AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಹೆಚ್ಚು ಮಾತಾಡಲು ಬಯಸದ ಡಿಕೆ ಶಿವಕುಮಾರ್

ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಹೆಚ್ಚು ಮಾತಾಡಲು ಬಯಸದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 02, 2025 | 6:18 PM

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಪೊಲೀಸ್ ಬಲ ಹೆಚ್ಚಿಸಬೇಕಿದೆ ಮತ್ತು ಠಾಣೆಗಳ ಸಂಖ್ಯೆಯನ್ನು ಜಾಸ್ತಿ ಮಾಡಬೇಕೆಂದು ವಾಣಿಜ್ಯ ಮಂಡಳಿಯವರು ಮಾಡಿರುವ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್ ಇಂದು ಲೋಕ ಸಭೆಯಲ್ಲಿ ಪಾಸಾದ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಏನನ್ನೂ ಹೇಳದೆ, ನೋಡೋಣ, ಮುಂದೆ ಮಾತಾಡೋಣ ಎಂದಷ್ಟೇ ಹೇಳಿದರು.

ಹುಬಳ್ಳಿ, ಏಪ್ರಿಲ್ 2: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಕಾರಣ ಕಾಂಗ್ರೆಸ್ ಸೇರುತ್ತಾರೆ, ಹೊಸ ಪಕ್ಷ ಕಟ್ಟುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇವತ್ತು ಹುಬ್ಬಳ್ಳಿಗೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್​ರನ್ನು ಈ ವಿಷಯದ ಬಗ್ಗೆ ಕೇಳಿದಾಗ, ಅದಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ಪ್ರತಿಕ್ರಿಯಿಸಿದರು. ಮೊದಲಿಗೆ ಯತ್ನಾಳ್ ಬಿಜೆಪಿಗೆ ಬರುವುದನ್ನು ಸುಳ್ಳು ಎಂದ ಶಿವಕುಮಾರ್, ಬೇರೆ ಪಕ್ಷಗಳ ಮುಖಂಡರನ್ನು ಕಟ್ಟಿಕೊಂಡು ತನಗೇನಾಗಬೇಕಿದೆ ಎಂದು ಹೇಳುತ್ತಾರೆ.

ಇದನ್ನೂ ಓದಿ:   ಬಸನಗೌಡ ಯತ್ನಾಳ್​ಗೆ ಉತ್ತರ ಕರ್ನಾಟಕದ ಬಗ್ಗೆಯಿರುವ ಕಾಳಜಿ ಕೊಂಡಾಡಿದ ಮುರುಗೇಶ್ ನಿರಾಣಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 02, 2025 06:17 PM