Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!

Garden and Kitchen : ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ. 

Viral Video: ಇದೊಂದಿದ್ದರೆ ಯಾರೂ ಏನನ್ನೂ ಚಿವುಟಬಹುದು ಕತ್ತರಿಸಬಹುದು ಸುಲಿಯಬಹುದು!
ಬೆರಳಿಗೆ ಈ ಸಾಧನ ಧರಿಸಿದರೆ ಹೀಗೆ ಕತ್ತರಿಸಬಹುದು ಸುಲಿಯಬಹುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 26, 2023 | 10:43 AM

Veg Cutter : ಮನೆಯಲ್ಲಿ ನಾಲ್ಕು ಬೆಳ್ಳುಳ್ಳಿ ಸುಲಿದು ಕೊಡು ಎಂದಾಗ ಯಾವುದೋ ಫೋನ್​ ಬಂತು ಇರು ಎಂದು ಹೋಗಬೇಕಿಲ್ಲ. ಇದಿಷ್ಟು ಬೀನ್ಸ್​ ಸುಲಿದು ಕೊಡು ಎಂದಾಗ ಅಯ್ಯೋ ತಲೆನೋವು ಎಂದು ನೆಪ ಹೇಳಬೇಕಿಲ್ಲ. ಶುಂಠಿ ಸಿಪ್ಪೆ ತೆಗೆದುಕೊಡು ಎಂದಾಗ ನನ್ನ ಫ್ರೆಂಡ್​ ಕರೀತಿದಾರೆ ಎಂದು ಹೊರಹೋಗಬೇಕಿಲ್ಲ. ಈಗ ಯಾರೂ ಕೂಡ ಸುಲಭವಾಗಿ ಚಕಚಕನೆ ತರಕಾರಿಗಳನ್ನು ಕತ್ತರಿಸಬಹುದು, ಸೋಸಬಹುದು, ಸುಲಿಯಬಹುದು ಆದರೆ ನಿಮ್ಮ ಹೆಬ್ಬೆರಳಿಗೆ ಇಂಥದೊಂದು ಸಾಧನವಿದ್ದಲ್ಲಿ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Cool ideas / Amazon Finds (@coolfindsus)

ಇನ್​ಸ್ಟಾಗ್ರಾಮಿಗರು ಈ ವಿಡಿಯೋ ನೋಡಿ ಹುಚ್ಚೆದ್ದು ಪ್ರತಿಕ್ರಿಯಿಸುತ್ತಿದ್ದಾರೆ. ಆಹ್​ ಇದು ನನ್ನ ಐದು ಬೆರಳಿಗೂ ಬೇಕು ಎಂದು ಹಲವಾರು ಜನ ತಮಾಷೆ ಮಾಡುತ್ತಿದ್ಧಾರೆ. Peter Piper picked a peck of pickled peppers from the pepper patch ಎಂದು ಒಬ್ಬರು ಟಂಗ್​ ಟ್ವಿಸ್ಟರ್ ನೆನಪಿಸಿಕೊಂಡಿದ್ದಾರೆ. ಏನೇನೋ ಶೋಧಿಸುತ್ತಿದ್ದೇವೆ, ಆದರೆ ನಾವಿನ್ನೂ ಆತ್ಮರಕ್ಷಣೆಯ ಸಾಧ್ಯತೆಗಳನ್ನು ಹುಡುಕುವುದಕ್ಕೆ ಶುರುಮಾಡಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ನಾನಂತೂ ಈ ಸಾಧನವನ್ನು ಖರೀದಿಸುತ್ತೇನೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಬಿಹಾರಿ ಮಗುವಿಗೆ ಬಂದಿದ್ದು ಕನ್ನಡಜ್ವರ! ಸೃಷ್ಟಿ ಡಾಕ್ಟರ್​ ಕೊಟ್ಟ ಔಷಧಿ ಏನು?

ತಂತ್ರಜ್ಞಾನ, ತಾಂತ್ರಿಕ ಸಾಧನ ಮತ್ತು ಆನ್​ಲೈನ್ ಮಾರುಕಟ್ಟೆ ಇವುಗಳ ವ್ಯಾಪ್ತಿ ಇಂದು ಊಹಿಸಲಸಾಧ್ಯ. ಯಾವ ಕೆಲಸವನ್ನೂ ಸುಲಭವಾಗಿ ಪೂರೈಸಲು ಅನುಕೂಲವಾಗುವಂಥ ಸಾಧನಗಳ ಸರಕು ಈವತ್ತು ತುದಿಬೆರಳಲ್ಲಿ ಆಡುತ್ತಿದೆ. ಸಣ್ಣಪುಟ್ಟ ಕೈಗಾರಿಕೆಗಳು ಇಂದು ಲೆಕ್ಕವಿಲ್ಲದಷ್ಟು ತಲೆಎತ್ತಿನಿಂತಿವೆ.

ಇದನ್ನೂ ಓದಿ : Viral Video: ಈ ಧಗೆಯಲ್ಲಿ ಪ್ರೇಮಿಗಳಿಗೆ ತಂಪನೆರೆಯುವ ಪ್ರಗತಿ ಬಡಿಗೇರಳ ಈ ಭಾವಗೀತೆ

ವೇಗದ ಜೀವನಶೈಲಿ ಕೊಳ್ಳುಬಾಕುತನ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದೆ. ನಿಂತರೆಲ್ಲಿ ಕೊಳೆತುಹೋಗುತ್ತೇವೆ ಎಂಬಂತೆ ಕಾಲದೊಂದಿಗೆ ಕಾಲು ಹಾಕುವುದು ಇಂದಿನ ಅನಿವಾರ್ಯವಾಗಿದೆ. ಈ ಬಗ್ಗೆ ಜಾಸ್ತಿ ಬರೆದರೆ ನಿಮಗೆ ಓದಿಗೆ ಪುರಸೊತ್ತಿಲ್ಲ. ಮೆಣಸಿನಕಾಯಿ ಹೆಚ್ಚುವುದಿದೆ, ಬೆಳ್ಳುಳ್ಳಿ ಸುಲಿಯುವುದಿದೆ, ಹಣ್ಣು ಬಿಡಿಸುವುದಿದೆ ಇನ್ನೂ ಏನೇನೋ!

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ  

Published On - 10:42 am, Fri, 26 May 23

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ