AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಆರೋಪಿಯೇ ಹೊರತು ಅಪರಾಧಿಯಲ್ಲ, ಆರೋಪಗಳು ಎಲ್ಲರ ಮೇಲೂ ಬರುತ್ತವೆ: ಭವ್ಯಾ, ಅಭಿಮಾನಿ

ದರ್ಶನ್ ಆರೋಪಿಯೇ ಹೊರತು ಅಪರಾಧಿಯಲ್ಲ, ಆರೋಪಗಳು ಎಲ್ಲರ ಮೇಲೂ ಬರುತ್ತವೆ: ಭವ್ಯಾ, ಅಭಿಮಾನಿ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Dec 16, 2024 | 4:03 PM

Share

ಆರೋಪಗಳು ಎಲ್ಲರ ಮೇಲೂ ಬರುತ್ತವೆ, ಆದರೆ ಅವು ಬಂದಾಗ ಎದೆಗುಂದಬಾರದು, ದೈರ್ಯವಾಗಿ ಆರೋಪವನ್ನು ಎದುರಿಸಬೇಕು, ನಟ ದರ್ಶನ್ ಮೇಲೆ ಕೊಲೆ ಅರೋಪ ಬಂದಿದೆ ಎನ್ನುವ ಕಾರಣಕ್ಕೆ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯೇನೂ ಕಡಿಮೆಯಾಗಿಲ್ಲ ಎಂದು ಹೇಳುವ ಭವ್ಯಾ ಇದಕ್ಕೂ ಮೊದಲು ಅನೇಕ ಸಲ ದರ್ಶನ್ ನೋಡಲು ಬಂದಿದ್ದರಂತೆ.

ಬೆಂಗಳೂರು: ನಗರದವರೇ ಆಗಿರುವ ಭವ್ಯಾ ಸ್ನಾತಕೋತ್ತರ ಪದವೀಧರೆ ಮತ್ತು ನಟ ದರ್ಶನ್ ಅವರ ಕಟ್ಟಾಭಿಮಾನಿ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುತ್ತಾರೆಂಬ ಸುದ್ದಿ ಹೊರಬಿದ್ದ ಬಳಿಕ ಕಳೆದ ಮೂರು ದಿನಗಳಿಂದ ಸತತವಾಗಿ ದರ್ಶನ್ ಮನೆಯಿರುವ ಆರ್ ಆರ್ ನಗರಕ್ಕೆ ಬರುತ್ತಿರುವ ಭವ್ಯಾ ನಟ ಒಮ್ಮೆ ಕಣ್ಣಿಗೆ ಬಿದ್ದರೆ ಸಾಕು, ನೆಮ್ಮದಿಯಿಂದ ಹೋಗುತ್ತೇನೆ ಅನ್ನುತ್ತಾರೆ. ದರ್ಶನ್ ಆರೋಪಿಯೇ ಹೊರತು ಅಪರಾಧಿ ಅಲ್ಲ, ಆದರೆ ಇಡೀ ಪ್ರಕರಣದ ಬಗ್ಗೆ ಅವರು ಏನು ಹೇಳುತ್ತಾರೆ ಅನ್ನೋದನ್ನು ಕೇಳಬೇಕೆನ್ನುವ ಕುತೂಹಲ ತನಗಿದೆ ಎಂದು ಭವ್ಯಾ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಾಮೀನು ಪ್ರಕ್ರಿಯೆ ಮುಗಿಸಲು ಕೋರ್ಟ್​ಗೆ ತೆರಳಿದ ದರ್ಶನ್

Published on: Dec 16, 2024 04:02 PM
Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.