Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮೂವರು ಬಾಲಕಿಯರು ಕೃಷ್ಣಾ ಎಂದಾಗಲೇ ದುಃಖ ಉಮ್ಮಳಿಸುವುದು ಏಕೆ?

Music : ಮೊದಲ ಮಗು ಕ್ರಿಶ್ಚಿಯನ್​, ಎರಡನೇ ಮಗು ಮುಸಲ್ಮಾನ್​, ಮೂರನೇ ಮಗು ಹಿಂದೂ. ಮೂವರೂ ಕೃಷ್ಣನ ಕುರಿತಾದ ಹಾಡನ್ನು ಬೇರೆ ಬೇರೆ ವಾಹಿನಿಗಳ ರಿಯಾಲಿಟಿ ಷೋನಲ್ಲಿ ಹಾಡಿದ್ದಾರೆ. ವಿಡಿಯೋ ನೋಡಿ.

ಈ ಮೂವರು ಬಾಲಕಿಯರು ಕೃಷ್ಣಾ ಎಂದಾಗಲೇ ದುಃಖ ಉಮ್ಮಳಿಸುವುದು ಏಕೆ?
ಕೃಷ್ಣನ ಕುರಿತಾದ ಒಂದೇ ಹಾಡನ್ನು ಬೇರೆಬೇರೆ ವಾಹಿನಿಗಳಲ್ಲಿ ಹಾಡುತ್ತಿರುವ ಕ್ರಿಶ್ಚಿಯನ್​, ಮುಸ್ಲಿಮ್​ ಮತ್ತು ಹಿಂದೂ ಬಾಲಕಿಯರು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 09, 2023 | 4:57 PM

Viral Video : ದೇವರು ಎಂದರೆ ಕಣ್ಣಿಗೆ ಕಾಣುವ ದೇವರಲ್ಲ. ಅಂತರಂಗದ ದೇವರು. ಆ ದೇವರನ್ನು ಸ್ಪರ್ಶಿಸಲು ಕಲೆಯ ಸಹಾಯ ಬೇಕು. ಅದಕ್ಕಾಗಿ ನಾಲಗೆಯ ಮೇಲೆ ಈಶ್ವರ, ಅಲ್ಲಾಹ್​, ಏಸು ಹೀಗೆ ಯಾರ ನಾಮವೂ ನಲಿದಾಡಬಹುದು. ಹಾಗಾಗಿ ಅಮೂರ್ತವಾದುದನ್ನು ಮೂರ್ತರೂಪಗೊಳಿಸಲು ಸಾಹಿತ್ಯದ ಸಹಾಯ ಬೇಕು. ಭಕ್ತಿ ಭಾವದೊಳಗೆ ಅದನ್ನು ಶ್ರುತಿಗೊಳಿಸಿ ಅಂತರಂಗದೊಂದಿಗೆ ತಾದಾತ್ಮ್ಯ ಸಾಧಿಸಲು ಸಂಗೀತ ಬೇಕು. ಯಾವ ಭಾಷೆಯಾದರೇನು, ಯಾವ ದೇಶವಾದರೇನು, ಯಾವ ಧರ್ಮವಾದರೇನು, ಯಾವ ಮತಪಂಥವಾದರೇನು? ಕೇಳುಗರ ಎದೆಯನ್ನು ಮೃದುಗೊಳಿಸಿದರೆ ಅದೇ ಕಲಾವಿದರ, ಕಲೆಯ ಸಾರ್ಥಕತೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮೂವರು ಪುಟಾಣಿಗಳು ಒಂದೇ ಹಾಡನ್ನು ಬೇರೆ ಬೇರೆ ವಾಹಿನಿಯ ರಿಯಾಲಿಟಿ ಷೋಗಳಲ್ಲಿ ಹಾಡಿದ್ದಾರೆ.

ಮೂವರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರು. ಮೊದಲ ಮಗು ಕ್ರಿಶ್ಚಿಯನ್​, ಎರಡನೇ ಮಗು ಮುಸಲ್ಮಾನ್​, ಮೂರನೇಯ ಮಗು ಹಿಂದೂ. ಮೂವರೂ ಕೃಷ್ಣನ ಕುರಿತಾದ ಹಾಡನ್ನು ಹಾಡಿದ್ದಾರೆ. ಹಾಡುತ್ತ ಹಾಡುತ್ತ ತಾರಕ ಸ್ಥಾಯಿಯಲ್ಲಿ ಕೊನೆಯ ಸ್ವರದ (ಷಡ್ಜದ) ಮೇಲೆ ಕೃಷ್ಣಾ ಎಂದು ವಿರಮಿಸಿದಾಗ ಮೂವರಿಗೂ ದುಃಖ ಉಮ್ಮಳಿಸಿ ಬರುತ್ತದೆ. ಕೇಳಿದ ಯಾರಿಗೂ ಇದು ಭಾವುಕರನ್ನಾಗಿ ಮಾಡದೇ ಇರದು. ಹಾಗೇ ಹಾಡಿದವರಿಗೂ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಪಾರ್ಕಿನ್ಸನ್ಸ್​ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್

ಇಷ್ಟು ಪುಟ್ಟ ವಯಸ್ಸಿನಲ್ಲಿ ಎಲ್ಲ ಸ್ಥಾಯಿಗಳಲ್ಲೂ ಇಷ್ಟೊಂದು ಶ್ರುತಿ, ಲಯ, ಭಾವಪೂರ್ಣವಾಗಿ ಹಾಡುವುದನ್ನು ಕೇಳಿದಾಗ ಮೈನವಿರೇಳದೇ ಇರದು. ಆದರೆ, ತಾಂತ್ರಿಕವಾಗಿ ಗಮನಿಸಿದಾಗ, ಯಾವ ಶ್ರುತಿಯಿಂದ ಹಾಡನ್ನು ಆರಂಭಿಸಿದ್ದರೋ ಅದೇ ಶ್ರುತಿಗೆ ಮರಳುವಲ್ಲಿ ಮೂವರು ಮಕ್ಕಳಿಗೂ ಗೊಂದಲವಾಗಿದೆ, ಶ್ರುತಿ ತಪ್ಪಿದೆ. ಆ ಅಳುಕು, ಆತಂಕ ಬಿಕ್ಕುವಂತೆ ಮಾಡಿದೆ. ಏಕೆಂದರೆ ಇದು ಕಷ್ಟಕರವಾದ ಸಂಯೋಜನೆ. ಆದರೆ ಒಟ್ಟಾರೆಯಾಗಿ ಹಾಡನ್ನು ಕೇಳಿದಾಗ ಎಲ್ಲ ತಾಂತ್ರಿಕಾಂಶಗಳನ್ನು ಬಿಟ್ಟು ಭಾವವೊಂದೇ ಅನುರಣಿಸುತ್ತದೆ. ಈ ಮೂಲಕ ಕೇಳುಗರನ್ನು ಇದು ಹಿಡಿದಿಡುತ್ತದೆ.

ಕಲೆಗೆ ಯಾವ ಧರ್ಮ? ಅದು ಪ್ರತಿಯೊಬ್ಬರನ್ನೂ ಒಳಗೊಳ್ಳಲಿ. ಒಳಗೊಳ್ಳುವಂಥ ಅವಕಾಶಗಳು ಎಲ್ಲರಿಗೂ ಸಿಗಲಿ. ಅಲ್ಲಿ ಖಂಡಿತ ದೇವರು ನೆಲೆಗೊಳ್ಳುತ್ತಾನೆ. ದೇವರು ನೆಲೆಗೊಂಡಲ್ಲಿ ಹೃದಯವೇ ಆದ್ಯ. ಇದಕ್ಕೆ ಈ ಮೂವರು ಮಕ್ಕಳೇ ಸಾಕ್ಷಿ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Mon, 9 January 23

ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ