AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ದಿನಕ್ಕೆ ‌ 8 ಗಂಟೆಗಳ ಕಾಲ ನಿದ್ದೆ ಮಾಡುತ್ತಾ 10 ಲಕ್ಷ ಹಣ ಸಂಪಾದಿಸುವ ಅವಕಾಶ; ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ

ನಮ್ಮಲ್ಲಿ ಹಲವರಿಗೆ ಹಗಲು ರಾತ್ರಿ ಮಲಗುವುದೆಂದರೇ ಬಲು ಇಷ್ಟ. ದಿನಕ್ಕೆ 8 ಗಂಟೆಯಲ್ಲ, 11-12 ಗಂಟೆ ನಿದ್ರೆ ಮಾಡುವವರೂ ಇದ್ದಾರೆ. ಅಯ್ಯೋ ನಿದ್ದೆ ಮಾಡುವುದೇ ಒಂದು ಕೆಲಸವಾಗಿದ್ದರೆ ಎಷ್ಟು ಚೆನ್ನಾಗಿರೋದು ಅಲ್ವಾ ಅಂತಾ ಹಲವರು ಅಂದುಕೊಳ್ಳುತ್ತಿರುತ್ತಾರೆ. ಇದೀಗ ಇಲ್ಲೊಂದು ಕಂಪೆನಿ ಇಂತಹದೊಂದು ಡ್ರೀಮ್‌ ಜಾಬ್‌ ಆಫರ್‌ ನೀಡಿದ್ದು, ದಿನಕ್ಕೆ 8 ಗಂಟೆಗಳ ಕಾಲ ಮಲಗಿ, 10 ಲಕ್ಷ ಸಂಪಾದಿಸುವ ಅವಕಾಶವನ್ನು ನೀಡಿದೆ. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

Viral: ದಿನಕ್ಕೆ ‌ 8 ಗಂಟೆಗಳ ಕಾಲ  ನಿದ್ದೆ  ಮಾಡುತ್ತಾ 10 ಲಕ್ಷ ಹಣ ಸಂಪಾದಿಸುವ  ಅವಕಾಶ;  ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ
ಮಾಲಾಶ್ರೀ ಅಂಚನ್​
| Edited By: |

Updated on: Sep 05, 2024 | 3:07 PM

Share

ಈ ಪ್ರಪಂಚದಲ್ಲಿ ಹಲವಾರು ಉದ್ಯೋಗಗಳಿವೆ. ಅದರಲ್ಲಿ ಕೆಲವೊಂದು ಕೆಲಸಗಾರರಿಗೆ ಒಳ್ಳೊಳ್ಳೆ ಫೆಸಿಲಿಟಿಯನ್ನು ಒದಗಿಸಿಕೊಟ್ರೆ, ಕೆಲವೊಂದು ಉದ್ಯೋಗಗಳು ಕೆಲಸಗಾರರ ಪ್ರಾಣಕ್ಕೆ ಕುತ್ತು ತರುವಂತಿರುತ್ತವೆ. ಈ ಮಧ್ಯೆ ಈಗೀಗ ಚಿತ್ರ ವಿಚಿತ್ರ ಉದ್ಯೋಗಗಳು ಕೂಡಾ ಸೃಷ್ಟಿಯಾಗಿವೆ. ಹೌದು ಆಹಾರ ಸವಿದು ಅದರ ರುಚಿ ಹೇಳುವ, ಚಪ್ಪಲಿ ಧರಿಸುವ ಮೂಲಕ ಅಭಿಪ್ರಾಯ ತಿಳಿಸುವ, ಅಷ್ಟೇ ಏಕೆ ಕೈ ತುಂಬಾ ಸಂಬಳ ಪಡೆದು ಸೊಳ್ಳೆಯಿಂದ ಕಡಿಸಿಕೊಳ್ಳುವ ಉದ್ಯೋಗವೂ ಇವೆ. ಈ ಎಲ್ಲಾ ಉದ್ಯೋಗಗಳ ಬಗ್ಗೆ ಕೇಳಿದಾಗ ಶಾಕ್‌ ಆಗುವುದಂತೂ ಖಂಡಿತ. ಇದೀಗ ಇಲ್ಲೊಂದು ಕಂಪೆನಿ ಕೂಡಾ ಹೆಚ್ಚಿನವರಿಗೆ ಬಹಳ ಇಷ್ಟ ಪಟ್ಟು ಮಾಡುವ ಡ್ರೀಮ್‌ ಜಾಬ್‌ ಆಫರ್‌ ಅನ್ನು ನೀಡಿದೆ. ಹೌದು ದಿನಕ್ಕೆ 8 ಗಂಟೆಗಳ ಕಾಲ ಮಲಗಿ, 10 ಲಕ್ಷ ಸಂಪಾದಿಸುವ ಅವಕಾಶವನ್ನು ನೀಡಿದ್ದು, ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಕಂಪೆನಿ ವೇಕ್‌ಫಿಟ್‌ ಈ ಭರ್ಜರಿ ಜಾಬ್‌ ಆಫರ್‌ ಅನ್ನು ನೀಡಿದೆ. ಈ ಹಾಸಿಗೆ ಕಂಪೆನಿ ಮಲಗುವ ಕೆಲಸವನ್ನು ಸೃಷ್ಟಿಸಿದ್ದು, ವೇಕ್‌ಫಿಟ್‌ ಕಂಪೆನಿ ತಯಾರಿಸುವ ಹಾಸಿಗೆಯಲ್ಲಿ ಮಲಗುವ ಮೂಲಕ ನಿದ್ರೆ ಹೇಗೆ ಬರುತ್ತದೆ ಎಂಬ ಬಗ್ಗೆ ಅಭಿಪ್ರಾಯ ತಿಳಿಸುವುದೇ ಕೆಲಸವಾಗಿದೆ. ಈ ಹಿಂದೆಯೂ ಈ ಕಂಪೆನಿ ಈ ಜಾಬ್‌ ಆಫರ್‌ ನೀಡಿತ್ತು. ಇದೀಗ ನಾಲ್ಕನೇ ಬಾರಿ ʼಸ್ಲೀಪ್‌ ಇಂಟರ್ನ್‌ʼ ಜಾಬ್‌ ಆಫರ್‌ ನೀಡಿದ್ದು, 8 ಗಂಟೆಗಳ ಕಾಲ ಮಲಗುವ ಕೆಲಸಕ್ಕೆ 10 ಲಕ್ಷ ವೇತನ ಪಡೆಯುವ ಅವಕಾಶವನ್ನು ನೀಡಿದೆ. 3 ನೇ ಸೀಸನ್‌ನಲ್ಲಿ ಬೆಂಗಳೂರಿನ ಸಾಯಿಶ್ವರಿ ಪಾಟೀಲ್‌ ಎಂಬವರು ಈ ಉದ್ಯೋಗದಲ್ಲಿ ಗೆದ್ದು 9 ಲಕ್ಷ ರೂ. ಗೆಲ್ಲುವುದರ ಜೊತೆಗೆ ʼದಿ ಸ್ಲೀಪ್‌ ಚಾಂಪಿಯನ್‌ʼ ಎಂಬ ಬಿರುದನ್ನು ಗಳಿಸಿದ್ದರು. ಇದೀಗ ಈ ಕಂಪೆನಿ 8 ಗಂಟೆಗಳ ಕಾಲ ನಿದ್ದೆ ಮಾಡಿ 10 ಲಕ್ಷ ಗೆಲ್ಲುವ ಭರ್ಜರಿ ಆಫರ್‌ ನೀಡಿದೆ.

ಈ ಉದ್ಯೋಗಕ್ಕೆ ಬೇಕಾದ ಅರ್ಹತೆ, ಅಭ್ಯರ್ಥಿ, ಸಂಬಳ, ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ವೇಕ್‌ಫಿಟ್‌ ಲಿಂಕ್ಡ್‌ ಇನ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

  • ಪೋಸ್ಟ್‌ ಹೆಸರು: ಪ್ರೊಫೆಷನಲ್‌ ಸ್ಲೀಪ್‌ ಇಂಟರ್ನ್‌
  • ಕೆಲಸದ ಸ್ಥಳ: ಹಾಸಿಗೆ
  • ಅವಧಿ: 2 ತಿಂಗಳುಗಳು

ಈ ಇಂಟರ್ನ್‌ಶಿಪ್‌ ಅಲ್ಲಿ ಮಾಡಬೇಕಾದ ಕೆಲಸಗಳೇನು?

  • ಪ್ರತಿ ರಾತ್ರಿ 8 ರಿಂದ 9 ಗಂಟೆಗಳ ಕಾಲ ವೇಕ್‌ಫಿಟ್‌ ಹಾಸಿಗೆಯಲ್ಲಿ ಉತ್ತಮ ನಿದ್ರೆಯನ್ನು ಮಾಡುವುದು
  • ಹಗಲು ಹೊತ್ತಿನಲ್ಲಿ 20 ನಿಮಿಷಗಳ ಕಾಲ ಕಿರು ನಿದ್ರೆ (ಪವರ್‌ ನ್ಯಾಪ್)‌ ಮಾಡುವುದು

ಅಭ್ಯರ್ಥಿಯ ಅರ್ಹತೆ:

  • ಪ್ರತಿರಾತ್ರಿ ಒಂದೇ ಸಮಯಕ್ಕೆ ಮಲಗುವವರು ಅರ್ಜಿ ಸಲ್ಲಿಸಬಹುದು.
  • 20 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
  • ಮುಖ್ಯವಾಗಿ ನಿದ್ದೆ ಮಾಡುವುದನ್ನು ಇಷ್ಟಪಡುವವರಾಗಿರಬೇಕು.
  • ಯಾವುದೇ ವಿಭಾದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿಯನ್ನು ಪೂರೈಸಿರಬೇಕು

ಸಂಬಳ:

  • ಆಯ್ದ ಸ್ಲೀಪ್‌ ಇಂಟರ್ನ್‌ಗಳಿಗೆ 1 ಲಕ್ಷ ರೂ. ಸಂಬಳ
  • ವರ್ಷದ ಸ್ಲೀಪ್‌ ಚಾಂಪಿಯನ್‌ ಎಂದು ಗುರುತಿಸಲ್ಪಟ್ಟ ಇಂಟರ್ನ್‌ಗೆ 10 ಲಕ್ಷದ ವರೆಗೆ ಸಂಬಳ ಸಿಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಈ ಉದ್ಯೋಗದಲ್ಲಿಆಸಕ್ತಿಯನ್ನು ಹೊಂದಿದ್ದರೆ ವೇಕ್‌ಫಿಟ್‌ ಅವರ ಅಫೀಶಿಯಲ್‌ ಲಿಂಕ್ಡ್‌ಇನ್‌ ಪುಟದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಿ

https://www.wakefit.co/sleepintern/?srsltid=AfmBOoqgr_0rts2cvbWFWQCYqd_J8aHnxyFDEpYQgwa4IuBsjr0NHc7v

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ