AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈರುಳ್ಳಿ ಮಂಡಿಯಲ್ಲಿ ಮಹಿಳಾ ಕೂಲಿ ಕಾರ್ಮಿಕ ಸಮಸ್ಯೆ ಆಲಿಸಿದ ಡಿಕೆಶಿ

ಈರುಳ್ಳಿ ಮಂಡಿಯಲ್ಲಿ ಮಹಿಳಾ ಕೂಲಿ ಕಾರ್ಮಿಕ ಸಮಸ್ಯೆ ಆಲಿಸಿದ ಡಿಕೆಶಿ

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 08, 2026 | 11:10 AM

Share

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಶವಂತಪುರ ಎಪಿಎಂಸಿ ಈರುಳ್ಳಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದರು. ಅವರು ಮಹಿಳಾ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಕೆಲಸ, ಕೂಲಿ ಹಾಗೂ ಆದಾಯದ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ರೈತರು ಮತ್ತು ವರ್ತಕರೊಂದಿಗೆ ಮಾತನಾಡಿ, ತೂಕದಲ್ಲಿ ಮೋಸ ನಡೆಯುವ ಕುರಿತು ವಿಚಾರಿಸಿದರು.

ಬೆಂಗಳೂರು, ಸೆಪ್ಟೆಂಬರ್ 08: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದರು. ಈ ಭೇಟಿ ಮುಖ್ಯವಾಗಿ ಈರುಳ್ಳಿ ಮಾರುಕಟ್ಟೆಯತ್ತ ಕೇಂದ್ರೀಕೃತವಾಗಿತ್ತು.

ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾರುಕಟ್ಟೆಯಲ್ಲಿರುವ ಮಹಿಳಾ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಕೆಲಸದ ಸ್ವರೂಪ ಮತ್ತು ಕೂಲಿಯ ಬಗ್ಗೆ ವಿಚಾರಿಸಿದರು. ಕೂಲಿ ಕಾರ್ಮಿಕರು ತಾವು ಈರುಳ್ಳಿ ಸುಲಿಯುವ ಕೆಲಸ ಮಾಡುವುದಾಗಿ ತಿಳಿಸಿದರು. ಒಂದು ಚೀಲಕ್ಕೆ ಇಂತಿಷ್ಟು ಎಂಬಂತೆ ಕೂಲಿ ಸಿಗುತ್ತದೆ ಎಂದು ಹೇಳಿದರು. ವಾಹನಗಳು ಬಂದಾಗ ಮಾತ್ರ ಕೆಲಸ ಮತ್ತು 500-600 ರೂ. ರವರೆಗೆ ಆದಾಯ ಸಿಗುತ್ತದೆ, ಇಲ್ಲವಾದರೆ ಕೆಲಸವಿರುವುದಿಲ್ಲ ಎಂದು ಕಾರ್ಮಿಕರು ತಮ್ಮ ಅನಿಶ್ಚಿತ ಆದಾಯದ ಬಗ್ಗೆ ಸಿಎಂಗೆ ವಿವರಿಸಿದರು. ಬಹುತೇಕ ಕಾರ್ಮಿಕರು ಸುಂಕದಕಟ್ಟೆ ಮತ್ತು ಲಗ್ಗೆರೆಯಂತಹ ಪ್ರದೇಶಗಳಿಂದ ಬರುವುದಾಗಿ ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us