AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶುವೈದ್ಯ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದ ಶಾಸಕ ಸುರೇಶ್ ಕುಮಾರ್

ಪಶುವೈದ್ಯ ನೇಮಕಾತಿ ಹಗರಣ: ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದ ಶಾಸಕ ಸುರೇಶ್ ಕುಮಾರ್

ಕಿರಣ್​ ಹನಿಯಡ್ಕ
| Edited By: |

Updated on: Jul 27, 2026 | 9:21 PM

Share

ಪಶುವೈದ್ಯರ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಕರ್ನಾಟಕ ಪ್ರೈವೇಟ್ ಕಮಿಷನ್ ಆಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ಕೆಪಿಎಸ್‌ಸಿ ನಿರಂತರ ಅಕ್ರಮಗಳಿಂದ ಮುಜುಗರಕ್ಕೀಡಾಗಿದ್ದು, ಆರ್. ಅಶೋಕ್ ಮತ್ತು ಚಲವಾದಿ ನಾರಾಯಣಸ್ವಾಮಿ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

ಬೆಂಗಳೂರು, ಜುಲೈ 27: ‘ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸೇವೆ ಎಂಬುದು ಸಂಪೂರ್ಣವಾಗಿ ಮಾಯವಾಗಿದೆ. ಅದು ಸಾರ್ವಜನಿಕ ಸೇವಾ ಆಯೋಗವಾಗಿ ಉಳಿಯದೆ, ಖಾಸಗಿ ಕಮಿಷನ್ ರೂಪ ಪಡೆದುಕೊಂಡಿದೆ’ ಎಂದು ಬಿಜೆಪಿ ಶಾಸಕ ಎಸ್​.ಸುರೇಶ್ ಕುಮಾರ್​ ಟೀಕಿಸಿದ್ದಾರೆ. ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ‘ಕೆಪಿಎಸ್​ಸಿ ಇಂದು ಪ್ರೈವೇಟ್ ಸರ್ವೀಸ್ ಕಮಿಷನ್ ಆಗಿದೆ. ಕೆಪಿಎಸ್​ಸಿಗೆ ಕೂಡ ಮುಜುಗರ ಆಗುವ ರೀತಿ ಹಗರಣ ಆಗಿದೆ. ಹೀಗಾಗಿ ಸಿಬಿಐ ತನಿಖೆಗೆ ಆಗ್ರಹ ಬಗ್ಗೆ ಸಭೆಯಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಸರ್ಕಾರ ಕೂಡ ಕ್ರಮ ವಹಿಸಬೇಕು’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us