ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ಆರ್ ಸಿಬಿ ಗೆಲುವಿನಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಎದ್ದು ನಿಂತ ಡಿಕೆಶಿ, ನಾನು ಕ್ರಿಕೆಟ್ ಅಭಿಮಾನಿ , ಕೆಎಸ್ ಸಿಎ ಸದಸ್ಯ, ಕ್ರೀಡಾಂಗಣಕ್ಕೆ ಹೋಗಿದ್ದೆ. ಕಫ್ ಗೂ ಮುತ್ತು ಕೊಟ್ಟಿದ್ದೆನೆ ಎಂದರು. ನಂತರ ಕೌಂಟರ್ ಎಂಬಂತೆ ಆರ್ ಎಸ್ ಎಸ್ ಚಡ್ಡಿ ಹಾಕಿರುವುದನ್ನೂ ಸಹ ಹೇಳಿ ಎಂದ ಅಶೋಕ್ ಟಾಂಕ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ನಮಸ್ತೆ ಸದಾ ವತ್ಸಲೆ ಎಂದು ಆರ್ ಎಸ್ ಎಸ್ ಗೀತೆ ಹಾಡಿ ಗಮನಸೆಳೆದರು.
ಬೆಂಗಳೂರು, (ಆಗಸ್ಟ್ 21): ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಸಂಭ್ರಮಾಚರಣೆ ವೇಲೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಆರ್ ಸಿಬಿ ಅಭಿಮಾನಿಗಳು ಮೃತಟ್ಟಿದ್ದಾರೆ. ಈ ಸಂಬಂಧ ಇಂದು (ಆಗಸ್ಟ್ 21) ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಉತ್ತರ ನೀಡಿದರು. ಇದೇ ವೇಳೆ ವಿಪಕ್ಷ ನಾಯಕ ಅಶೋಕ್, ಆರ್ ಸಿಬಿ ಗೆಲುವಿನಲ್ಲಿ ಡಿಕೆ ಶಿವಕುಮಾರ್ ಪಾಲ್ಗೊಂಡಿರುವ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ಎದ್ದು ನಿಂತ ಡಿಕೆಶಿ, ನಾನು ಕ್ರಿಕೆಟ್ ಅಭಿಮಾನಿ , ಕೆಎಸ್ ಸಿಎ ಸದಸ್ಯ, ಕ್ರೀಡಾಂಗಣಕ್ಕೆ ಹೋಗಿದ್ದೆ. ಕಫ್ ಗೂ ಮುತ್ತು ಕೊಟ್ಟಿದ್ದೆನೆ ಎಂದರು. ನಂತರ ಕೌಂಟರ್ ಎಂಬಂತೆ ಆರ್ ಎಸ್ ಎಸ್ ಚಡ್ಡಿ ಹಾಕಿದ್ರಲ್ಲ ಎಂದು ಅಶೋಕ್ ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಡಿಕೆಶಿ, ನಮಸ್ತೇ ಸದಾ ವತ್ಸಲೇ ಎಂದು ಆರ್ ಎಸ್ ಎಸ್ ಗೀತೆ ಹಾಡಿದರು. ಈ ಮೂಲಕ ಅಶೋಕ್ ಅವರಿಗೆ ತಿರುಗೇಟು ನೀಡಿದರು.

