Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದೆಹಲಿ ಮಹಾನಗರದ ಮಧ್ಯದಲ್ಲೇ ಸೃಷ್ಟಿಯಾಯ್ತು ಜಲಪಾತ! ಭಾರೀ ಮಳೆಗೆ ಅಸ್ತವ್ಯಸ್ತವಾಯ್ತು ರಾಷ್ಟ್ರ ರಾಜಧಾನಿ

ಜಲಪಾತಗಳ ನಗರ ದೆಹಲಿಗೆ ಸ್ವಾಗತ ಎಂಬ ತಲೆಬರಹ ನೀಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ನೀರು ರಸ್ತೆಯ ಮೇಲೆ ಧುಮ್ಮಿಕ್ಕುತ್ತಿರುವುದು ಕಾಣಿಸುತ್ತದೆ. ಕೆಲವರು ಅದನ್ನು ದೆಹಲಿಯ ನಯಾಗರ ಜಲಪಾತ ಎಂದೂ ಬಣ್ಣಿಸಿದ್ದಾರೆ. ಅಂದಹಾಗೆ, ಆ ನೀರು ಬೀಳುತ್ತಿರುವುದು ದೆಹಲಿಯ ಫ್ಲೈ ಓವರ್​ ಒಂದರ ಮೇಲಿನಿಂದ.

Viral Video: ದೆಹಲಿ ಮಹಾನಗರದ ಮಧ್ಯದಲ್ಲೇ ಸೃಷ್ಟಿಯಾಯ್ತು ಜಲಪಾತ! ಭಾರೀ ಮಳೆಗೆ ಅಸ್ತವ್ಯಸ್ತವಾಯ್ತು ರಾಷ್ಟ್ರ ರಾಜಧಾನಿ
ವೈರಲ್​ ವಿಡಿಯೋದಲ್ಲಿ ಕಂಡುಬಂದ ದೃಶ್ಯ
Follow us
TV9 Web
| Updated By: Skanda

Updated on: Sep 03, 2021 | 8:11 AM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಸೆಪ್ಟೆಂಬರ್​​ ತಿಂಗಳ ದಿನವೊಂದರಲ್ಲಿ ಅತ್ಯಧಿಕ ಪ್ರಮಾಣದ ಮಳೆಗೆ ದೆಹಲಿ ಸಾಕ್ಷಿಯಾಗಿದೆ. ಬುಧವಾರ (ಸೆಪ್ಟೆಂಬರ್​ 1, 2021) ಬೆಳಗ್ಗೆ 8.30ಕ್ಕೆ ಲಭ್ಯವಾದ ಅಂಕಿ ಅಂಶಗಳ ಪ್ರಕಾರ ದೆಹಲಿಯಲ್ಲಿ 24 ಗಂಟೆಯಲ್ಲಿ 112.1 ಮಿಲಿ ಮೀಟರ್​ ಮಳೆ ಸುರಿದಿದ್ದು, ಜನ ಜೀವನ ಕೂಡಾ ಅಸ್ತವ್ಯಸ್ತವಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಮಾಹಿತಿ ಅನ್ವಯ ದೆಹಲಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಸರಾಸರಿ 125.1 ಮಿಲಿ ಮೀಟರ್​ ಮಳೆ ಸುರಿಯುವ ವಾಡಿಕೆ ಇದೆ. ಆದರೆ, ಈ ಬಾರಿ ಸೆಪ್ಟೆಂಬರ್​ ತಿಂಗಳ ಮೊದಲ ದಿನವೇ ಈ ವಾಡಿಕೆಯ ಶೇ.90ರಷ್ಟು ಪಾಲು ಮಳೆ ಬಂದಿದ್ದು, ಜನ ಸಾಮಾನ್ಯರು ಕಂಗೆಡುವಂತೆ ಮಾಡಿದೆ. ದೆಹಲಿಯಲ್ಲಾಗುವ ಮಳೆಯ ಪ್ರಮಾಣದ ಬಗ್ಗೆ ನಿಖರ ಮಾಹಿತಿ ನೀಡುವ ಸಂಸ್ಥೆಯೊಂದು ಕೂಡಾ ಬುಧವಾರ ಬೆಳಗ್ಗೆ 8.30ಕ್ಕೆ ಮುಕ್ತಾಯವಾಗುವಂತೆ 24 ಗಂಟೆ ಅವಧಿಯಲ್ಲಿ 112.1 ಮಿಲಿ ಮೀಟರ್​ ಮಳೆ ದಾಖಲಾಗಿದೆ ಎಂದು ತಿಳಿಸಿದೆ.

ಸದ್ಯ ದೆಹಲಿಯ ಭಾರೀ ಮಳೆಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ನಗರ ಪ್ರದೇಶಗಳಲ್ಲಿ ನೀರು ಹರಿಯುತ್ತಿರುವುದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿರುವುದು, ವಾಹನ ಪ್ರಯಾಣಿಕರು ನೀರಿನ ನಡುವೆ ಕಷ್ಟಪಟ್ಟು ಸಾಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಪೈಕಿ ಅತ್ಯಂತ ಹೆಚ್ಚು ಗಮನ ಸೆಳೆದ ವಿಡಿಯೋ ಎಂದರೆ ದೆಹಲಿಯ ಜಲಪಾತದ್ದು!

ಅರೆ! ದೆಹಲಿ ನಗರದಲ್ಲಿ ಜಲಪಾತ ಎಲ್ಲಿಂದ ಉದ್ಭವವಾಯ್ತು ಎಂದು ಈ ವಿಡಿಯೋ ನೋಡಿ ಹಲವರು ಉದ್ಘರಿಸಿದ್ದಾರೆ. ಜಲಪಾತಗಳ ನಗರ ದೆಹಲಿಗೆ ಸ್ವಾಗತ ಎಂಬ ತಲೆಬರಹ ನೀಡಿ ಹರಿಬಿಟ್ಟಿರುವ ವಿಡಿಯೋದಲ್ಲಿ ನೀರು ರಸ್ತೆಯ ಮೇಲೆ ಧುಮ್ಮಿಕ್ಕುತ್ತಿರುವುದು ಕಾಣಿಸುತ್ತದೆ. ಕೆಲವರು ಅದನ್ನು ದೆಹಲಿಯ ನಯಾಗರ ಜಲಪಾತ ಎಂದೂ ಬಣ್ಣಿಸಿದ್ದಾರೆ. ಅಂದಹಾಗೆ, ಆ ನೀರು ಬೀಳುತ್ತಿರುವುದು ದೆಹಲಿಯ ಫ್ಲೈ ಓವರ್​ ಒಂದರ ಮೇಲಿನಿಂದ. ಭಾರೀ ಮಳೆಗೆ ಫ್ಲೈ ಓವರ್​ ಮೇಲೆ ಸಂಗ್ರಹವಾದ ನೀರು ಥೇಟ್​ ಜಲಪಾತಗಳು ಧುಮ್ಮಿಕ್ಕುವಂತೆಯೇ ರಸ್ತೆಗೆ ಬೀಳುತ್ತಿದ್ದು, ಕೆಳಗೆ ಹಾದು ಹೋಗುವ ವಾಹನಗಳಿಗೆಲ್ಲಾ ಮಹಾಮಜ್ಜನ ಆಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಭೋರ್ಗರೆದು ಬೀಳುತ್ತಿರುವ ನೀರಿಗೆ ಕಾರೊಂದನ್ನು ನಿಲ್ಲಿಸಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಇನ್ನೊಂದು ಕಾರಿನಲ್ಲಿ ಕುಳಿತವರು ದೃಶ್ಯವನ್ನು ಸೆರೆಹಿಡಿದಿದ್ದಾರೆ. ದೆಹಲಿಯ ಜಲಪಾತವನ್ನು ಕಂಡು ಕಣ್ತುಂಬಿಕೊಳ್ಳಿ ಎಂದು ಟ್ವಿಟರ್​ನಲ್ಲಿ ಆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅದು ಸಾವಿರಾರು ವೀಕ್ಷಕರನ್ನು ಗಳಿಸಿದ್ದು, ಕೆಲವರಂತೂ ಹೀಗೆ ಜಲಪಾತದ ಬುಡಕ್ಕೆ ಕಾರನ್ನು ತೆಗೆದುಕೊಂಡು ಹೋಗುವ ಅದೃಷ್ಟ ಯಾವ ಊರಿನವರಿಗೆ ಸಿಗುತ್ತದೆ ಹೇಳಿ, ಈ ವಿಚಾರದಲ್ಲಿ ದೆಹಲಿಯವರೇ ಲಕ್ಕಿ! ಎಂದು ವ್ಯಂಗ್ಯ ಮಾಡಿದ್ದಾರೆ.

(Waterfall in Delhi city due to Heavy Rain watch the viral video)

ಇದನ್ನೂ ಓದಿ: Karnataka Dams Water Level: ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ 

Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್