ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಭೇಷ್ ಅನಿಸಿಕೊಂಡಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡ ಮಧು ಬಂಗಾರಪ್ಪ
ಶಿಕ್ಷಣದ ಗುಣಮಟ್ಟ ಉತ್ತಮಗೊಳ್ಳುತ್ತಿರುವ ಬಗ್ಗೆಯೂ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ 625/625 ಅಂಕಗಳನ್ನು ಪಡೆದಿದ್ದರು, ಆದರೆ ಈ ಬಾರಿ ರೀಇವಾಲ್ಯುಯೇಷನ್ ಮಾಡಿಸಿದ 4 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 51 ವಿದ್ಯಾರ್ಥಿಗಳು ಶತ ಪ್ರತಿಶತ ಅಂಕಗಳನ್ನು ಪಡೆದರು ಮತ್ತು ಇವರಲ್ಲಿ ಒಬ್ಬರು ಸರ್ಕಾರೀ ಶಾಲೆಯ ವಿದ್ಯಾರ್ಥಿ ಅಂತ ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ ಎಂದು ಸಚಿವ ಹೇಳಿದರು.
ಶಿವಮೊಗ್ಗ, ಜೂನ್ 14: ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಹಳ ಖುಷಿಯಲ್ಲಿದ್ದಾರೆ ಮತ್ತು ಅದಕ್ಕೆ ಕಾರಣಗಳೂ ಇವೆ. ಅವರು ಸಚಿವನಾಗಿ ಅಧಿಕಾರವಹಿಸಿಕೊಂಡು ಎರಡು ವರ್ಷಗಳಾಗಿವೆ ಮತ್ತು ಈ ಅವಧಿಯಲ್ಲಿ ಅವರಿಗೆ ಮಾಡಿರುವ ಕೆಲಸದ ಬಗ್ಗೆ ತೃಪ್ತಿಯಿದೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ತನ್ನ ಕಾರ್ಯವೈಖರಿಯನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ (CM Siddaramaiah) ಶಹಬ್ಬಾಸ್ಗಿರಿ ನೀಡಿದ್ದನ್ನು ಸಂತೋಷದಿಂದ ಹೇಳಿಕೊಂಡರು. ದೇಶದಲ್ಲೇ ಮೊದಲ ಬಾರಿಗೆ ತಂದಿರುವ ಮೂರು ಪರೀಕ್ಷೆ ನೀತಿಯಿಂದ ಸಾವಿರಾರು ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ, ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗದವರು ಎರಡನೇ ಮತ್ತು ಮೂರನೇ ಪ್ರಯತ್ನದಲ್ಲಿ ಪರೀಕ್ಷೆ ಬರೆದು ಪಾಸಾಗಿ ಅವರ ಶೈಕ್ಷಣಿಕ ವರ್ಷ ಹಾಳಾಗದ ಅವಕಾಶವನ್ನು ಹೊಸ ನೀತಿ ಕಲ್ಪಿಸುತ್ತದೆ ಎಂದು ಮಧು ಹೇಳಿದರು.
ಇದನ್ನೂ ಓದಿ: SSLC ವಿದ್ಯಾರ್ಥಿಗಳಿಗೆ ಬಿಗ್ ಅಪ್ಡೇಟ್ ನೀಡಿದ ಮಧು ಬಂಗಾರಪ್ಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ