AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ

Arijit Singh: ಬಣ್ಣದಲ್ಲಿ, ರಂಗೋಲಿಯಲ್ಲಿ, ಕಲ್ಲಿನಲ್ಲಿ, ಕಟ್ಟಿಗೆಯಲ್ಲಿ, ಸಿಮೆಂಟಿನಲ್ಲಿ ಹೀಗೆ ತಮ್ಮ ನೆಚ್ಚಿನ ಕಲಾವಿದರನ್ನು ಅನೇಕರು ಅರಳಿಸುತ್ತಾರೆ. ಆದರೆ ನೆರಳು ಬೆಳಕಿನಲ್ಲಿ? ಇಲ್ಲೊಬ್ಬ ಕಲಾವಿದರು ಗಾಯಕ ಅರಿಜೀತ್ ಸಿಂಗ್​ರನ್ನು ಹೊಮ್ಮಿಸಿದ್ದಾರೆ. ಈ ವಿಡಿಯೋಗೆ ಸುಶಾಂತ್​ ನಟಿಸಿದ ಮತ್ತು ಅರಿಜೀತ್ ಹಾಡಿದ ಹಾಡಿನ ಹಿನ್ನೆಲೆ ಇದೆ. ನೆಟ್ಟಿಗರು ಸುಶಾಂತನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ
ಶಿಂಟು ಮೌರ್ಯ ನೆರಳಿನೊಳಗೆ ಅರಳಿಸಿದ ಅರಿಜಿತ್​ ಸಿಂಘ್
ಶ್ರೀದೇವಿ ಕಳಸದ
|

Updated on:Sep 16, 2023 | 10:54 AM

Share

Shadow Portrait: ತಮ್ಮ ನೆಚ್ಚಿನ ಕಲಾವಿದರನ್ನು, ವ್ಯಕ್ತಿಗಳನ್ನು ಕಲಾವಿದರು ಪೋರ್ಟ್ರೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿಯ (Virat Kohli) ಅಭಿಮಾನಿ ಕಲಾವಿದರು ನಾಲಗೆಯಿಂದ ಪೇಂಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ಗಾಯಕ ಅರಿಜೀತ್ ಸಿಂಗ್ (Arijit Singh)​ ಅಭಿಮಾನಿಯೊಬ್ಬರು ನೆರಳು ಬೆಳಕಿನಲ್ಲಿ ಅರಿಜೀತ್​ ಪೋರ್ಟ್ರೇಟ್​ ಅರಳಿಸಿ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಕಲಾವಿದ ಶಿಂಟು ಮೌರ್ಯ ಪ್ರತಿಭೆ ಮತ್ತು ಆಸ್ಥೆಯನ್ನು ಮೆಚ್ಚಿದ ನೆಟ್ಟಿಗರು ಅಭಿಮಾನದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ‘ಕೊನೆಯತನಕ ಈ ವಿಡಿಯೋ ನೋಡಿ’ ಎಂದು ಶಿಂಟು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಗೋಡೆಯ ಮೇಲೆ ಅರಿಜೀತ್​ ಮೂಡುವ ಪರಿ ಅನನ್ಯವಾಗಿದೆ.

ಇದನ್ನೂ ಓದಿ : Viral: ಅಮೆರಿಕ; ಮುದ್ದುಗಳಿವೆ ಎಚ್ಚರಿಕೆ! ಅಳಿವಿನಂಚಿನಲ್ಲಿರುವ 6 ಕೊಮೊಡೊ ಡ್ರ್ಯಾಗನ್​ ಮರಿಗಳ ಜನನ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆ. 17 ರಂದು ಈ ಪೋಸ್ಟ್ ಮಾಡಲಾಗಿದ್ದು, ಈತನಕ ಸುಮಾರು 30 ಮಿಲಿಯನ್​ ಜನರು ನೋಡಿದ್ದಾರೆ. 3.2 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ. ಇದ ಅತ್ಯದ್ಭುತವಾಗಿದೆ. ನಿಮ್ಮ ತಾಳ್ಮೆಗೆ ಸಲಾಂ ಎಂದಿದ್ದಾರೆ ಅನೇಕರು. ಭಾವಚಿತ್ರವೆನ್ನುವುದರ ನಿಜವಾದ ಅರ್ಥವನ್ನು ಇದು ಪಡೆದುಕೊಂಡಿದೆ ಎಂದಿದ್ದಾರೆ.

ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್ ಸಿಂಗ್

ಬ್ರಿಲಿಯಂಟ್​ ಆರ್ಟ್ ಎಂದಿದ್ದಾರೆ ಒಬ್ಬರು. ಮೇಧಾವಿ ಕಲಾವಿದ ಎಂದಿದ್ದಾರೆ ಇನ್ನೊಬ್ಬರು. ಇಷ್ಟು ಪರ್ಫೆಕ್ಟ್ ಆಗಿ ಹೇಗೆ ರೂಪಿಸಿದಿರಿ, ನೀವು ಅಸಾಮಾನ್ಯ ಪ್ರತಿಭಾವಂತರು ಎಂದಿದ್ದಾರೆ ಮತ್ತೊಬ್ಬರು. ನಿಮ್ಮಷ್ಟಕ್ಕೆ ನೀವೇ ಈ ಕಲೆಯನ್ನು ಕಲಿತಿರೋ ಹೇಗೆ? ಎಂದು ಕೇಳಿದ್ದಾರೆ ಮಗದೊಬ್ಬರು. ಈ ಹಾಡನ್ನು ಕೇಳಿ ಸುಶಾಂತ್ ಸಿಂಗ್​ ನೆನಪಾದರು ಎಂದಿದ್ದಾರೆ ಇನ್ನೊಬ್ಬರು. ಅನೇಕರು ಸುಶಾಂತ್​ ಸಿಂಗ್​ನನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ : Viral Video: ಹೊಗೆ ಹೊಮ್ಮಿಸುವ ಶಿಲೀಂಧ್ರ? ನೆಟ್ಟಿಗರಲ್ಲಿ ಕುತೂಹಲ ಕೆರಳಿಸಿದ ಈ ವಿಡಿಯೋ

ನೀವು ಸುಶಾಂತ್ ಸಿಂಗರನ್ನು ರಚಿಸುತ್ತೀರಿ ಎಂದುಕೊಂಡಿದ್ದೆ ಈ ಹಾಡು ಕೇಳಿ ಎಂದಿದ್ದಾರೆ ಒಬ್ಬರು. ನಾನು ಅರಿಜೀತ್​ ಮತ್ತು ಸುಶಾಂತ್​ನ ದೊಡ್ಡ ಫ್ಯಾನ್​ ಎಂದಿದ್ದಾರೆ ಕೆಲವರು. ಅನೇಕರು ಸುಶಾಂತ್ ಸಿಂಗ್​ನನ್ನು ಬಹಳೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಚಿತ್ರವನ್ನೂ ನೀವು ಹೀಗೆ ನೆರಳು ಬೆಳಕಿನಲ್ಲಿ ಹೊಮ್ಮಿಸಿ ಎಂದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:52 am, Sat, 16 September 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?