AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ ಹುಚ್ಚಾಟ!

ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ ಹುಚ್ಚಾಟ!

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on: Aug 28, 2026 | 1:34 PM

Share

ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಬಳಿ ಬೈಕ್ ಸವಾರರ ಆತಂಕಕಾರಿ ಹುಚ್ಚಾಟ ಬೆಳಕಿಗೆ ಬಂದಿದೆ. ಆಹಾರಕ್ಕಾಗಿ ಕಾಡಿನಿಂದ ರಸ್ತೆಗೆ ಬಂದಿದ್ದ ಒಂಟಿ ಸಲಗದ ತೀರ ಸಮೀಪ ಬೈಕ್ ನಿಲ್ಲಿಸಿ ಫೋಟೋ ಹಾಗೂ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ಸವಾರರು ನಡೆಸಿದ ಈ ಅಪಾಯಕಾರಿ ಸಾಹಸದ ಸಂಪೂರ್ಣ ವಿವರ ಮತ್ತು ವೀಡಿಯೊ ಇಲ್ಲಿದೆ.

ಚಾಮರಾಜನಗರ, ಆಗಸ್ಟ್ 28: ಆನೆಗಳ ಜೊತೆ ಸಾಹಸ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಳ್ಳುವ ಸಾರ್ವಜನಿಕರ ಹುಚ್ಚಾಟ ಮುಂದುವರಿದಿದೆ. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಸಲಗದ ಜೊತೆ ಬೈಕ್ ಸವಾರರು ಫೋಟೋ ಹಾಗೂ ಸೆಲ್ಫಿ ತೆಗೆಯಲು ಮುಂದಾದ ಆತಂಕಕಾರಿ ಘಟನೆ ನಡೆದಿದೆ. ಆಸನೂರು ಮಾರ್ಗದಲ್ಲಿ ಆಹಾರ, ಕಬ್ಬು ಹಾಗೂ ತರಕಾರಿ ಲಾರಿಗಳನ್ನು ಹುಡುಕಿಕೊಂಡು ಕಾಡಿನಿಂದ ರಸ್ತೆಗೆ ಆನೆಗಳು ಬರುತ್ತವೆ. ಈ ವೇಳೆ ಎದುರಾದ ಒಂಟಿ ಸಲಗವನ್ನು ಕಂಡು ಹೆದರುವ ಬದಲು, ಸವಾರರು ಆನೆಯ ಮುಂಭಾಗದಲ್ಲೇ ಬೈಕ್ ನಿಲ್ಲಿಸಿ ಫೋಟೋ ತೆಗೆಯಲು ಯತ್ನಿಸಿ ಅಪಾಯವನ್ನು ತಂದೊಡ್ಡಿಕೊಂಡಿದ್ದಾರೆ .

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us