AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?

ಗಂಗಾಧರ​ ಬ. ಸಾಬೋಜಿ
|

Updated on: May 15, 2025 | 6:57 AM

ಕಾಲುಂಗುರವು ವಿವಾಹಿತ ಮಹಿಳೆಯರಿಗೆ ಪ್ರಮುಖ ಆಭರಣವಾಗಿದೆ. ಇದನ್ನು ಬೆಳ್ಳಿಯಿಂದ ಮಾಡಿಸಿಕೊಳ್ಳುವುದು ಶ್ರೇಷ್ಠ. ಕಾಲುಂಗುರ ಕಳೆದುಹೋದರೆ ಅದು ಅಶುಭ ಸೂಚನೆ ಎಂದು ಹೇಳಲಾಗುತ್ತದೆ. ಆದರೆ, ಹೊಸ ಕಾಲುಂಗುರವನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಧರಿಸುವುದರಿಂದ ಶುಭವೆಂದು ಹೇಳಲಾಗುತ್ತದೆ. ಈ ಬಗ್ಗೆ ಗುರೂಜಿ ಅವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಮೇ 15: ಕಾಲುಂಗುರವು ಹಿಂದೂ ಸಂಸ್ಕೃತಿಯಲ್ಲಿ ವಿವಾಹಿತ ಮಹಿಳೆಯರ ಅಲಂಕಾರವಷ್ಟೇ ಅಲ್ಲ, ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಲಾಗುವ ಈ ಆಭರಣವನ್ನು ಬಂಗಾರದಿಂದ ಮಾಡಿಸಿಕೊಳ್ಳಬಾರದು ಎಂದು ಶಾಸ್ತ್ರ ಹೇಳುತ್ತದೆ. ಕಾಲುಂಗುರ ಕಳೆದುಹೋಗುವುದು ಅಶುಭ ಸೂಚನೆಯಾಗಿದ್ದು, ಕೋಪ, ದುರಾಲೋಚನೆಗಳು ಹಾಗೂ ಕುಟುಂಬದಲ್ಲಿ ಕಲಹಗಳಿಗೆ ಕಾರಣವಾಗಬಹುದು. ಕಳೆದುಹೋದ ಕಾಲುಂಗುರದ ಬದಲಿಗೆ ಹೊಸದನ್ನು ತಂದು ದೇವಸ್ಥಾನದಲ್ಲಿ ಪೂಜಿಸಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.