ಭಗವದ್ಗೀತೆ ಮೇಲೆ ತನ್ನೊಂದಿಗೆ ಚರ್ಚೆಗೆ ಬರಲು ಅಶೋಕ್, ಸಿಟಿ ರವಿ ಮತ್ತು ಯತ್ನಾಳ್ ಗೆ ಪ್ರದೀಪ್ ಈಶ್ವರ್ ಪಂಥಾಹ್ವಾನ

ಅರುಣ್​ ಕುಮಾರ್​ ಬೆಳ್ಳಿ

Updated on: Feb 22, 2025 | 3:04 PM

ಸಿಎಂ, ಡಿಸಿಎಂ ಮತ್ತು ಹೋಮ್ ಮಿನಿಸ್ಟರ್ ಬಗ್ಗೆ ಬಿಜೆಪಿ ನಾಯಕರು ಮಾತಾಡಿದರೆ ತಾವು ಸುಮ್ಮನಿರಲ್ಲ, ತಮ್ಮ ಹಿರಿಯ ನಾಯಕರಿಗಿರುವಷ್ಟು ತಾಳ್ಮೆ ತಮಗಿಲ್ಲ, ಆದರೆ ಪ್ರತಾಪ್ ಸಿಂಹ ಅಷ್ಟೆಲ್ಲ ಮಾತಾಡಿದರೂ ಪರಮೇಶ್ವರ್ ಸುಮ್ಮನಿದ್ದಿದ್ದು ಕಂಡಾಗ, ಹಿರಿಯ ನಾಯಕರು ತನ್ನ ಮತ್ತು ಪ್ರತಾಪ್ ಸಿಂಹನ ರೀತಿ ಯೋಚನೆ ಮಾಡಲ್ಲ ಅನ್ನೋದು ಮನವರಿಕೆಯಾಯಿತು ಎಂದು ಪ್ರದೀಪ್ ಈಶ್ವರ್ ಹೇಳಿದರು.

ಬೆಂಗಳೂರು: ಆರ್ ಅಶೋಕ, ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರೆಲ್ಲ ತಾವೇ ದೊಡ್ಡ ಹಿಂದೂಗಳ ಹಾಗೆ ಪೋಸು ಕೊಡುತ್ತಾರೆ, ಅಸಲಿಗೆ ಇವರು ಡೋಂಗಿ ಹಿಂದೂಗಳು ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಇವರು ಯಾವತ್ತಾದರೂ ಭಗವದ್ಗೀತೆಯನ್ನು ಓದಿದ್ದಾರಾ? ಭಗವದ್ಗೀತೆಯ ಮೇಲೆ ಚರ್ಚೆಗೆ ಬನ್ನಿ ಅಂತ ತಾನು ರವಿ, ಆಶೋಕ ಮತ್ತು ಯತ್ನಾಳ್ ಅವರಿಗೆ ನೇರವಾಗಿ ಸವಾಲು ಹಾಕುತ್ತೇನೆ ಎಂದ ಪ್ರದೀಪ್, ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಎರಡು ವರ್ಷಗಳಿಂದ ಬಂದ್ ಅಗಿತ್ತು, ಪುನರಾರಂಭಕ್ಕೆ ನಿನ್ನೆ ಅನುಮತಿ ಸಿಕ್ಕಂತಿದೆ, ಅವರ ಬಳಿ ಶುಗರ್ ಫ್ಯಾಕ್ಟರಿ ಇದ್ದರೆ ಉಳಿದವರಿಗೆ ಮೈಯಲ್ಲೇ ಶುಗರ್ ಇದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಡವರಿಗೆ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಇ ಖಾತಾಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಸೂಚನೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.