ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ: 2 ವರ್ಷದ ಹಿಂದೆ ಇದೇ ದಿನ ಬೆಳಗಾವಿಗೆ ಭೇಟಿ ನೀಡಿದ್ದ ರುವಾಂಡಾ ಅಧಿಕಾರಿಗಳು
ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ನಡೆದಿದೆ. ಬೆಂಗಳೂರು, ಬೆಳಗಾವಿಯ ಮನೆ ಕಚೇರಿಗಳ ಮೇಲೆ ಇಂದು (ಸೆಪ್ಟೆಂಬರ್ 09) ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಕಾಕತಾಳಿಯ ಎಂಬಂತೆ ಕಳೆದ 2 ವರ್ಷದ ಹಿಂದೆ ಇದೇ ದಿನ ಬೆಳಗಾವಿಗೆ ಆಫ್ರಿಕಾದ ರುವಾಂಡಾ ಅಧಿಕಾರಿಗಳು ಭೇಟಿ ನೀಡಿದ್ದು, ಆಗ ಸತೀಶ್ ಜಾರಕಿಹೊಳಿ ಅವರು ತಮ್ಮ ಎರಡು ಶುಗರ್ ಫ್ಯಾಕ್ಟರಿಗಳನ್ನು ತೋರಿಸಿ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲದೇ ಜಾರಕಿಹೊಳಿ ಸಹ ಎರಡ್ಮೂರು ಬಾರಿ ರುವಾಂಡಾಕ್ಕೆ ಹೋಗಿಬಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಇಡಿ ದಾಳಿಯಾಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಬೆಳಗಾವಿ, (ಸೆಪ್ಟೆಂಬರ್ 09): ಸಚಿವ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ನಡೆದಿದೆ. ಬೆಂಗಳೂರು, ಬೆಳಗಾವಿಯ ಮನೆ ಕಚೇರಿಗಳ ಮೇಲೆ ಇಂದು (ಸೆಪ್ಟೆಂಬರ್ 09) ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಕಾಕತಾಳಿಯ ಎಂಬಂತೆ ಕಳೆದ 2 ವರ್ಷದ ಹಿಂದೆ ಇದೇ ದಿನ ಬೆಳಗಾವಿಗೆ ಆಫ್ರಿಕಾದ ರುವಾಂಡಾ ಅಧಿಕಾರಿಗಳು ಭೇಟಿ ನೀಡಿದ್ದು, ಆಗ ಸತೀಶ್ ಜಾರಕಿಹೊಳಿ ಅವರು ತಮ್ಮ ಎರಡು ಶುಗರ್ ಫ್ಯಾಕ್ಟರಿಗಳನ್ನು ತೋರಿಸಿ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲದೇ ಜಾರಕಿಹೊಳಿ ಸಹ ಎರಡ್ಮೂರು ಬಾರಿ ರುವಾಂಡಾಕ್ಕೆ ಹೋಗಿಬಂದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಇಡಿ ದಾಳಿಯಾಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ವಿದೇಶದಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಈ ದಾಳಿ ಆಯ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ನಮ್ಮ ಬೆಳಗಾವಿಯ ಪ್ರತಿನಿಧಿ ಸಹದೇವ್ ಮಾನೆ ಅವರು ಹೆಚ್ಚಿನ ವಿವರ ನೀಡಿದ್ದಾರೆ ನೋಡಿ.

