AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ದೋಸೆ ಪ್ಲೇಟ್​ ಒಂದೇ ಕೈಯಲ್ಲಿ; ವಿದ್ಯಾರ್ಥಿ ಭವನದ ಸರ್ವರ್ ಕೌಶಲಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ

Masala Dosa : ಸರ್ವರ್ ಕೌಶಲವನ್ನು ಮೆಚ್ಚುವಂಥದ್ಧೇ. ಆದರೆ ಒಂದರ ಮೇಲೊಂದು ಪ್ಲೇಟ್​ ಇಟ್ಟಾಗ ದೋಸೆ ಶುಚಿಯಾಗಿರುತ್ತವೆಯೇ? ಎಂದು ಕೇಳಿದ್ಧಾರೆ ಕೆಲವರು. ಇನ್ನೂ ಕೆಲವರು ಅದ್ಭುತ ಎಂದಿದ್ದಾರೆ.

16 ದೋಸೆ ಪ್ಲೇಟ್​ ಒಂದೇ ಕೈಯಲ್ಲಿ; ವಿದ್ಯಾರ್ಥಿ ಭವನದ ಸರ್ವರ್ ಕೌಶಲಕ್ಕೆ ಆನಂದ ಮಹೀಂದ್ರಾ ಮೆಚ್ಚುಗೆ
ವಿದ್ಯಾರ್ಥಿ ಭವನದ ದೋಸೆ
Follow us
ಶ್ರೀದೇವಿ ಕಳಸದ
|

Updated on: Feb 01, 2023 | 4:05 PM

Viral News : ಕೆಲಸವನ್ನು ಕೆಲಸವಂತಷ್ಟೇ ಮಾಡಿದರೆ ಇದೆಲ್ಲ ಸಾಧ್ಯವಾಗದು. ಕೆಲಸದ ಬಗ್ಗೆ ಪ್ರೀತಿ ಇದ್ಧಾಗ ಕೌಶಲ ತಂತಾನೇ ಹುಟ್ಟಿಕೊಳ್ಳುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಸರ್ವರ್​ 16 ದೋಸೆಯ ಪ್ಲೇಟ್​ಗಳನ್ನು ಬ್ಯಾಲೆನ್ಸ್​ ಮಾಡುವ ರೀತಿ ನೋಡಿದ ಯಾರಿಗೂ ಅಚ್ಚರಿ ಮೂಡಿಸುತ್ತದೆ. ಆನಂದ ಮಹೀಂದ್ರಾ ಈತನ ಕೌಶಲಕ್ಕೆ ಮಾರುಹೋಗಿ ಈ ಟ್ವೀಟ್​ ಮಾಡಿದ್ದಾರೆ.

ಹೋಟೆಲುಗಳಿಗೆ ಹೋದಾಗ ನೀವು ಗಮನಿಸಿರುತ್ತೀರಿ. ಹತ್ತು ಜನ ಸರ್ವರ್​​ಗಳಲ್ಲಿ ಒಬ್ಬರಾದರೂ ನಿಮ್ಮ ಗಮನ ಸೆಳೆದಿರುತ್ತಾರೆ. ತಿಂಡಿಗಳ ಲಿಸ್ಟ್ ಹೇಳುವ ರೀತಿ ಇರಬಹುದು. ಅಡುಗೆಮನೆಗೆ ಆರ್ಡರ್​ ಮಾಡುವ ರೀತಿ ಇರಬಹುದು ಹೀಗೆ. ಆದರೆ 16 ದೋಸೆ ತಟ್ಟೆಗಳನ್ನು ಹೀಗೆ ಒಂದೇ ಏಟಿಗೆ ತಂದು ಗ್ರಾಹಕರಿಗೆ ಕೊಡುವುದೆಂದರೆ? ಆಶ್ಚರ್ಯವೇ ತಾನೆ?

ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಈ ವಿಡಿಯೋ ಅನ್ನು ಈಗಾಗಲೇ 1.5 ಮಿಲಿಯನ್​ ಜನರು ನೋಡಿದ್ದಾರೆ. ಸರ್ವರ್​​ಗಳು ಹುಟ್ಟಿನಿಂದಲೇ ಎಂಜಿನಿಯರ್​ ಸರ್​. ಅವರಿಗೆ ಅರಿವಿಲ್ಲದೆಯೇ ವಿಜ್ಞಾನ ಅವರೊಳಗೆ ಇಳಿದಿರುತ್ತದೆ. ಸುಡುವ ತಟ್ಟೆಗಳನ್ನು ನಿಭಾಯಿಸುವುದು ಅವರಿಗೆ ಗೊತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಬಹುಶಃ ದೇವರು ಇವನಿಗೆಂದೇ ಉದ್ದನೆಯ ಕೈಗಳನ್ನು ರೂಪಿಸಿರಬಹುದು ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ಎಲ್ಲವನ್ನೂ ಮಾರಿದ! ದೊಡ್ಡ ವಾಟರ್ ಟ್ಯಾಂಕೊಂದನ್ನು ಐಷಾರಾಮಿ ಮನೆಯನ್ನಾಗಿಸಲು

ಇವರ ಕೌಶಲ ತಂತ್ರವ ಎಲ್ಲವೂ ಮೆಚ್ಚುವಂಥದ್ದು. ಆದರೆ ಒಂದರ ಮೇಲೊಂದ ಪ್ಲೇಟ್​ ಇಟ್ಟಾಗ ದೋಸೆ ಶುಚಿಯಾಗಿರುತ್ತದೆ ಎನ್ನಲು ಏನು ಗ್ಯಾರಂಟಿ ಎಂದು ಕೇಳಿದ್ದಾರೆ ಮತ್ತೊಬ್ಬರು. ಓಹೋ ಇದು ಬೆಂಗಳೂರಿನ ಗಾಂಧೀಬಜಾರ್​ದಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್
ಕುಮಾರಸ್ವಾಮಿ ಒಬ್ಬ ಹಿಟ್ ಅಂಡ್ ರನ್ ಗಿರಾಕಿ: ಡಿಕೆ ಸುರೇಶ್