‘ಅವರಿಗೆ ಫ್ಯಾನ್ಸ್ ಇದಾರೆ, ನಾವು ಮಾತಾನಾಡುವುದರಿಂದ ಅವರಿಗೆ ಬೇಸರ ಆಗುತ್ತದೆ’; ದರ್ಶನ್ ಬಗ್ಗೆ ಸುದೀಪ್ ಮಾತು
ದರ್ಶನ್ ಅರೆಸ್ಟ್ ಆದ ವಿಚಾರಕ್ಕೆ ಸಂಬಂಧಿಸಿ ಅನೇಕರು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ದರ್ಶನ್ ಈ ಮೊದಲು ಗೆಳೆಯರಾಗಿದ್ದರು. ಈಗ ಅವರ ಗೆಳೆತನ ಮುರಿದು ಬಿದ್ದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ನನ್ನ ಮಾತಿಂದ ಫ್ಯಾನ್ಸ್ಗೆ ಬೇಸರ ಆಗುತ್ತದೆ ಎಂದಿದ್ದಾರೆ ಅವರು.
ದರ್ಶನ್ ಅರೆಸ್ಟ್ ಆದ ವಿಚಾರಕ್ಕೆ ಸಂಬಂಧಿಸಿ ಅನೇಕರು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ದರ್ಶನ್ ಈ ಮೊದಲು ಗೆಳೆಯರಾಗಿದ್ದರು. ಈಗ ಅವರ ಗೆಳೆತನ ಮುರಿದು ಬಿದ್ದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಏನು ಹೇಳಬೇಕೋ ಅದನ್ನು ಮಾತನಾಡಿ ಆಗಿದೆ. ಅವರಿಗೆ ಅಂತ ಊರೆಲ್ಲ ಫ್ಯಾನ್ಸ್ ಇದಾರೆ. ಕುಟುಂಬದವರು ಇದ್ದಾರೆ. ನಾವು ಮಾತಾನಾಡುವುದರಿಂದ ಅವರಿಗೆ ಬೇಸರ ಆಗುತ್ತದೆ. ಇದಲ್ಲದೆ ಮತ್ತೊಂದು ಕುಟುಂಬ ಇದೆ. ಅವರಿಗೂ ನೋವಾಗಬಹುದು. ಸರ್ಕಾರ, ಕಾನೂನು ಇದೆ. ಅದನ್ನು ನಂಬಬೇಕು. ಪ್ರತಿಯೊಂದನ್ನೂ ನಂಬಬೇಕು’ ಎಂದು ಸುದೀಪ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

