Viral Video: 5 ವರ್ಷಗಳ ಬಳಿಕ ಜೈಲಿನಿಂದ ಹೊರ ಬಂದ ಮೊಮ್ಮಗನನ್ನು ಕಂಡು ಅಜ್ಜಿ ಭಾವುಕ

ಅಜ್ಜ-ಅಜ್ಜಿಯಂದಿರಿಗೆ ತಮ್ಮ ಮೊಮ್ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮೊಮ್ಮಕ್ಕಳು ಏನೇ ತಪ್ಪು ಮಾಡಿದ್ರೂ ಅದನ್ನು ಕ್ಷಮಿಸಿ ಪ್ರೀತಿಯಿಂದ ಮುದ್ದಾಡುತ್ತಾರೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಐದು ವರ್ಷಗಳ ಬಳಿಕ ತಿಹಾರ್‌ ಜೈಲಿನಿಂದ ಹೊರ ಬಂದ ಮೊಮ್ಮಗನನ್ನು ಕಂಡು ಆತ ಜೈಲಿಗೆ ಹೋಗಿ ಬಂದವನು ಎಂದು ಕೋಪ ಮಾಡಿಕೊಳ್ಳದೆ, ಅಜ್ಜಿಯು ತನ್ನ ಪ್ರೀತಿಯ ಮೊಮ್ಮಗನ್ನು ಮುದ್ದಾಡಿದ್ದಾರೆ. ಈ ದೃಶ್ಯವನ್ನು ಕಂಡು ಜೈಲಿನಿಂದ ಹೊರ ಬಂದ್ರೂ ವಿಡಿಯೋ ಮಾಡಬೇಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Viral Video: 5 ವರ್ಷಗಳ ಬಳಿಕ ಜೈಲಿನಿಂದ ಹೊರ ಬಂದ ಮೊಮ್ಮಗನನ್ನು ಕಂಡು ಅಜ್ಜಿ ಭಾವುಕ
Edited By:

Updated on: Jun 23, 2024 | 2:31 PM

ಮನೆ ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದ್ರೂ ಸರಿ ಹೆತ್ತವರು ಕೆಂಡಾಮಂಡಲವಾಗುತ್ತಾರೆ. ನಂತರ ಕಠಿಣ ಶಿಕ್ಷೆ ನೀಡಿ ಬೈದು ಬುದ್ಧಿ ಹೇಳುತ್ತಾರೆ. ಆದ್ರೆ ಅಜ್ಜ-ಅಜ್ಜಿಯಂದಿರು ಹಾಗಲ್ಲ, ತಮ್ಮ ಮೊಮ್ಮಕ್ಕಳು ಎಷ್ಟೇ ದೊಡ್ಡ ತಪ್ಪು ಮಾಡಿದ್ರೂ ಸರಿ ಅದನ್ನು ಕ್ಷಮಿಸಿ ನನ್ನ ಮೊಮ್ಮಗ ಮುತ್ತು ರತ್ನ ಎನ್ನುತ್ತಾ ಮೊಮ್ಮಕ್ಕಳನ್ನು ಮುದ್ದಾಡುತ್ತಾರೆ. ಇದೇ ಕಾರಣಕ್ಕೆ ಮೊಮ್ಮಕ್ಕಳಿಗೆ ತಮ್ಮ ಅಜ್ಜ ಅಜ್ಜಿಯರೆಂದರೆ ಪಂಚಪ್ರಾಣ. ಇದೀಗ ಅಜ್ಜಿ-ಮೊಮ್ಮಗನ ಪ್ರೀತಿ ಬಾಂಧವ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದ್ದು, 5 ವರ್ಷಗಳ ಬಳಿಕ ಜೈಲಿನಿಂದ ಮೊಮ್ಮಗನನ್ನು ಕಂಡು ಆತ ಜೈಲಿಗೆ ಹೋಗಿ ಬಂದವನು ಎಂದು ಕೋಪ ಮಾಡಿಕೊಳ್ಳದೆ, ವರ್ಷಗಳ ಬಳಿಕ ಬಂದ ಮೊಮ್ಮಗನ್ನು ಬಿಗಿದಪ್ಪಿ ಮುದ್ದಾಡಿದ್ದಾರೆ.

ಹಿಮಾಂಶು (@himanshu_drall_01) ಎಂಬವರು ತಮ್ಮ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ 5 ವರ್ಷಗಳ ಬಳಿಕ ತಿಹಾರ್‌ ಜೈಲಿನಿಂದ ಹೊರ ಬಂದ ಮೊಮ್ಮಗನ್ನು ಕಂಡು ಅಜ್ಜಿ ಭಾವುಕರಾಗಿರುವ ದೃಶ್ಯವನ್ನು ಕಾಣಬಹುದು. ಯಾವುದೋ ತಪ್ಪಿಗೆ ಜೈಲು ಪಾಲಾಗಿದ್ದ ಯುವಕನೊಬ್ಬ ಶಿಕ್ಷೆಯನ್ನು ಮುಗಿಸಿ ಜೈಲಿನಿಂದ ಹೊರ ಬರುತ್ತಾರೆ. ನಂತರ ಮನೆಗೆ ಬಂದ ಆತ ಸೀದಾ ತಮ್ಮ ಪ್ರೀತಿಯ ಅಜ್ಜಿಯನ್ನು ಕಾಣಲು ಹೋಗುತ್ತಾನೆ. ಮಂಚದ ಮೇಲೆ ಮಲಗಿದ್ದ ಅಜ್ಜಿ ತನ್ನ ಮೊಮ್ಮಗನನ್ನು ಕಂಡು ಅಯ್ಯೋ ನನ್ನ ಬಂಗಾರ ಬಂದ್ಯಾ ಎಂದು ಖುಷಿಯಲ್ಲಿ ಮೊಮ್ಮಗನ್ನು ಮುದ್ದಾಡಿದ್ದಾರೆ.

ಇದನ್ನೂ ಓದಿ: ಸಾಕಿದ ಮಾಲಿಕನಿಗೆ ಯಮನಾದ ಗಜ; ಮಾವುತನನ್ನು ತುಳಿದು ಸಾಯಿಸಿದ ಆನೆ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 7.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಕೆಲವರು ಇದೇನು ಮೊಮ್ಮಗ ವಿದೇಶದಲ್ಲಿದ್ದು ಏನೋ ಸಾಧನೆ ಮಾಡಿ ಬಂದಂತೆ ಖುಷಿ ಪಡುತ್ತಿದ್ದಾರೆ ಎಂದು ಕಾಮೆಂಟ್ಸ್‌ ಮಾಡಿದರೆ, ಇನ್ನೂ ಅನೇಕರು ಅಜ್ಜಿ ಮೊಮ್ಮಗನ ಈ ಸುಂದರ ಬಾಂಧವ್ಯವನ್ನು ಕಂಡು ಭಾವುಕರಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us