AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಕ್ಲಾಸ್​ ನಡೆಯುವಾಗ 4ನೇ ತರಗತಿಯ ಹುಡುಗ ಬರೆದ ಈ ಕವಿತೆಗಳು

Poem : ‘ಮುಳ್ಳಿನಿಂದ ಕೂಡಿದ ಟೊಂಗೆಯಲ್ಲಿ ಅರಳಿದ ಗುಲಾಬಿಯಂತೆ ನೀವು ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ’ ತಾಯಂದಿರ ದಿನಕ್ಕೆ ಈ ಹುಡುಗ ಬರೆದ ಕವಿತೆಯಿದು. ಇನ್ನಷ್ಟು ಕವನಗಳನ್ನು ಓದಿ.

ಆನ್​ಲೈನ್​ ಕ್ಲಾಸ್​ ನಡೆಯುವಾಗ 4ನೇ ತರಗತಿಯ ಹುಡುಗ ಬರೆದ ಈ ಕವಿತೆಗಳು
Woman shares poems written by son during online classes in pandemic.
TV9 Web
| Edited By: |

Updated on:Oct 27, 2022 | 10:35 AM

Share

Viral : ಕೊವಿಡ್​ ಸಮಯದಲ್ಲಿ ಎಲ್ಲ ಶಾಲಾಕಾಲೇಜುಗಳು ಆನ್​ಲೈನ್ ಆಗುತ್ತಿದ್ದಂತೆ, ಪುಟ್ಟ ಮಕ್ಕಳು ಗಂಟೆಗಟ್ಟಲೆ ಏಕಾಗ್ರಚಿತ್ತದಿಂದ ಸ್ಕ್ರೀನ್​ ಮುಂದೆ ಕುಳಿತುಕೊಳ್ಳವುದು ಬಹಳೇ ಕಷ್ಟವಾಯಿತು. ಸಾಕಷ್ಟು ಮಕ್ಕಳು ವಿಡಿಯೋ ಆಫ್​ ಮಾಡಿ ಮಲಗಿಕೊಂಡಿದ್ದಿದೆ. ರಸ್ತೆಗೆ ಬಂದು ಆಟವಾಡಿದ್ದಿದೆ. ಇನ್ನೊಂದು ವಿಂಡೋನಲ್ಲಿ ಆನ್​ಲೈನ್​ ಗೇಮ್​ ಆಡಿದ್ದಿದೆ. ಕ್ರಿಕೆಟ್ ನೋಡಿದ್ದಿದೆ. ಕಾರ್ಟೂನ್​ ನೋಡಿದ್ದಿದೆ. ಹಾಳೆಗಳ ಮೇಲೆ ಏನೇನೋ ಗೀಚಿದ್ದಿದೆ. ಕೆಲವೇ ಮಕ್ಕಳು ಚಿತ್ರ ಬಿಡಿಸಿದ್ದಿದೆ ಹಾಗೆಯೇ ಕವನಗಳನ್ನೂ ಬರೆದಿದ್ದಿದೆ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ ಗಮನಿಸಿ.

ಈ ಕವನಗಳು ರಚನೆಗೊಂಡಿದ್ದು ಆನ್​ಲೈನ್​ ಕ್ಲಾಸ್​ ನಡೆಯುತ್ತಿರುವಾಗ. ನಾಲ್ಕನೇ ಕ್ಲಾಸ್​ ಓದುತ್ತಿರುವ ಈ ಮಗುವಿನ ಅಮ್ಮ ಒಟ್ಟು ನಾಲ್ಕು ಕವನಗಳನ್ನು ಟ್ವೀಟ್​ ಮಾಡಿದ್ದಾರೆ. ಈ ಪೋಸ್ಟ್​ ಅನ್ನು 1,37,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. StePHANTOM ಎಂಬ ಅಕೌಂಟಿನಲ್ಲಿ ಈ ಪೋಸ್ಟ್​ ಓದಬಹುದಾಗಿದೆ.

‘ಕವಿತೆಯ ಬಗ್ಗೆ ನನಗೊಂದು ಕಲ್ಪನೆ ಇತ್ತೇನೋ ಅನ್ನಿಸುತ್ತದೆ. ಆದರೀಗದು ಇಲ್ಲ. ಬಹುಶಃ ಇಲ್ಲೇ ಎಲ್ಲೋ ಮನೆಯ ಸುತ್ತಮುತ್ತಲೂ ಅದು ಅಲೆದಾಡುತ್ತಿರುಬಹುದು’ ಇದು ಒಂದು ಕವಿತೆಯ ಭಾವಾನುವಾದ. ಇನ್ನೊಂದು ಕವನ ಹೀಗಿದೆ ‘ಮುಳ್ಳಿನಿಂದ ಕೂಡಿದ ಟೊಂಗೆಯಲ್ಲಿ ಅರಳಿದ ಗುಲಾಬಿಯಂತೆ ನೀವು ಸುಂದರವಾಗಿದ್ದೀರಿ. ಏಕೆಂದರೆ ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ’. ಈ ಕವನವನ್ನು ತಾಯಂದಿರ ದಿನಕ್ಕೆ ಬರೆದದ್ದು.

ನೆಟ್ಟಿಗರು ಈ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಂಥ ಅದ್ಭುತ ಆಲೋಚನೆ. ನಿಜಕ್ಕೂ ಇವನಿಗೆ ಉತ್ತಮ ಭವಿಷ್ಯವಿದೆ. ಸೃಜನಶೀಲ ಜಗತ್ತಿನಲ್ಲಿ ಅವನು ಮುಂದುವರೆಯಲಿ ಎಂದಿದ್ದಾರೆ ಒಬ್ಬರು. ಅವನು ಹೀಗೆ ಕವನಗಳಲ್ಲಿ ತನ್ನ ಮನಸ್ಸು ತೊಡಗಿಸಿಕೊಂಡಿದ್ದು ನಿಜಕ್ಕೂ ಸ್ತುತ್ಯಾರ್ಹ ಎಂದಿದ್ದಾರೆ ಇನ್ನೂ ಒಬ್ಬರು. ಈ ವಯಸ್ಸಿನಲ್ಲಿ ಯಾವುದೋ ಒಂದು ಅಭಿವ್ಯಕ್ತಿಯಲ್ಲಿ ತೊಡಗಿಕೊಳ್ಳುವುದೆಂದರೆ ಅದೇ ಮಹಾನ್​ ಸಾಧನೆ. ಏಕೆಂದರೆ ಇಂದು ಮಕ್ಕಳ ಮನಸ್ಸನ್ನು ಚಂಚಲಗೊಳಿಸಲು ಏನೆಲ್ಲ ಅವಕಾಶಗಳಿವೆ ಎಂದಿದ್ದಾರೆ ಮಗದೊಬ್ಬರು.

ನಿಮ್ಮ ಮಗುವಿಗೂ ಅವರಷ್ಟಕ್ಕೆ ಅವರನ್ನು ಬಿಟ್ಟು ನೋಡಿ ದಿನವೂ. ಅವರೊಳಗಿನದು ನಿಧಾನ ಆಕಾರಪಡೆದುಕೊಳ್ಳುತ್ತಾ ಹೋಗುತ್ತದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:35 am, Thu, 27 October 22

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ