ಯಶವಂತಪುರ ಎಪಿಎಂಸಿಗೆ ಸಿಎಂ ಭೇಟಿ: ಖುದ್ದು ಆಲೂಗಡ್ಡೆ ಕತ್ತರಿಸಿ ಪರಿಶೀಲನೆ ನಡೆಸಿದ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ, ಆಲೂಗಡ್ಡೆ ಬೆಳೆ ಬೆಳೆದಿರುವ ರೈತರೊಂದಿಗೆ ಸಂವಾದ ನಡೆಸಿದರು. ಮಳೆಯ ಅಭಾವದಿಂದ ಇಳುವರಿ ಕುಂಠಿತ, ಕೀಟಬಾಧೆ ಹಾಗೂ ಸ್ಥಳೀಯ ಆಲೂಗಡ್ಡೆಗೆ ಕಡಿಮೆ ಬೆಲೆ ಸಿಗುತ್ತಿರುವ ಬಗ್ಗೆ ರೈತರು ತಮ್ಮ ಅಳಲು ತೋಡಿಕೊಂಡರು. ಇದರಿಂದ ಬಂಡವಾಳವೂ ವಾಪಸ್ ಬರುತ್ತಿಲ್ಲ ಎಂದು ರೈತರು ಸಿಎಂಗೆ ವಿವರಿಸಿದರು.
ಬೆಂಗಳೂರು, ಸೆಪ್ಟೆಂಬರ್ 08: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಲೂಗಡ್ಡೆ ಬೆಳೆಗಾರರ ಸಮಸ್ಯೆ ಆಲಿಸಿದ ಸಿಎಂ, ವ್ಯಾಪಾರಿಗಳೊಂದಿಗೂ ಸಂವಾದ ನಡೆಸಿದ್ದಾರೆ. ರೈತರು ತಮ್ಮ ಆಲೂಗಡ್ಡೆ ಬೆಳೆಗೆ ಎದುರಾಗಿರುವ ಸಂಕಷ್ಟಗಳನ್ನು ಸಿಎಂಗೆ ವಿವರಿಸಿದ್ದು, ಮಳೆಯ ಅಭಾವದಿಂದಾಗಿ ಈ ವರ್ಷ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಸಕಾಲಕ್ಕೆ ಮಳೆಯಾಗದೆ ಮೂರು ತಿಂಗಳಾಯಿತೆಂದು ನೋವಿನ ಮಾತುಗಳನ್ನಾಡಿದ್ದಾರೆ. ಖುದ್ದಾಗಿ ಹಸಿ ಆಲೂಗಡ್ಡೆಯನ್ನು ತಿಂದು ಮುಖ್ಯಮಂತ್ರಿಗಳು ಗುಣಮಟ್ಟದ ಪರಿಶೀಲಿಸಿದ ಪ್ರಸಂಗವೂ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 08, 2026 11:22 AM
Follow Us

