AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರೋ ಬಿಟ್ಟು ಹೋದರೆ ಇನ್ನ್ಯಾರೋ ತೆಕ್ಕೆಗೆಳೆದುಕೊಳ್ಳುತ್ತಾರೆ ನಾಯಿಮರಿಗಾದರೆ…

Dog Rescue : ಹನಿ ನೀರು ಬಿಸ್ಕೆಟ್​ ಚೂರು ಮೇಲೊಂದೆರಡು ಸಲ ತಲೆನೇವರಿಸಿ ಹೊರಟರೆ? ಬೇಡ, ಮತ್ತೆ ನಾನೊಬ್ಬನೇ. ನೆಲದಾಣೆ ಮಾಡಿ ಹೇಳುತ್ತಿದ್ದೇನೆ ಬೇಡವೆಂದರೂ ಕೇಳುತ್ತಿಲ್ಲ. ಮತ್ತೆ ಮತ್ತೆ ಮೈದಡವುತ್ತಿದ್ದಾಳೆ ಏನು ಮಾಡಲಿ?

ಯಾರೋ ಬಿಟ್ಟು ಹೋದರೆ ಇನ್ನ್ಯಾರೋ ತೆಕ್ಕೆಗೆಳೆದುಕೊಳ್ಳುತ್ತಾರೆ ನಾಯಿಮರಿಗಾದರೆ...
Woman rescues shivering puppy from the roadside
TV9 Web
| Edited By: ಶ್ರೀದೇವಿ ಕಳಸದ|

Updated on:Nov 03, 2022 | 10:53 AM

Share

Viral Video : ಅಮ್ಮನಿಂದ ದೂರ ಸರಿದರೆ ಚಳಿಯೇ ಅಲ್ಲವೆ? ಎಲ್ಲಿ ಹೋದಳು, ತಾನಾಗಿಯೇ ಆಕೆ ಬಿಟ್ಟುಹೋಗಳು. ನಾನೇ ದಾರಿ ತಪ್ಪಿಸಿಕೊಂಡೆನೇ? ರೊಯ್ಯನೇ ಗಾಳಿ ಬೀಸುತ್ತದೆ. ಅತ್ತ ಸರಿಯಲೆ ಇತ್ತ ಸರಿಯಲೆ ಏರಿಬರುವ ಗಾಡಿಗಳ ಮಧ್ಯೆ ಎತ್ತ ಸರಿಯಲಿ? ಕಾರೊಂದು ಬಂದು ನಿಂತಿದೆ. ಒಳಾಸೆ, ಮತ್ತೆ ಓಡಿಬರುತ್ತಿದ್ದೇನೆ. ಹನಿ ನೀರು ಬಿಸ್ಕೆಟ್​ ಚೂರು ಮೇಲೊಂದೆರಡು ಸಲ ತಲೆನೇವರಿಸಿ ಹೊರಟರೆ? ಬೇಡ ಬೇಡ, ಮತ್ತೆ ನಾನೊಬ್ಬನೇ. ಅರೆ ಆಕೆ ಕೈಚಾಚಿ ಮುಂದೆ ಮುಂದೆ ಬರುತ್ತಿದ್ದಾಳೆ. ನನಗೀಗ ಹಿಂದೆಹಿಂದೆ ಸರಿಯದೆ ಗತ್ಯಂತರವಿಲ್ಲ. ನೆಲದಾಣೆ ಮಾಡಿ ಹೇಳುತ್ತಿದ್ದೇನೆ ಬೇಡವೆಂದರೂ ಕೇಳುತ್ತಿಲ್ಲ. ಮತ್ತೆ ಮತ್ತೆ ಮೈದಡವುತ್ತಿದ್ದಾಳೆಂದರೆ ಶಾಶ್ವತವಾಗಿ ತನ್ನೊಂದಿಗೆ ಕರೆದೊಯ್ಯಬಹುದೆ?

Buitengebieden ಟ್ವೀಟ್ ಮಾಡಿದ ಈ ವಿಡಿಯೋ ಕಣ್ಣಾಲಿಗಳನ್ನು ತುಂಬಿಸುವಂತಿಲ್ಲವೆ? ಈ ತನಕ 1.3 ಮಿಲಿಯನ್ ಜನ ಈ ವಿಡಿಯೋ ನೋಡಿದ್ದಾರೆ. 72,000 ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ನಾಯಿಮರಿಯ ಕಣ್ಣುಗಳಲ್ಲಿರುವ ದುಗುಡವನ್ನು ಅಕ್ಷರಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ.

‘ಆಕೆ ತನಗೆ ಸಹಾಯ ಮಾಡಲು ಬಂದಿದ್ದಾಳೆ ಎನ್ನುವುದನ್ನು ಅರಿತುಕೊಳ್ಳಲೂ ಅವನಿಗೆ ಕಷ್ಟವಾಗುತ್ತಿದೆ, ಅಷ್ಟೊಂದು ಭಯತುಂಬಿಕೊಂಡಿದೆ ಪಾಪ’ ಎಂದು ಮಮ್ಮಲ ಮರುಗಿದ್ದಾರೆ ಒಬ್ಬರು. ‘ಈ ನಾಯಿಮರಿಯನ್ನು ಹೀಗೆ ರಸ್ತೆಯಲ್ಲಿ ಬಿಟ್ಟುಹೋದವರ ಬಳಿಯೊಮ್ಮೆ ನನಗೆ ಮಾತನಾಡಬೇಕಿದೆ. ಹೇಗೆ ಹುಡುಕುವುದೋ? ಸಂಕಟವಾಗುತ್ತದೆ’ ಎಂದಿದ್ದಾರೆ ಇನ್ನೊಬ್ಬರು. ‘ಇಷ್ಟೊಂದು ಭಯಪಡುತ್ತಿದೆ ಎಂದರೆ ಮನುಷ್ಯರು ಇದಕ್ಕೆ ಏನು ಮಾಡಿರಬಹುದು, ಹೃದಯ ಹಿಂಡುವ ಈ ದೃಶ್ಯ ನೋಡಲಾಗುತ್ತಿಲ್ಲ’ ಎಂದಿದ್ದಾರೆ ಮತ್ತೊಬ್ಬರು. ‘ಇರಲಿ ಈಗೊಂದು ಮನೆ ಸಿಕ್ಕಿತಲ್ಲ ಅದಕ್ಕೆ, ಅದಕ್ಕೆ ಖುಷಿಪಡೋಣ’ ಎಂದಿದ್ದಾರೆ ಮಗದೊಬ್ಬರು.

ದೇವರು, ಹೀಗೆ ಈ ನಾಯಿಮರಿಯ ಕೈಬಿಟ್ಟು ಕೆಲಕಾಲ ಕಾಯ್ದು ನೋಡಿದನೇನೋ ಮನುಷ್ಯರ ಆಟವನ್ನು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 10:45 am, Thu, 3 November 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು