AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಮುಂಚೆ ಗೌತಮಿ ಮತ್ತು ಧನರಾಜ್ ಎಲಿಮಿನೇಟ್ ಆಗಿದ್ದಾರೆ. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿರುವ ಗೌತಮಿ, ಮಾಧ್ಯಮಗಳೊಟ್ಟಿಗೆ ಮಾತನಾಡಿ, ಉಗ್ರಂ ಮಂಜು ಅವರ ಜೊತೆಗಿನ ಗೆಳೆತನ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮಂಜುನಾಥ ಸಿ.
|

Updated on: Jan 20, 2025 | 7:04 PM

Share

ಬಿಗ್​ಬಾಸ್ ಕನ್ನಡ ಸೀಸನ್ 11 ಫಿನಾಲೆ ವಾರಕ್ಕೆ ಎಂಟ್ರಿ ನೀಡಿದೆ. ಇದೇ ವಾರಾಂತ್ಯಕ್ಕೆ ಈ ಸೀಸನ್​ನ ಫಿನಾಲೆ ನಡೆಯಲಿದೆ. ಬಿಗ್​ಬಾಸ್​ ಈ ಸೀಸನ್​ನ ಕೊನೆಯ ವಾರದ ಪಂಚಾಯ್ತಿಯಲ್ಲಿ ಗೌತಮಿ ಮತ್ತು ಧನರಾಜ್ ಎಲಿಮಿನೇಟ್ ಆಗಿದ್ದಾರೆ. ಗೌತಮಿ ಅವರು ಫಿನಾಲೆಗೆ ಹೋಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಆಗಿಲ್ಲ. ಇದೀಗ ಹೊರಗೆ ಬಂದಿರುವ ಗೌತಮಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ಉಗ್ರಂ ಮಂಜು ಅವರೊಟ್ಟಿಗಿನ ಗೆಳೆತನ, ಬೇರೆ ಇತರ ಜೊತೆಗಿನ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಉಗ್ರಂ ಮಂಜು ಅವರ ಮನೆಯವರು ಬಂದು ತಮ್ಮ ಬಗ್ಗೆ ಮಂಜು ಬಳಿ ಆಡಿದ ಮಾತುಗಳ ಬಗ್ಗೆ ಗೌತಮಿ ತುಸು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪತಿ ಮನೆಗೆ ಬಂದಾಗ ಅವರು ಅದೇ ವಿಷಯವನ್ನು ಹೇಳಿದ ರೀತಿಗೂ ಮಂಜು ಮನೆಯವರು ಹೇಳಿದ ರೀತಿಗೂ ವ್ಯತ್ಯಾಸವಿದೆ ಎಂದು ಗೌತಮಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ