Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು

‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು

ಮದನ್​ ಕುಮಾರ್​
|

Updated on: Feb 13, 2025 | 8:32 PM

ಖ್ಯಾತ ನಿರ್ಮಾಪಕ ಕೆ. ಮಂಜು ಅವರು ‘ವಿಷ್ಣುಪ್ರಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪುತ್ರ ಶ್ರೇಯಸ್ ಹೀರೋ ಆಗಿ ನಟಿಸಿದ್ದಾರೆ. ವಿ.ಕೆ. ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಕುರಿತು ನಿರ್ಮಾಪಕ ಕೆ. ಮಂಜು ಅವರು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ, ನಿರ್ಮಾಪಕ ಕೆ. ಮಂಜು ಅವರು ತಮ್ಮ ಮಗನ ಸಿನಿಮಾಗೆ ‘ವಿಷ್ಣುಪ್ರಿಯಾ’ ಎಂದೇ ಶೀರ್ಷಿಕೆ ಇಟ್ಟಿದ್ದು ವಿಶೇಷ. ಈ ಸಿನಿಮಾ ಹೇಗೆ ಸೆಟ್ಟೇರಿತು? ಈ ಟೈಟಲ್​ ಇಟ್ಟಿದು ಯಾಕೆ ಎಂಬುದನ್ನು ಮಂಜು ಅವರು ವಿವರಿಸಿದ್ದಾರೆ. ‘ಈ ಸಿನಿಮಾದ ಕಥೆಯಲ್ಲಿ ಹೆಣ್ಣಿಗೆ ಬಹಳ ಗೌರವ, ಮಹತ್ವ ಇದೆ. ಈ ಮಣ್ಣಿನ ಹೆಣ್ಣಿಗೆ ವಿಷ್ಣುವರ್ಧನ್​ ಅವರುತುಂಬ ಗೌರವ ನೀಡುತ್ತಿದ್ದರು. ಹಾಗಾಗಿ ಹೀರೋ ಪಾತ್ರಕ್ಕೆ ವಿಷ್ಣು ಎಂದು ಹೆಸರು ಇಟ್ಟೆವು. ನಾಯಕಿ ಹೆಸರು ಪ್ರಿಯಾ. ಆದ್ದರಿಂದ ವಿಷ್ಣು ಪ್ರಿಯಾ ಎಂದು ಶೀರ್ಷಿಕೆ ಇಟ್ಟೆವು’ ಎಂದಿದ್ದಾರೆ ಕೆ. ಮಂಜು. ಫೆ.21ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಶ್ರೇಯಸ್ ಜೊತೆ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಜೋಡಿಯಾಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.