AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಜೊತೆ ಕೆಲ ನಾಯಕರ ಅಸಮಾಧಾನ: ತಂದೆ ಪರ ಅಖಾಡಕ್ಕಿಳಿದ ಸಚಿವ ಯತೀಂದ್ರ

ಸಿದ್ದರಾಮಯ್ಯ ಜೊತೆ ಕೆಲ ನಾಯಕರ ಅಸಮಾಧಾನ: ತಂದೆ ಪರ ಅಖಾಡಕ್ಕಿಳಿದ ಸಚಿವ ಯತೀಂದ್ರ

ಪ್ರಸನ್ನ ಹೆಗಡೆ
|

Updated on: Aug 28, 2026 | 1:49 PM

Share

ತಂದೆ ಸಿದ್ದರಾಮಯ್ಯನವರ ಪರವಾಗಿ ರಾಜಕೀಯ ಅಖಾಡಕ್ಕಿಳಿದಿರುವ ಯತೀಂದ್ರ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯನವರಿಂದ ದೂರವಾಗಿದ್ದ ನಾಯಕರನ್ನು ಮತ್ತೆ ಹತ್ತಿರ ತರುವ ಮೂಲಕ ಅವರ ರಾಜಕೀಯ ಶಕ್ತಿ ವೃದ್ಧಿಸಲು ಯತೀಂದ್ರ ಪ್ರಯತ್ನಿಸುತ್ತಿದ್ದಾರೆ. ಈ ಸಭೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.

ಬೆಂಗಳೂರು, ಆಗಸ್ಟ್​​ 27: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯನವರೊಂದಿಗಿನ ಅಸಮಾಧಾನದಿಂದ ದೂರವಾಗಿದ್ದ ನಾಯಕರನ್ನು ಮತ್ತೆ ಹತ್ತಿರ ತರುವ ಪ್ರಯತ್ನ ಇದಾಗಿದೆ. ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯ ರಾಜಕೀಯ ಶಕ್ತಿಯನ್ನು ಮರುಸ್ಥಾಪಿಸಲು ಹಾಗೂ ಆಪ್ತ ನಾಯಕರನ್ನು ಮತ್ತೆ ಸೆಳೆಯಲು ಅಖಾಡಕ್ಕಿಳಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಯತೀಂದ್ರ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಸಭೆಗಳನ್ನು ಸೌಹಾರ್ದಯುತ ಭೇಟಿ ಎಂದು ಬಣ್ಣಿಸಲಾಗಿದ್ದರೂ, ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂಬುದು ಸ್ಪಷ್ಟ. ಸಿದ್ದರಾಮಯ್ಯನವರು ತಮ್ಮ ಪುತ್ರನ ಮೂಲಕ ರಾಜಕೀಯ ಧ್ರುವೀಕರಣದ ಲೆಕ್ಕಾಚಾರ ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us