AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB IPL Celebration: ವಿಜಯ ಯಾತ್ರೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಅಂತಿಮಗೊಂಡಿಲ್ಲ: ಬಿ ದಯಾನಂದ್, ಪೊಲೀಸ್ ಕಮೀಶನರ್

RCB IPL Celebration: ವಿಜಯ ಯಾತ್ರೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಅಂತಿಮಗೊಂಡಿಲ್ಲ: ಬಿ ದಯಾನಂದ್, ಪೊಲೀಸ್ ಕಮೀಶನರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 04, 2025 | 3:54 PM

Share

ಸಂಜೆಯ ಕಾರ್ಯಕ್ರಮಗಳಿಂದಾಗಿ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆನ್ಲೈನ್​ನಲ್ಲಿ ಪಾಸು ಇಲ್ಲವೇ ಟಿಕೆಟ್​ಗ ವ್ಯವಸ್ಥೆಯನ್ನು ಕೆಎಸ್​ಸಿಎ ಮಾಡಿರಬಹುದು. ಕೇಂದ್ರೀಯ ಬೆಂಗಳೂರು ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿರುವುದರಿಂದ ಅಲ್ಲಿನ ಶಾಲಾ ಕಾಲೇಜುಗಳನ್ನು ಬೇಗ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಕಮೀಶನರ್ ಹೇಳಿದರು.

ಬೆಂಗಳೂರು, ಜೂನ್ 4: ನಿನ್ನೆ ರಾತ್ರಿ ನಡೆದ ಐಪಿಎಲ್ ಸೀಸನ್ 18 ರ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್ ಎಲೆವೆನ್ ತಂಡವನ್ನು ಸೋಲಿಸಿದ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಯಾವುದೇ ರೀತಿಯ ಘಟನೆ ಆಸ್ಪದವೀಯದ ಬೆಂಗಳೂರಿನ ಪ್ರಜ್ಞಾವಂತ ನಿವಾಸಿಗಳು ಧನ್ಯವಾದ ಮತ್ತು ಕೃತಜ್ಞತೆಗಳನ್ನು ನಗರ ಪೊಲೀಸ್ ಕಮೀಶನರ್ ಬಿ ದಯಾನಂದ (B Dayanand) ಸಲ್ಲಿಸಿದರು. ಇವತ್ತು ಆರ್​ಸಿಬಿ ಆಟಗಾರರನ್ನು ಕರ್ನಾಟಕ ಸರ್ಕಾರ ಸನ್ಮಾನಿಸಲಿದೆ, ಅದಾದ ಬಳಿಕ ಅವರು ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಲಿದ್ದಾರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​ಸಿಬಿ ಆಡಳಿತ ಮಂಡಳಿಗಳು ಸತ್ಕಾರ ಕೂಟ ಮತ್ತು ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಎರಡೂ ಕಡೆ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಟಾಪ್ ಕಾಪ್ ಹೇಳಿದರು.

ಇದನ್ನೂ ಓದಿ:  ಆರ್​ಸಿಬಿಗೆ ಐಪಿಎಲ್ ಟ್ರೋಫಿ: ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಕ್ರೌರ್ಯ, ಯುವಕನಿಗೆ ಚಾಕು ಇರಿತ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ