Minister Vijayanand Kashappanavar Oath: ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ

Edited By:

Updated on: Aug 03, 2026 | 7:31 PM

ಮುಖ್ಯಾಂಶಗಳು

  • ಸಿಎಂ ಡಿ.ಕೆ ಶಿವಕುಮಾರ್‌ ಸಚಿವ ಸಂಪುಟ ಸೇರಿದ ವಿಜಯಾನಂದ ಕಾಶಪ್ಪನವರ
  • ಬುದ್ಧ, ಬಸವ, ಅಂಬೇಡ್ಕರ್‌ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
  • ಪದಗ್ರಹಣ ವೇಳೆ ತಡಬಡಾಯಿಸಿದ ಶಾಸಕ

ನೂತನ ಸಚಿವ ವಿಜಯಾನಂದ ಕಾಶಪ್ಪನವರ ಪದಗ್ರಹಣ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಂಗವಾಗಿ ವಿಜಯಾನಂದ ಕಾಶಪ್ಪನವರ ನೂತನ ಸಚಿವರಾಗಿ ಅಧಿಕಾರ ಮತ್ತು ಗೋಪ್ಯತಾ ಪ್ರಮಾಣ ವಚನ ಸ್ವೀಕರಿಸಿದರು. ಅವರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕೂಡಲಸಂಗಮದೇವನ ಹೆಸರಿನಲ್ಲಿ ಪ್ರಮಾಣ ಮಾಡಿ, ಸಂವಿಧಾನಕ್ಕೆ ನಿಷ್ಠೆ, ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.

ಬೆಂಗಳೂರು, ಆಗಸ್ಟ್​ 03: ಸಿಎಂ ಡಿಕೆ ಶಿವಕುಮಾರ್​ ಸಂಪುಟದಲ್ಲಿ 19 ಸಚಿವರ ಪೈಕಿ ವಿಜಯಾನಂದ ಕಾಶಪ್ಪನವರ್​​​ ಕೂಡ ಒಬ್ಬರು. ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದ ಕಾಶಪ್ಪನವರ್, ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ವೇಳೆ ತಡಬಡಾಯಿಸಿದ ಕಾಶಪ್ಪನವರ್, ಕೂಡಲಸಂಗಮೇಶ್ವರ, ಪಂಚಪೀಠಾದೀಶ್ವರರು, ಬುದ್ಧ, ಬಸವ, ಅಂಬೇಡ್ಕರ್‌ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೀಗೆ ದೇವರ ಸಾಲು ಹೆಚ್ಚಾಗ್ತಿದ್ದಂತೆ ರಾಜ್ಯಪಾಲರಿಂದ ಸೂಚನೆ ಬಂತು. ಕೊನೆಗೆ ಸಂವಿಧಾನದ ಹೆಸರು ಹೇಳಿ ತಮ್ಮ ಪದಗ್ರಹಣ ಮುಗಿಸಿದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 03, 2026 07:28 PM
Loading...
Unable to load recommendations.
Follow Us