Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರುನಿಂದ ಅಯೋಧ್ಯೆಗೆ ಹೊರಟಿತು ಮೊದಲ ರೈಲು, ಬಾಲರಾಮನ ದರ್ಶನ ಮಾಡಲಿದ್ದಾರೆ 1,450 ಬಿಜೆಪಿ ಕಾರ್ಯಕರ್ತರು

ನಗರದ ಮೂರು ಲೋಕಸಭಾ ಕ್ಷೇತ್ರಗಳ ಸುಮಾರು 1,450 ಬಿಜೆಪಿ ಕಾರ್ಯಕರ್ತರು ಬಾಲರಾಮನ ದರ್ಶನಕ್ಕೆ ತೆರಳಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದರು. ಅಲ್ಲಿಂದ ಇವತ್ತಿನವರೆಗೆ ಸುಮಾರು 40 ಕೋಟಿಗೂ ಹೆಚ್ಚು ಜನ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಮಾಡಿದ್ದಾರೆ.

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 14, 2024 | 10:49 AM

ಬೆಂಗಳೂರು: ನಗರದ ಮೂರು ಲೋಕಸಭಾ ಕ್ಷೇತ್ರಗಳ (Lok Sabha constituencies) ಬಿಜೆಪಿ ಕಾರ್ಯಕರ್ತರನ್ನು ಹೊತ್ತ ವಿಶೇಷ ರೈಲೊಂದು ಬುಧವಾರ ಬೆಳಗಿನ ಜಾವ 3.40ಕ್ಕೆ ನಗರದ ವಿಶ್ವೇಶ್ವರಯ್ಯ ವಿಮಾನ ನಿಲ್ದಾಣದಿಂದ ರಾಮನ ಊರು ಅಯೋಧ್ಯೆಗೆ (Ayodhya) ತೆರಳಿತು. ರೇಲ್ವೇ ಇಲಾಖೆ ಮೂಲಗಳ ಪ್ರಕಾರ ಟ್ರೈನು ಫೆಬ್ರುವರಿ 16, ಮಧ್ಯಾಹ್ನದ ಸಮಯ ಪವಿತ್ರ ನಗರಿಯ ಅಯೋಧ್ಯೆ ಧಾಮ ತಲುಪಲಿದೆ. ಮರುದಿನ ಬೆಳಗ್ಗೆ ಅಂದರೆ ಫೆಬ್ರುವರಿ 17 ಬೆಳಗ್ಗೆ ಅಯೋಧ್ಯೆ ಧಾಮದಿಂದ ವಾಪಸ್ಸು ಬರುವ ಇದೇ ರೈಲು ಫೆಬ್ರುವರಿ 20 ಬೆಳಗ್ಗೆ ಬೆಂಗಳೂರು ನಗರ ತಲುಪಲಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿನ ಸಂಸದ ಪಿಸಿ ಮೋಹನ್ (PC Mohan) ವಿಶೇಷ ರೈಲಿಗೆ ಚಾಲನೆ ನೀಡಿದರು. ನಗರದ ಮೂರು ಲೋಕಸಭಾ ಕ್ಷೇತ್ರಗಳ ಸುಮಾರು 1,450 ಬಿಜೆಪಿ ಕಾರ್ಯಕರ್ತರು ಬಾಲರಾಮನ ದರ್ಶನಕ್ಕೆ ತೆರಳಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠೆ ನೆರವೇರಿಸಿದ್ದರು. ಅಲ್ಲಿಂದ ಇವತ್ತಿನವರೆಗೆ ಸುಮಾರು 40 ಕೋಟಿಗೂ ಹೆಚ್ಚು ಜನ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ದರ್ಶನ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ