ದರ್ಶನ್​ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ಬಗ್ಗೆ ಚೇತನ್​ ನೇರ ಅಭಿಪ್ರಾಯ

ಕೊಲೆ ಆರೋಪಿಯಾಗಿ ಜೈಲು ಸೇರಿರುವ ದರ್ಶನ್​ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ರೀತಿ ಬಗ್ಗೆ ನಟ ‘ಆ ದಿನಗಳು’ ಚೇತನ್​ ಅವರು ಮಾತನಾಡಿದ್ದಾರೆ. ‘ದರ್ಶನ್​ ಅವರ ಒಂದು ಪ್ರಕರಣ ತೆಗೆದುಕೊಂಡು 9 ಅಧಿಕಾರಿಗಳನ್ನು ಅಮಾನತು ಮಾಡೋದು ಸರಿ ಅಲ್ಲ. ಇಂಥದ್ದು ಆಗದೇ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದು ಚೇತನ್​ ಹೇಳಿದ್ದಾರೆ.

ದರ್ಶನ್​ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ಬಗ್ಗೆ ಚೇತನ್​ ನೇರ ಅಭಿಪ್ರಾಯ
| Updated By: ಮದನ್​ ಕುಮಾರ್​

Updated on: Sep 04, 2024 | 8:52 PM

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ನೀಡಿದ್ದಕ್ಕೆ 9 ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತು. ಈ ಕ್ರಮದ ಕುರಿತು ನಟ ಚೇತನ್​ ಅಹಿಂಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪೊಲೀಸರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪೊಲೀಸ್ ಮತ್ತು ಜೈಲಿನ ವ್ಯವಸ್ಥೆ ಸುಧಾರಣೆ ಆಗಬೇಕು. ಅದನ್ನು ಮಾಡಲು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು’ ಎಂದಿದ್ದಾರೆ ಚೇತನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us