AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ

Arijit Singh: ಬಣ್ಣದಲ್ಲಿ, ರಂಗೋಲಿಯಲ್ಲಿ, ಕಲ್ಲಿನಲ್ಲಿ, ಕಟ್ಟಿಗೆಯಲ್ಲಿ, ಸಿಮೆಂಟಿನಲ್ಲಿ ಹೀಗೆ ತಮ್ಮ ನೆಚ್ಚಿನ ಕಲಾವಿದರನ್ನು ಅನೇಕರು ಅರಳಿಸುತ್ತಾರೆ. ಆದರೆ ನೆರಳು ಬೆಳಕಿನಲ್ಲಿ? ಇಲ್ಲೊಬ್ಬ ಕಲಾವಿದರು ಗಾಯಕ ಅರಿಜೀತ್ ಸಿಂಗ್​ರನ್ನು ಹೊಮ್ಮಿಸಿದ್ದಾರೆ. ಈ ವಿಡಿಯೋಗೆ ಸುಶಾಂತ್​ ನಟಿಸಿದ ಮತ್ತು ಅರಿಜೀತ್ ಹಾಡಿದ ಹಾಡಿನ ಹಿನ್ನೆಲೆ ಇದೆ. ನೆಟ್ಟಿಗರು ಸುಶಾಂತನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ
ಶಿಂಟು ಮೌರ್ಯ ನೆರಳಿನೊಳಗೆ ಅರಳಿಸಿದ ಅರಿಜಿತ್​ ಸಿಂಘ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Sep 16, 2023 | 10:54 AM

Share

Shadow Portrait: ತಮ್ಮ ನೆಚ್ಚಿನ ಕಲಾವಿದರನ್ನು, ವ್ಯಕ್ತಿಗಳನ್ನು ಕಲಾವಿದರು ಪೋರ್ಟ್ರೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿಯ (Virat Kohli) ಅಭಿಮಾನಿ ಕಲಾವಿದರು ನಾಲಗೆಯಿಂದ ಪೇಂಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ಗಾಯಕ ಅರಿಜೀತ್ ಸಿಂಗ್ (Arijit Singh)​ ಅಭಿಮಾನಿಯೊಬ್ಬರು ನೆರಳು ಬೆಳಕಿನಲ್ಲಿ ಅರಿಜೀತ್​ ಪೋರ್ಟ್ರೇಟ್​ ಅರಳಿಸಿ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಕಲಾವಿದ ಶಿಂಟು ಮೌರ್ಯ ಪ್ರತಿಭೆ ಮತ್ತು ಆಸ್ಥೆಯನ್ನು ಮೆಚ್ಚಿದ ನೆಟ್ಟಿಗರು ಅಭಿಮಾನದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ‘ಕೊನೆಯತನಕ ಈ ವಿಡಿಯೋ ನೋಡಿ’ ಎಂದು ಶಿಂಟು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಗೋಡೆಯ ಮೇಲೆ ಅರಿಜೀತ್​ ಮೂಡುವ ಪರಿ ಅನನ್ಯವಾಗಿದೆ.

ಇದನ್ನೂ ಓದಿ : Viral: ಅಮೆರಿಕ; ಮುದ್ದುಗಳಿವೆ ಎಚ್ಚರಿಕೆ! ಅಳಿವಿನಂಚಿನಲ್ಲಿರುವ 6 ಕೊಮೊಡೊ ಡ್ರ್ಯಾಗನ್​ ಮರಿಗಳ ಜನನ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 17 ರಂದು ಈ ಪೋಸ್ಟ್ ಮಾಡಲಾಗಿದ್ದು, ಈತನಕ ಸುಮಾರು 30 ಮಿಲಿಯನ್​ ಜನರು ನೋಡಿದ್ದಾರೆ. 3.2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಇದ ಅತ್ಯದ್ಭುತವಾಗಿದೆ. ನಿಮ್ಮ ತಾಳ್ಮೆಗೆ ಸಲಾಂ ಎಂದಿದ್ದಾರೆ ಅನೇಕರು. ಭಾವಚಿತ್ರವೆನ್ನುವುದರ ನಿಜವಾದ ಅರ್ಥವನ್ನು ಇದು ಪಡೆದುಕೊಂಡಿದೆ ಎಂದಿದ್ದಾರೆ.

ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್ ಸಿಂಗ್

ಬ್ರಿಲಿಯಂಟ್​ ಆರ್ಟ್ ಎಂದಿದ್ದಾರೆ ಒಬ್ಬರು. ಮೇಧಾವಿ ಕಲಾವಿದ ಎಂದಿದ್ದಾರೆ ಇನ್ನೊಬ್ಬರು. ಇಷ್ಟು ಪರ್ಫೆಕ್ಟ್ ಆಗಿ ಹೇಗೆ ರೂಪಿಸಿದಿರಿ, ನೀವು ಅಸಾಮಾನ್ಯ ಪ್ರತಿಭಾವಂತರು ಎಂದಿದ್ದಾರೆ ಮತ್ತೊಬ್ಬರು. ನಿಮ್ಮಷ್ಟಕ್ಕೆ ನೀವೇ ಈ ಕಲೆಯನ್ನು ಕಲಿತಿರೋ ಹೇಗೆ? ಎಂದು ಕೇಳಿದ್ದಾರೆ ಮಗದೊಬ್ಬರು. ಈ ಹಾಡನ್ನು ಕೇಳಿ ಸುಶಾಂತ್ ಸಿಂಗ್​ ನೆನಪಾದರು ಎಂದಿದ್ದಾರೆ ಇನ್ನೊಬ್ಬರು. ಅನೇಕರು ಸುಶಾಂತ್​ ಸಿಂಗ್​ನನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ : Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ

ನೀವು ಸುಶಾಂತ್ ಸಿಂಗರನ್ನು ರಚಿಸುತ್ತೀರಿ ಎಂದುಕೊಂಡಿದ್ದೆ ಈ ಹಾಡು ಕೇಳಿ ಎಂದಿದ್ದಾರೆ ಒಬ್ಬರು. ನಾನು ಅರಿಜೀತ್​ ಮತ್ತು ಸುಶಾಂತ್​ನ ದೊಡ್ಡ ಫ್ಯಾನ್​ ಎಂದಿದ್ದಾರೆ ಕೆಲವರು. ಅನೇಕರು ಸುಶಾಂತ್ ಸಿಂಗ್​ನನ್ನು ಬಹಳೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಚಿತ್ರವನ್ನೂ ನೀವು ಹೀಗೆ ನೆರಳು ಬೆಳಕಿನಲ್ಲಿ ಹೊಮ್ಮಿಸಿ ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:52 am, Sat, 16 September 23

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!