ಟ್ರಾನ್ಸ್ಫರ್ ದಂಧೆಯ ವಿವರ ಕೊಟ್ಟರೆ ತನಿಖೆ ಮಾಡಿಸುವ ತಾಕತ್ತು ಸಿದ್ದರಾಮಯ್ಯಗಿದೆಯಾ? ಹೆಚ್ ಡಿ ಕುಮಾರಸ್ವಾಮಿ
ದಕ್ಕೂ ಮೊದಲು ಹಲವಾರು ಪ್ರಕರಣಗಳ ದಾಖಲೆಗಳನ್ನು ಕೊಟ್ಟಾಗಿದೆ, ಅನೇಕ ವಿಷಯಗಳನ್ನು ಪ್ರಸ್ತಾಪಿಸಿಯಾಗಿದೆ ಅದರಿಂದ ಏನು ಪ್ರಯೋಜನವಾಯಿತು? ಎನ್ನುವ ಅವರು ಇದರಲ್ಲಿ ತನ್ನದೇನೂ ತಪ್ಪಿಲ್ಲ, ಸಮಾಜದಲ್ಲಿರುವ ಅವ್ಯವಸ್ಥೆಯಿಂದ ಹೀಗಾಗುತ್ತಿದೆ, ಇದನ್ನು ಸರಿಪಡಿಸುವವರು ಎನ್ನುತ್ತಾ ವೇದಾಂತದ ಕಡೆ ವಾಲುತ್ತಾರೆ.
ಮೈಸೂರು: ನಿನ್ನೆಯವರೆಗೆ ಟ್ರಾನ್ಸ್ ಫರ್ ಗಳ ವಿಷಯದಲ್ಲಿ ನಡೆದ ಭ್ರಷ್ಟಾಚಾರದ ಪೆನ್ ಡ್ರೈವ್ ಕೊಡ್ತೀನಿ ಎನ್ನುತ್ತಿದ್ದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಈಗ ವಿವರಗಳನ್ನೆಲ್ಲ ಕೊಡ್ತೀನಿ, ಸಿದ್ದರಾಮಯ್ಯನವರಿಗೆ (Siddaramaiah) ತನಿಖೆ ಮಾಡಿಸುವ ತಾಕತ್ತಿದೆಯಾ? ಅನ್ನುತ್ತ್ತಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮಾಧ್ಯಮದವರು ತನ್ನನ್ನು ಹಿಟ್ ಅಂಡ್ ರನ್ ಪಾರ್ಟಿ, ಯಾವ ಪ್ರಕರಣಕ್ಕೂ ತಾರ್ಕಿಕ ಅಂತ್ಯಕ್ಕೆ ಕೊಂಡ್ಯೊಯಲ್ಲ ಅನ್ನುತ್ತಾರೆ. ಆದರೆ ತಾನು ಹಿಟ್ ಅಂಡ್ ರನ್ (hit and run) ಅಲ್ಲ, ಯಾವುದೇ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಾದವರು ಯಾರು? ಎಂದು ಪ್ರಶ್ನಿಸಿದರು. ಇದಕ್ಕೂ ಮೊದಲು ಹಲವಾರು ಪ್ರಕರಣಗಳ ದಾಖಲೆಗಳನ್ನು ಕೊಟ್ಟಾಗಿದೆ, ಅನೇಕ ವಿಷಯಗಳನ್ನು ಪ್ರಸ್ತಾಪಿಸಿಯಾಗಿದೆ ಅದರಿಂದ ಏನು ಪ್ರಯೋಜನವಾಯಿತು? ಎನ್ನುವ ಅವರು ಇದರಲ್ಲಿ ತನ್ನದೇನೂ ತಪ್ಪಿಲ್ಲ, ಸಮಾಜದಲ್ಲಿರುವ ಅವ್ಯವಸ್ಥೆಯಿಂದ ಹೀಗಾಗುತ್ತಿದೆ, ಇದನ್ನು ಸರಿಪಡಿಸುವವರು ಎನ್ನುತ್ತಾ ವೇದಾಂತದ ಕಡೆ ವಾಲುತ್ತಾರೆ. ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಕೊಡುವುದಾಗಿ ಸಿದ್ದರಾಮಯ್ಯ ಹೇಳಿರುವುದಕ್ಕೆ ಅವರು, ಏನು ಉತ್ತರ ಕೊಡುತ್ತಾರೆ, ಯಾವ ಉತ್ತರ ಕೊಡುತ್ತಾರೆ ಮಾಧ್ಯಮದ ವರದಿಗಾರರನ್ನೇ ಪ್ರಶ್ನಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದಲ್ಲಿದ್ದಾಗಲೇ, ಪಕ್ಷದ ಚಟುವಟಿಕೆಗಳಲ್ಲೇ ನನ್ನ ಸಂಪರ್ಕದಲ್ಲಿ ಇರಲಿಲ್ಲ ಪ್ರಜ್ವಲ್: ಹೆಚ್ಡಿ ಕುಮಾರಸ್ವಾಮಿ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

