‘ಈ ಸ್ಥಿತಿಯಲ್ಲಿ ನಾನು ನೋಡಬೇಕಿತ್ತಾ’: ದರ್ಶನ್​ ಬಗ್ಗೆ ವಿನೋದ್​ ರಾಜ್​ ಮರುಕ

| Updated By: ಮದನ್​ ಕುಮಾರ್​

Updated on: Jul 22, 2024 | 9:52 PM

ದರ್ಶನ್​ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬಂದಿರುವ ವಿನೋದ್​ ರಾಜ್​ ಬಹಳ ನೋವಿನೊಂದಿಗೆ ಮಾತನಾಡಿದ್ದಾರೆ. ‘ನೋವು ಮತ್ತು ಕಣ್ಣೀರು ಬಿಟ್ಟರೆ ನನಗೆ ಇನ್ನೇನೂ ಗೊತ್ತಾಗುತ್ತಿಲ್ಲ. ಇದು ಒಬ್ಬರ ಕಣ್ಣೀರು ಅಲ್ಲ’ ಎಂದ ಅವರು ಹೇಳಿದ್ದಾರೆ. ಆದಷ್ಟು ಬೇಗ ದರ್ಶನ್​ ಅವರು ಈ ಪ್ರಕರಣದಿಂದ ಹೊರಬಂದು ತಲೆ ಎತ್ತಿ ನಡೆಯುವಂತೆ ಆಗಲಿ ಎಂದಿದ್ದಾರೆ ವಿನೋದ್​ ರಾಜ್​.

ನಟ ದರ್ಶನ್​ ಅವರನ್ನು ನೋಡಲು ಅನೇಕರು ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿದ್ದಾರೆ. ಕುಟುಂಬದವರು ಮಾತ್ರವಲ್ಲದೇ ಚಿತ್ರರಂಗದ ಆಪ್ತರು ಕೂಡ ಜೈಲಿಗೆ ಬಂದು ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಇಂದು (ಜುಲೈ 22) ನಟ ವಿನೋದ್​ ರಾಜ್​ ಅವರು ಜೈಲಿಗೆ ಬಂದಿದ್ದಾರೆ. ಅವರ ಜೊತೆ ವಿಜಯಲಕ್ಷ್ಮಿ, ದಿನಕರ್​ ತೂಗುದೀಪ್​ ಕೂಡ ಇದ್ದರು. ಅಲ್ಲಿ ನಡೆದ ಮಾತುಕಥೆಯ ಬಗ್ಗೆ ವಿನೋದ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘5 ಜನ ಹೋಗಿದ್ದೆವು. ಜೈಲಿನ ನಿಯಮಗಳು ತುಂಬ ಕಟ್ಟುನಿಟ್ಟಾಗಿವೆ. ವಿಜಯಲಕ್ಷ್ಮಿ ಅವರು ಕೂಡ ಹೆಚ್ಚೇನೂ ಮಾತನಾಡಿಲ್ಲ. ಅವರಿಗೆ ಏನೂ ತಿಳಿಯುತ್ತಿಲ್ಲ. ಅವರ ವಕೀಲರು ಮಾತನಾಡಿದರು ಅಷ್ಟೇ. ಈ ಸ್ಥಿತಿಯಲ್ಲಿ ನಾನು ದರ್ಶನ್​ ಅವರನ್ನು ನೋಡಬೇಕಿತ್ತಾ? ನನ್ನ ಕಣ್ಣುಗಳನ್ನೇ ನನಗೆ ನಂಬೋಕೆ ಆಗುತ್ತಿಲ್ಲ. ಆದರೆ ನಂಬಲೇಬೇಕಾದ್ದು ಅನಿವಾರ್ಯ ಆಯಿತು’ ಎಂದಿದ್ದಾರೆ ವಿನೋದ್​ ರಾಜ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on