AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ವಿಧಾನಸಭೆ ಮುಂಗಾರು ಅಧಿವೇಶನ ನೇರ ಪ್ರಸಾರ ಇಲ್ಲಿ ನೋಡಿ

Karnataka Assembly Session: ವಿಧಾನಸಭೆ ಮುಂಗಾರು ಅಧಿವೇಶನ ನೇರ ಪ್ರಸಾರ ಇಲ್ಲಿ ನೋಡಿ

Ganapathi Sharma
|

Updated on:Jul 15, 2024 | 11:16 AM

Share

ಕರ್ನಾಟಕ ವಿಧಾನಮಂಡಲ‌ 16ನೇ ಅಧಿವೇಶನ ಆರಂಭವಾಗಿದೆ. ಮುಡಾ, ವಾಲ್ಮೀಕಿ ಅಕ್ರಮಗಳ ಆರೋಪಗಳ ಮಧ್ಯೆ ಕಲಾಪ ಶುರುವಾಗಿದೆ. ಹಗರಣಗಳ ಅಸ್ತ್ರಗಳನ್ನೇ ಮುಂದಿಟ್ಟುಕೊಂಡು ವಿಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ಸಿದ್ಧವಾಗಿವೆ. ಕಾಂಗ್ರೆಸ್​​ ಇದನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲವೂ ಮೂಡಿದೆ. ಕಲಾಪದ ನೇರ ಪ್ರಸಾರ ಇಲ್ಲಿ ವೀಕ್ಷಿಸಿ.

ಬೆಂಗಳೂರು, ಜುಲೈ 15: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣಗಳ ಭಾರಿ ಚರ್ಚೆಯ ನಡುವೆಯೇ ಕರ್ನಾಟಕ ವಿಧಾನಮಂಡಲ‌ ಮುಂಗಾರು ಅಧಿವೇಶನ ಸೋಮವಾರ ಆರಂಭವಾಯಿತು. ಇದಕ್ಕೂ ಮುನ್ನ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಅತ್ತ ಪರಿಷತ್​ ಕಲಾಪ ಆರಂಭಕ್ಕೂ ಮುನ್ನ ಕಾಂಗ್ರೆಸ್​ ಎಂಎಲ್​ಸಿಗಳ ಸಭೆ ನಡೆಯಿತು. ವಿಧಾನಸೌಧದ ಪರಿಷತ್ ಮುಖ್ಯ ಸಚೇತಕರ ಕಚೇರಿಯಲ್ಲಿ ಮೀಟಿಂಗ್ ನಡೆಸಲಾಯಿತು. ಕಾಂಗ್ರೆಸ್​ ಎಂಎಲ್​ಸಿಗಳ ಜತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು.

ಸಿಎಂ ಸಭೆಯಲ್ಲಿ ಸಚಿವರಾದ ಹೆಚ್​ಕೆ ಪಾಟೀಲ್, ಪರಮೇಶ್ವರ್ ಸೇರಿ ಪ್ರಮುಖರು ಭಾಗಿಯಾದರು. ಸಭೆಯಲ್ಲಿ ಮುಡಾ ಬೆಳವಣಿಗೆಗಳ ಬಗ್ಗೆ ಎಂಎಲ್​ಸಿಗಳಿಗೆ ಸಿದ್ದರಾಮಯ್ಯ ಮಾಹಿತಿ ನೀಡಿದರು. ಪರಿಷತ್​ನಲ್ಲಿ ಬಿಜೆಪಿ, ಜೆಡಿಎಸ್ ಆರೋಪಗಳಿಗೆ ಉತ್ತರ ನೀಡುವ ಬಗ್ಗೆ ಚರ್ಚೆ ನಡೆಯಿತು.

ಈ ಮಧ್ಯೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಜ್ಯದ ಇತಿಹಾಸದಲ್ಲಿ ದಲಿತರಿಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿ ಹಣ ಲೂಟಿ ಹೊಡೆಯಲಾಗಿದೆ ಎಂದು ಟೀಕಿಸಿದರು. ದಲಿತರ ಪರ ಇದ್ದೇವೆ ಅಂತಾ ಹೇಳಿ ಅವರ ಹಣ ಲೂಟಿ ‌ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ಮಾಡ್ತಿದ್ದೇವೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೋಡಬೇಕು. ಸದನದ ಒಳಗೂ ಹೋರಾಟ ‌ಮಾಡುತ್ತೇವೆ ಎಂದು ಅಶೋಕ್​ ಹೇಳಿದರು.

ವಿಧಾನಸಭೆ ಕಲಾಪದ ನೇರ ಪ್ರಸಾರ ಇಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 15, 2024 11:16 AM