Viral Video: ಬೆಂಗಳೂರು; ‘ಬೆಳಗ್ಗೆಯಿಂದ ಗೂಂಡಾಗಿರಿ ನಡೆಯುತ್ತಿದೆ, ಏನು ಮಾಡುತ್ತಿದ್ದೀರಿ ಪೊಲೀಸರೇ?’

Hooliganism: ದಾರಿ ಅಡ್ಡಗಟ್ಟಿ ದ್ವಿಚಕ್ರವಾಹನ ಸವಾರನ ತಲೆಯ ಮೇಲೆ ಮೊಟ್ಟೆಯೊಡೆಯುವ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ಬೆಂಗಳೂರು ಸಿಟಿ ಪೊಲೀಸ್​, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ ಅವರಿಗೆ ಇದನ್ನು ಟ್ಯಾಗ್ ಮಾಡಿ ಇಂಥವರ ವಿರುದ್ಧ ಕ್ರಮ ಕೈಗೊಳ್ಳಿ ಇಲ್ಲವಾದಲ್ಲಿ ನಗರದಲ್ಲಿ ಗೂಂಡಾಗಿರಿ ಹೆಚ್ಚುತ್ತದೆ ಎಂದು ಈ ಪೋಸ್ಟ್​ನಲ್ಲಿ ಹೇಳಲಾಗಿದೆ. ಮುಂದೇನಾಗುತ್ತದೆ? ಓದಿ.

Viral Video: ಬೆಂಗಳೂರು; 'ಬೆಳಗ್ಗೆಯಿಂದ ಗೂಂಡಾಗಿರಿ ನಡೆಯುತ್ತಿದೆ, ಏನು ಮಾಡುತ್ತಿದ್ದೀರಿ ಪೊಲೀಸರೇ?'
ದ್ವಿಚಕ್ರವಾಹನದ ಮೇಲೆ ಬಂದ ವ್ಯಕ್ತಿಯ ತಲೆಗೆ ಮೊಟ್ಟೆ ಒಡೆದು ಬೆದರಿಸುತ್ತಿರುವ ದುಷ್ಕರ್ಮಿ
Follow us
|

Updated on:Sep 13, 2023 | 10:39 AM

Bengaluru : ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯನ್ನು ಈ ಮೂರು ನಾಲ್ಕು ವ್ಯಕ್ತಿಗಳು ತಡೆಯುತ್ತಾರೆ. ಅವನ ಹೆಲ್ಮೆಟ್​ ತೆಗೆಸಿ ತಲೆಯ ಮೇಲೆ ಮೊಟ್ಟೆ ಒಡೆಯುತ್ತಾರೆ. ಅವನೊಂದಿಗೆ ಮಾತಿಗಳಿಯುತ್ತಲೇ ಅವನ ದ್ವಿಚಕ್ರವಾಹನಕ್ಕೆ ಮೊಟ್ಟೆಗಳನ್ನು ಎಸೆಯುತ್ತಾರೆ. ಅವನು ಮೊಬೈಲ್​ ಕೈಗೆ ಎತ್ತಿಕೊಂಡಾಗ ಅವ ಹ್ಯಾಂಡ್ಸ್​ಫ್ರೀ ಕಿತ್ತುಕೊಳ್ಳುತ್ತಾರೆ. ‘ಇಂದು ಬೆಳಗ್ಗೆಯಿಂದ ನಗರದೊಳಗೆ ಒಂದೇಸಮ ಗೂಂಡಾಗಿರಿ ನಡೆಯುತ್ತಿದೆ. ಪೊಲೀಸರೇ ಏನು ಮಾಡುತ್ತಿದ್ದೀರಿ ನೀವು? ‘ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಅನ್ನು X ನ @freedomlore1 ಎನ್ನುವ ಖಾತೆಯಲ್ಲಿ ಸೆ. 11ರಂದು ಪೋಸ್ಟ್ ಮಾಡಲಾಗಿದೆ.

ಈ ವ್ಯಕ್ತಿಯ ಮೊಬೈಲ್​ ಸಂಖ್ಯೆ ಮತ್ತು ಈ ಘಟನೆ ನಡೆದ ನಿಖರವಾದ ಸ್ಥಳ ಮತ್ತಿತರೇ ವಿವರಗಳನ್ನು ಮೆಸೇಜ್ ಮಾಡಿ ಎಂದು ಈ ಪೋಸ್ಟ್​ನಡಿ ಪ್ರತಿಕ್ರಿಯಿಸಿದ್ದಾರೆ ಬೆಂಗಳೂರು ಸಿಟಿ ಪೊಲೀಸರು. ಅದಕ್ಕೆ ಪ್ರತಿಯಾಗಿ @freedomlore1, ‘ಸರ್, ನೀವು ನನ್ನ ಬಳಿ ಸ್ಥಳ, ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕೇಳುತ್ತಿರುವುದು ವಿಚಿತ್ರವೆನ್ನಿಸುತ್ತಿದೆ. ಈ ವಿಡಿಯೋದ ಮೂಲವನ್ನು ಇಲಾಖೆಯ ಮೂಲಕ ಕಂಡುಹಿಡಿಯಲಾಗುತ್ತಿಲ್ಲವೆ? ನಾನೊಬ್ಬ ಸಾಮಾನ್ಯ ಪ್ರಜೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನನ್ನ ಬಳಿ ಇದೆ ಅಷ್ಟೇ. ಈ ವಿಡಿಯೋದ ಸ್ಥಳವನ್ನು ಎರಡೇ ನಿಮಿಷಗಳಲ್ಲಿ ನಾನು ಕಂಡುಹಿಡಿಯಬಲ್ಲೆ. ಹಾಗಾದರೆ ನೀವು ಏನು ಮಾಡುತ್ತೀರಿ? ಇಂಥ ಪೊಲೀಸ್​ ವ್ಯವಸ್ಥೆಯಿಂದ ಏನು ಪ್ರಯೋಜನ ಎಂದು ಕೇಳಿದ್ದಾರೆ.’

ಇದನ್ನೂ ಓದಿ : Viral Video: ತನ್ನ ನಾಲಗೆಯಿಂದ ವಿರಾಟ ಕೊಹ್ಲಿಯನ್ನು ಚಿತ್ರಿಸಿದ ಅಭಿಮಾನಿಯ ವಿಡಿಯೋ ವೈರಲ್ 

ಈ ವಿಡಿಯೋ ಬಾಗಲಕುಂಟೆ ಮಂಜುನಾಥ ಲೇಔಟ್​ನದ್ದು. ಇಂಥವರು ನಗರದಲ್ಲಿರುವ ಸೌಹಾರ್ದತೆಗೆ ಭಂಗ ತರುತ್ತಿರುವುದು ನಾಚಿಕೆಗೇಡಿನ ಸಂಗತಿ. ದಯವಿಟ್ಟು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು @freedomlore1 ಹೇಳಿದ್ದಾರೆ. ವಿಐಪಿಗಳನ್ನು ಹೊರತುಪಡಿಸಿ ಉಳಿದ ನಾಗರಿಕರೆಲ್ಲ ಪೊಲೀಸರ ಸೇವಕರು ಎಂದಿದ್ದಾರೆ ಒಬ್ಬರು. ಈ ವ್ಯಕ್ತಿಯ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಂಡಿದ್ದು, ಎಫ್​ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು @freedomlore1 ಹೇಳಿದ್ದಾರೆ. ಹಾಗಿದ್ದರೆ ಆ ವ್ಯಕ್ತಿ ಯಾರು ಅವನ ವಿವರಗಳನ್ನು ನೀಡಿ ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Video: ‘ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ’ ಸಮೃದ್ಧಿ ಮಲ್ಹೋತ್ರಾ

ಮಾರತ್ತಹಳ್ಳಿಯ ಕಡೆ ಇತರೇ ರಾಜ್ಯದ ಜನರು ಕುಡಿದು, ಗಾಂಜಾ, ಮಾದಕ ದ್ರವ್ಯ ಸೇವಿಸಿದಾಗ ಸ್ಥಳೀಯ ರೌಡಿಗಳು  ದಾಳಿ ಮಾಡುತ್ತಾರೆ. ಆದರೆ ಈ ಬಗ್ಗೆ ಸ್ಥಳೀಯ ಪೊಲೀಸರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಮತ್ತೊಬ್ಬರು. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಗರ ಪೊಲೀಸ್ ಆಯುಕ್ತರು ವಿಫಲರಾಗಿದ್ದಾರೆ, ಅವರು ರಾಜೀನಾಮೆ ನೀಡಬೇಕು ಎಂದಿದ್ದಾರೆ ಇನ್ನೊಬ್ಬರು. ಕರ್ನಾಟಕದಲ್ಲಿರುವ ಗೂಂಡಾರಾಜ್​ ತೊಲಿಗಿಸಲು ಯೋಗಿ ಬೇಕು! ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:37 am, Wed, 13 September 23