಕನನ್ನು ಎಳೆದು ನಿಲ್ಲಿಸಿ, ಕಾಪಾಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 1 ಮಿಲಿಯನ್​ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ, 60 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

ಆ ಪೌರ ಕಾರ್ಮಿಕ ಕೇವಲ ಬಾಲಕನನ್ನು ಮಾತ್ರ ಕಾಪಾಡಲಿಲ್ಲ, ಆ ಬಾಲಕನನ್ನು ಕೊಂದುಬಿಟ್ಟೆನಲ್ಲ ಎಂದು ಜೀವನಪೂರ್ತಿ ನೆನಪಿಸಿಕೊಂಡು ಕೊರಗಬೇಕಾಗಿದ್ದ ಕಾರು ಚಾಲಕನನ್ನು ಕೂಡ ಕಾಪಾಡಿದ್ದಾನೆ. ಆತ ನಿವಾದ ಹೀರೋ ಎಂದು ಟ್ವಿಟ್ಟಿಗರು ಕಮೆಂಟ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

(Sanitation worker saves boy from being run over by Car Shocking Video has over 1 million views)

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ