AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸುಡು ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಟವೆಲ್ ನೀಡಿದ ಮಹಿಳೆ; ವಿಡಿಯೋ ವೈರಲ್!

ಲೈಕ್ ಅಥವಾ ವ್ಯೂಗಳಿಗೋಸ್ಕರ ಏನೆಲ್ಲಾ ಮಾಡುವ ಈ ಕಾಲದಲ್ಲಿ ಖುಷಿ ಪಾಂಡೆ ಜನರಿಗೆ ಸಹಾಯ ಮಾಡುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

Viral Video: ಸುಡು ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಟವೆಲ್ ನೀಡಿದ ಮಹಿಳೆ; ವಿಡಿಯೋ ವೈರಲ್!
ಖುಷಿ ಪಾಂಡೆ
ನಯನಾ ಎಸ್​ಪಿ
|

Updated on: May 26, 2023 | 11:49 AM

Share

Delhi: ಭಾರತದ ಸುಡುವ ಬೇಸಿಗೆಯ ಶಾಖದಲ್ಲಿ (Heatwave), ಖುಷಿ ಪಾಂಡೆ (Khushi Pandey), ಸಾಮಾಜಿಕ ಕಾರ್ಯಕರ್ತೆ ದೆಹಲಿಯ ಬೀದಿ ವ್ಯಾಪಾರಿಗಳು ಮತ್ತು ರಿಕ್ಷಾ ಚಾಲಕರಿಗೆ ಟವೆಲ್ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಸಾಕಷ್ಟು ಜನರ ಗಮನ (Viral) ಸೆಳೆದಿದ್ದಾರೆ. ಆಫೀಸ್ ಒಳಗೆ ಕುಳಿತು ಕೆಲಸ ಮಾಡುವವರಿಗಿಂತ ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಹೀಗೆ ಹೊರಗೆ ಕೆಲಸ ಮಾಡುವವರು ಸುಡು ಬಿಸಿಲಿನ ತಾಪಕ್ಕೆ ಕಷ್ಟ ಪಡುತ್ತಾರೆ, ಹಾಗಿರುವಾಗ ಪಾಂಡೆ ಅವರ ನಡೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಲೈಕ್ ಅಥವಾ ವ್ಯೂಗಳಿಗೋಸ್ಕರ ಏನೆಲ್ಲಾ ಮಾಡುವ ಈ ಕಾಲದಲ್ಲಿ ಖುಷಿ ಪಾಂಡೆ ಜನರಿಗೆ ಸಹಾಯ ಮಾಡುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

ಬಿಸಿಲಿನ ಹೊಡೆತವನ್ನು ಅನುಭವಿಸುವ ಜನರ ನೋವನ್ನು ನಿವಾರಿಸಲು, ಪಾಂಡೆ ಚಿಂತನಶೀಲ ಯೋಜನೆಯನ್ನು ರೂಪಿಸಿದರು. ಅವರು ಬೀದಿ ಕೆಲಸಗಾರರಿಗೆ ಹತ್ತಿ ಶಿರೋವಸ್ತ್ರ ಅಥವಾ ಕೆಂಪು ಬಣ್ಣದ ಹತ್ತಿ ಟವೆಲ್ ವಿತರಿಸಲು ಪ್ರಾರಂಭಿಸಿದರು. ಇದನ್ನೂ ಹಿಂದಿಯಲ್ಲಿ “ಗಮ್ಚಾ” ಎಂದು ಕರೆಯುತ್ತಾರೆ. ಈ ಬಟ್ಟೆಗಳನ್ನು ತಮ್ಮ ತಲೆಯ ಮೇಲೆ ಹಾಕಿಕೊಳ್ಳುವುದರಿಂದ ಉರಿ ಬಿಸಿಲಿನಿಂದ ಕೊಂಚ ಸಮಾಧಾನ ನೀಡುತ್ತದೆ. ಪಾಂಡೆ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ತಾವು ಮಾಡುತ್ತಿರುವ ಸಾಮಾಜಿಕ ಸೇವೆಯನ್ನು ದಾಖಲಿಸಿದ್ದಾರೆ, ಬೀದಿ ವ್ಯಾಪಾರಿಗಳೊಂದಿಗಿನ ಅವರ ಸಂವಹನ ಮತ್ತು ಕೆಂಪು ಗಮ್ಚಾಗಳ ವಿತರಣೆಯನ್ನು ಪ್ರದರ್ಶಿಸಿದರು.

ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ 500K ವೀಕ್ಷಣೆಗಳನ್ನು ಗಳಿಸಿದೆ. ಇಂಟರ್ನೆಟ್‌ನಲ್ಲಿರುವ ಜನರು ಪಾಂಡೆಯ ನಿಸ್ವಾರ್ಥ ಕಾರ್ಯದಿಂದ ಆಳವಾಗಿ ಪ್ರಭಾವಿತರಾದರು, ಹಲವರು ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ, ಕರ್ನಲ್, ಆಕೆಯ ಉದಾತ್ತ ಗೆಸ್ಚರ್‌ಗಾಗಿ ಆಕೆಗೆ ಧನ್ಯವಾದ ಅರ್ಪಿಸಿದರೆ, ಇತರರು ತಮ್ಮ ಸಮುದಾಯಗಳಲ್ಲಿ ಜನರಿಗೆ ಸಹಾಯ ಮಾಡುವ ತಮ್ಮದೇ ಆದ ಮಾರ್ಗಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!

ಪಾಂಡೆ ಅವರ ಕ್ರಮಗಳು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳ ತಕ್ಷಣದ ಅಗತ್ಯಗಳನ್ನು ಪೂರೈಸಲು ಉತ್ತಮ ಉಪಕ್ರಮವೆಂದು ಶ್ಲಾಘಿಸಲ್ಪಟ್ಟವು. ಸೂರ್ಯನ ಶಾಖಕ್ಕೆ ಬೆಂದು ಬಸವಳಿಯುವ ಜನರ ಮುಖದಲ್ಲಿ ನಗುವನ್ನು ತರಲು ಅವರ ನಿರಂತರ ಪ್ರಯತ್ನಗಳು ಹೆಚ್ಚು ಮೆಚ್ಚುಗೆ ಪಡೆದವು. ಬೇಸಿಗೆಯ ಪರಿಸ್ಥಿತಿಗಳ ನಡುವೆ, ಪಾಂಡೆಯ ಸೇವಾ ಕಾರ್ಯವು ಸಹಾನುಭೂತಿಯ ಶಕ್ತಿಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ