ಸಿಡಬ್ಲ್ಯೂಸಿ ಸಭೆ ಮುಗಿಸಿಕೊಂಡು ಹೊರಬಂದ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!

ಮಾಧ್ಯಮದವರು, ಹಾಗಲ್ಲ ಸರ್, ನಿಮ್ಮ ಹೇಳಿಕೆ ನಮಗೆ ಇಂಪಾರ್ಟಂಟು ಅಂದಾಗ, ಬೇಡ ಕಣ್ರಯ್ಯ ಅವರೊಂದು ಹೇಳೋದು ನಾನೊಂದು ಹೇಳೋದು ಅಗುತ್ತೆ ಅನ್ನುತ್ತಾರೆ. ಅದರೂ ಬೆಂಬಿಡದ ಪತ್ರಕರ್ತರು ಸರ್ ಸರ್ ಅಂತ ಹತ್ತಿರಕ್ಕೆ ಹೋದಾಗ, ನೋ ಎನ್ನುವಂತೆ ಕೈಯೆತ್ತಿ ಕಾರಿನ ಕಡೆ ಹೋಗುತ್ತಾರೆ.

ಸಿಡಬ್ಲ್ಯೂಸಿ ಸಭೆ ಮುಗಿಸಿಕೊಂಡು ಹೊರಬಂದ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತಾಡಲಿಲ್ಲ!
|

Updated on: Jun 08, 2024 | 6:45 PM

ನವದೆಹಲಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇವತ್ತು ರಾಷ್ಟ್ರದ ರಾಜಧಾನಿಯಲ್ಲಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (CWC meeting) ಭಾಗವಹಿಸಲು ಇಂದು ಅವರು ತಮ್ಮ ಡೆಪ್ಯುಟಿ ಡಿಕೆ ಶಿವಕುಮಾರ್ (DK Shivakumar) ಜೊತೆ ದೆಹಲಿಗೆ ಬಂದಿದ್ದಾರೆ. ಸಭೆ ಮುಗಿಸಿಕೊಂಡು ಹೊರಬಂದಾಗ ಅವರು ಮಾಧ್ಯಮ ಪ್ರತಿನಿಧಿಗಳನ್ನು ನೋಡಿ ಮುಗುಳ್ನಗುತ್ತಾರೆಯೇ ಮಾತಾಡುವ ಗೋಜಿಗೆ ಹೋಗಲ್ಲ. ಮೀಟಿಂಗ್ ಏನೆಲ್ಲ ಚರ್ಚೆ ನಡೆಯಿತು ಅಂತ ಕೇಳಿದಾಗ ಎಐಸಿಸಿ ಕಚೇರಿ ಕಡೆ ಕೈ ತೋರಿಸಿ, ಹೇಗೂ ಅವರೊಂದಿಗೆ ನೀವು ಮಾತಾಡ್ತೀರಲ್ಲ, ಅವರೇ ಎಲ್ಲ ಹೇಳ್ತಾರೆ ಅನ್ನುತ್ತಾರೆ. ಮಾಧ್ಯಮದವರು, ಹಾಗಲ್ಲ ಸರ್, ನಿಮ್ಮ ಹೇಳಿಕೆ ನಮಗೆ ಇಂಪಾರ್ಟಂಟು ಅಂದಾಗ, ಬೇಡ ಕಣ್ರಯ್ಯ ಅವರೊಂದು ಹೇಳೋದು ನಾನೊಂದು ಹೇಳೋದು ಅಗುತ್ತೆ ಅನ್ನುತ್ತಾರೆ. ಅದರೂ ಬೆಂಬಿಡದ ಪತ್ರಕರ್ತರು ಸರ್ ಸರ್ ಅಂತ ಹತ್ತಿರಕ್ಕೆ ಹೋದಾಗ, ನೋ ಎನ್ನುವಂತೆ ಕೈಯೆತ್ತಿ ಕಾರಿನ ಕಡೆ ಹೋಗುತ್ತಾರೆ. ಆಮೇಲೆ ಕಾರು ಹತ್ತಿ ಫುಟ್ ಬೋರ್ಡ್ ಮೇಲೆ ನಿಂತು ಚುನಾವಣಾ ಪ್ರಚಾರದಲ್ಲಿ ಮತದಾರರ ಕಡೆ ಕೈ ಬೀಸುವ ಹಾಗೆ ಮಾಧ್ಯಮದವರ ಕಡೆ ಕೈ ಅಲ್ಲಾಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಅಸಮಂಜಸ ಪ್ರತಿಕ್ರಿಯೆ ನೀಡಿದರು!

Follow us
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕಾವೇರಿ ನದಿಲಿ ದೋಣಿಕಡವು ಗ್ರಾಮ ಮುಳುಗಡೆ; ಪ್ರಾಣ ಕೈಯಲ್ಲಿ ಹಿಡಿದುಜನರ ಓಡಾಟ
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!
ಕೊಣ್ಣೂರು ಕುಡುಕ ನದಿಗೆ ಹಾರುವ ಅಪಾಯಕಾರಿ ಸ್ಟಂಟ್ ಮಾಡಿಯೂ ಬಚಾವಾದ!