AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya: ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ; ಅಷ್ಟಕ್ಕೂ ಆಗಿದ್ದೇನು?

Mandya: ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ; ಅಷ್ಟಕ್ಕೂ ಆಗಿದ್ದೇನು?

ದಿಲೀಪ್​, ಚೌಡಹಳ್ಳಿ
| Updated By: ಪ್ರಸನ್ನ ಹೆಗಡೆ|

Updated on:Dec 15, 2025 | 12:51 PM

Share

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಟ್ಟಹಳ್ಳಿಯಲ್ಲಿ ಜಾಗದ‌ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಉಂಟಾದ ತಳ್ಳಾಟ-ನೂಕಾಟದಲ್ಲಿ ಅಂಬೇಡ್ಕರ್​​ ಫ್ಲೆಕ್ಸ್​​ಗೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 0 ಗುಂಟೆ ಜಾಗದಲ್ಲಿ 5 ಗುಂಟೆ ಜಾಗವನ್ನು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಒಂದು ಸಮುದಾಯ ಒತ್ತಾಯ ಮಾಡಿದೆ. ಆದರೆ ಜಾಗ ಬಿಟ್ಟುಕೊಡಲು ಮತ್ತೊಂದು ಸಮುದಾಯ ವಿರೋಧ ವ್ಯಕ್ತಪಡಿಸಿದೆ.

ಮಂಡ್ಯ, ಡಿಸೆಂಬರ್​​ 15: ಜಾಗದ‌ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದು ಉಂಟಾದ ತಳ್ಳಾಟ ನೂಕಾಟದಲ್ಲಿ ಅಂಬೇಡ್ಕರ್​​ ಫ್ಲೆಕ್ಸ್​​ಗೆ ಹಾನಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಟ್ಟಹಳ್ಳಿಯಲ್ಲಿ ನಡೆದಿದೆ. ಬೊಮ್ಮಲಿಂಗೇಶ್ವರ ಟ್ರಸ್ಟ್ ಹೆಸರಿನಲ್ಲಿರುವ ಜಾಗದ ವಿಚಾರದಲ್ಲಿ ಗಲಾಟೆ ನಡೆದಿದ್ದು, ಸಸಿ ನೆಡುವುದಕ್ಕೆ ಮತ್ತೊಂದು ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಆ ಜಾಗದಲ್ಲಿ ಅಂಬೇಡ್ಕರ್ ಫ್ಲೆಕ್ಸ್ ಇಡಲು ಯತ್ನಿಸಿದಾಗ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ತಳ್ಳಾಟ ನೂಕಾಟ ನಡೆದಿದೆ. ಜಾಗದ ವಿಚಾರವಾಗಿ ಒಂದು ವರ್ಷದಿಂದ ವಿವಾದ ಇದ್ದು, 30 ಗುಂಟೆ ಜಾಗದಲ್ಲಿ 5 ಗುಂಟೆ ಜಾಗವನ್ನು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಬಿಟ್ಟುಕೊಡುವಂತೆ ಒಂದು ಸಮುದಾಯ ಒತ್ತಾಯ ಮಾಡಿದೆ. ಆದರೆ ಜಾಗ ಬಿಟ್ಟುಕೊಡಲು ಮತ್ತೊಂದು ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Dec 15, 2025 12:49 PM