‘ವಿಷ್ಣುಪ್ರಿಯಾ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ವಿವರಿಸಿದ ಕೆ. ಮಂಜು
ಖ್ಯಾತ ನಿರ್ಮಾಪಕ ಕೆ. ಮಂಜು ಅವರು ‘ವಿಷ್ಣುಪ್ರಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪುತ್ರ ಶ್ರೇಯಸ್ ಹೀರೋ ಆಗಿ ನಟಿಸಿದ್ದಾರೆ. ವಿ.ಕೆ. ಪ್ರಕಾಶ್ ಅವರು ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಕುರಿತು ನಿರ್ಮಾಪಕ ಕೆ. ಮಂಜು ಅವರು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ, ನಿರ್ಮಾಪಕ ಕೆ. ಮಂಜು ಅವರು ತಮ್ಮ ಮಗನ ಸಿನಿಮಾಗೆ ‘ವಿಷ್ಣುಪ್ರಿಯಾ’ ಎಂದೇ ಶೀರ್ಷಿಕೆ ಇಟ್ಟಿದ್ದು ವಿಶೇಷ. ಈ ಸಿನಿಮಾ ಹೇಗೆ ಸೆಟ್ಟೇರಿತು? ಈ ಟೈಟಲ್ ಇಟ್ಟಿದು ಯಾಕೆ ಎಂಬುದನ್ನು ಮಂಜು ಅವರು ವಿವರಿಸಿದ್ದಾರೆ. ‘ಈ ಸಿನಿಮಾದ ಕಥೆಯಲ್ಲಿ ಹೆಣ್ಣಿಗೆ ಬಹಳ ಗೌರವ, ಮಹತ್ವ ಇದೆ. ಈ ಮಣ್ಣಿನ ಹೆಣ್ಣಿಗೆ ವಿಷ್ಣುವರ್ಧನ್ ಅವರುತುಂಬ ಗೌರವ ನೀಡುತ್ತಿದ್ದರು. ಹಾಗಾಗಿ ಹೀರೋ ಪಾತ್ರಕ್ಕೆ ವಿಷ್ಣು ಎಂದು ಹೆಸರು ಇಟ್ಟೆವು. ನಾಯಕಿ ಹೆಸರು ಪ್ರಿಯಾ. ಆದ್ದರಿಂದ ವಿಷ್ಣು ಪ್ರಿಯಾ ಎಂದು ಶೀರ್ಷಿಕೆ ಇಟ್ಟೆವು’ ಎಂದಿದ್ದಾರೆ ಕೆ. ಮಂಜು. ಫೆ.21ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಶ್ರೇಯಸ್ ಜೊತೆ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಜೋಡಿಯಾಗಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಜ್ಞಾವಿಧಿ

ಟಿವಿ9 ಎಕ್ಸ್ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್

ಸರ್ಕಾರದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
