NEET Exam
ನೀಟ್ (NEET – National Eligibility cum Entrance Test) ಎಂಬುದು ಭಾರತದಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸಲಾಗುವ ಏಕೈಕ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಎಂಬಿಬಿಎಸ್ (MBBS), ಬಿಡಿಎಸ್ (BDS) ಮತ್ತು ಆಯುಷ್ (AYUSH) ನಂತಹ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಾಗುತ್ತದೆ. ಇದನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಆಯೋಜಿಸುತ್ತದೆ. ಈ ಪರೀಕ್ಷೆಯು ಮುಖ್ಯವಾಗಿ ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) ಮತ್ತು ಜೀವಶಾಸ್ತ್ರ (Biology – Botany & Zoology) ವಿಷಯಗಳನ್ನೊಳಗೊಂಡಿದ್ದು, ಒಟ್ಟು 720 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳ (MCQs) ಮಾದರಿಯಲ್ಲಿರುತ್ತದೆ. ಭಾರತದಲ್ಲಿನ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅತ್ಯಗತ್ಯವಾಗಿದೆ.
ಇನ್ನೂ ಹೆಚ್ಚು ಓದಿವಿದ್ಯಾರ್ಥಿಗಳ ವಿರುದ್ಧ ಧ್ವನಿ ಎತ್ತಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟಿ ಭೂಮಿ ಪೆಡ್ನೇಕರ್
ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬಗ್ಗೆ ಸೆಲೆಬ್ರಿಟಿಗಳಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳಿವೆ. ನಟಿ ಭೂಮಿ ಪೆಡ್ನೇಕರ್ ಅವರು ವಿದ್ಯಾರ್ಥಿಗಳ ಭಾಷೆಯನ್ನು ಟೀಕಿಸಿದ್ದಾರೆ. ಆದರೆ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಅವರು ಖಂಡಿಸಿಲ್ಲ. ಹಾಗಾಗಿ ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
- Madan Kumar
- Updated on: Aug 3, 2026
- 6:04 pm
ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್ಟಿಐ ಅರ್ಜಿ
ನೀಟ್ ಪ್ರತಿಭಟನೆಗಳಿಂದ ಖ್ಯಾತಿ ಗಳಿಸಿದ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ಆರ್ಟಿಐ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ. ಅಭಿಜೀತ್ ಅವರ ದುಬಾರಿ ವಿದೇಶಿ ಶಿಕ್ಷಣದ ವೆಚ್ಚ ಮತ್ತು ಸಿಜೆಪಿ ಸಂಸ್ಥೆಯ ನಿಧಿ ಸಂಗ್ರಹಣೆಯ ಕುರಿತು ಚುನಾವಣಾ ಆಯೋಗ ಮತ್ತು ಜಿಎಸ್ಟಿ ಅಧಿಕಾರಿಗಳಿಂದ ತನಿಖೆಗೆ ಆಗ್ರಹಿಸಲಾಗಿದೆ. ನೋಂದಾಯಿತವಲ್ಲದ ಡಿಜಿಟಲ್ ವೇದಿಕೆಗಳ ಮೂಲಕ ಹಣ ಸಂಗ್ರಹಣೆಯ ಕಾನೂನುಬದ್ಧತೆ ಬಗ್ಗೆ ಚರ್ಚೆ ಶುರುವಾಗಿದೆ.
- Nayana Rajeev
- Updated on: Aug 2, 2026
- 2:56 pm
ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ, ಅರಾಜಕತೆಗಲ್ಲ: ನೀಟ್ ಪ್ರತಿಭಟನೆಗಳ ಕುರಿತು ಸ್ಮೃತಿ ಇರಾನಿ ಖಡಕ್ ಹೇಳಿಕೆ
ನೀಟ್ ಪ್ರತಿಭಟನೆಗಳ ಕುರಿತು ಸ್ಮೃತಿ ಇರಾನಿ ಅವರು 'ಭಿನ್ನಾಭಿಪ್ರಾಯಕ್ಕೆ ಹಕ್ಕಿದೆ, ಅರಾಜಕತೆಗಲ್ಲ' ಎಂದು ಖಡಕ್ ಹೇಳಿದ್ದಾರೆ. ಜೆನ್-ಝಿ ವಿಭಜನೆ ವಾದವನ್ನು ತಳ್ಳಿಹಾಕಿದ ಅವರು, ಪರೀಕ್ಷಾ ಪೇಪರ್ ಸೋರಿಕೆ ತಡೆಯಲು ಕೇಂದ್ರ ಸರ್ಕಾರವು ನಿರ್ಣಾಯಕ ಕಾನೂನು ಕ್ರಮಗಳನ್ನು ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ಭದ್ರತಾ ಸಿಬ್ಬಂದಿಯ ಮೇಲಿನ ಹಿಂಸಾಚಾರವನ್ನು ಬಲವಾಗಿ ಖಂಡಿಸಿ, ಸಮಾಜಘಾತುಕ ಶಕ್ತಿಗಳ ಕುರಿತು ಎಚ್ಚರಿಕೆ ನೀಡಿದರು.
- Nayana Rajeev
- Updated on: Aug 2, 2026
- 1:32 pm
Medical courses: ಕೆಇಎ ವೈದ್ಯಕೀಯ ಪ್ರವೇಶಾತಿ; ಸಿಇಟಿ ಅರ್ಜಿಗೆ ನೀಟ್ ರೋಲ್ ನಂಬರ್ ಸೇರಿಸಲು ಆ.03 ಕೊನೆ ದಿನ
ನೀಟ್ ಅರ್ಹತೆ ಪಡೆದ ಅಭ್ಯರ್ಥಿಗಳು ವೈದ್ಯಕೀಯ, ದಂತವೈದ್ಯಕೀಯ ಹಾಗೂ ಆಯುಷ್ ಕೋರ್ಸ್ಗಳ ಪ್ರವೇಶಾತಿಗೆ ತಮ್ಮ ಸಿಇಟಿ ಅರ್ಜಿಗೆ ನೀಟ್ ರೋಲ್ ನಂಬರ್ ಸೇರಿಸಲು ಕೆಇಎ ಅವಕಾಶ ನೀಡಿದೆ. ರಾಜ್ಯ ಮೆರಿಟ್ ಪಟ್ಟಿ ಪ್ರಕಟವಾಗಿದ್ದು, ಆಗಸ್ಟ್ 3ರೊಳಗೆ ರೋಲ್ ನಂಬರ್ ನಮೂದಿಸುವುದು ಕಡ್ಡಾಯ. ಲಿಂಕ್ ಚಾಲನೆಯಾದ ಮೊದಲ ದಿನವೇ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಯಶಸ್ವಿಯಾಗಿ ನೋಂದಾಯಿಸಿರುವುದು ವರದಿಯಾಗಿದೆ.
- Akshatha Vorkady
- Updated on: Aug 1, 2026
- 9:37 am
ಪೇಪರ್ ಲೀಕ್ ತಡೆಗೆ ಐತಿಹಾಸಿಕ ಕಾನೂನು: ‘ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಕಾಯ್ದೆ 2026’ಕ್ಕೆ ರಾಷ್ಟ್ರಪತಿ ಅಂಕಿತ
ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪೇಪರ್ ಲೀಕ್ ಹಾಗೂ ಅಕ್ರಮಗಳನ್ನು ತಡೆಯಲು ತರಲಾದ 'ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಕಾಯ್ದೆ 2026ಕ್ಕೆ ರಾಷ್ಟ್ರಪತಿ ಅಂಕಿತ ದೊರೆತಿದೆ. ಯುಪಿಎಸ್ಸಿ, ಎಸ್ಎಸ್ಸಿ, ರೈಲ್ವೆ ಹಾಗೂ ಎನ್ಟಿಎ ನಡೆಸುವ ನೀಟ್ ಮುಂತಾದ ಪರೀಕ್ಷೆಗಳು ಇದರ ವ್ಯಾಪ್ತಿಗೆ ಬರಲಿದ್ದು, ಪರೀಕ್ಷಾ ಮಾಫಿಯಾಗೆ ಕಠಿಣ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲು ಹೊಸ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ಅವಕಾಶ ಕಲ್ಪಿಸಲಾಗಿದೆ.
- Bhavana Hegde
- Updated on: Aug 1, 2026
- 8:18 am
ಪ್ರಧಾನಿ ಮೋದಿ ವೀಡಿಯೊ ಬ್ಲಾಕ್ ಮಾಡಿದ್ದ ಮೆಟಾಗೆ ಸರ್ಕಾರದ ಬಿಸಿ
ಪ್ರಧಾನಿ ಮೋದಿ ವಿಡಿಯೊ ನಿರ್ಬಂಧಿಸಿದ್ದ ಮೆಟಾ ಸಂಸ್ಥೆಯ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಧಾನಿಯ ನಕಲಿ, ಮಾರ್ಫ್ ಮಾಡಿದ ವಿಡಿಯೊಗಳ ಕುರಿತು ಕ್ರಮ ಜರುಗಿಸಲಾಗಿದೆ. ಸರ್ಕಾರದ ಆಕ್ಷೇಪದ ನಂತರ, ಮೆಟಾ ವಿಐಪಿ ಖಾತೆಗಳ ಸುರಕ್ಷತೆಯನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದೆ. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ವಿಷಯ ನಿರ್ವಹಣೆಗೆ ಮುಂದಾಗಿದೆ.
- Nayana Rajeev
- Updated on: Jul 31, 2026
- 9:40 am
NEET-UG 2026 case: ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರಿಂದಲೇ ಸೋರಿಕೆ, ಸಿಬಿಐ ಸ್ಫೋಟಕ ಮಾಹಿತಿ ಬಹಿರಂಗ
ನೀಟ್-ಯುಜಿ (NEET-UG) 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆದುಕೊಂಡಿದೆ. ಇನ್ನು ಈ ಕೇಸಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯ ಮೂವರು ತಜ್ಞರು ಸೇರಿದಂತೆ ಒಟ್ಟು 13 ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಇದರ ಮಧ್ಯೆ ಸಿಬಿಐ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿನ ಕೈಗಳನ್ನ ಪತ್ತೆ ಮಾಡಿದೆ.
- Ramesh B Jawalagera
- Updated on: Jul 31, 2026
- 10:21 am
ಯುವಕರ ಕಲ್ಯಾಣಕ್ಕೆ ಸರ್ಕಾರ ಬದ್ಧ: ರಾಜ್ಯಸಭೆಯಲ್ಲೂ ಮಂಡನೆಯಾಯ್ತು ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆ
ರಾಜ್ಯಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಮಂಡನೆಯಾಗಿದೆ. ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಈ ಮಸೂದೆ ಕಠಿಣ ಕ್ರಮಗಳನ್ನು ಸೂಚಿಸುತ್ತದೆ. ಪರೀಕ್ಷಾ ಮಾಫಿಯಾಗಳಿಗೆ 10 ಕೋಟಿ ರೂ.ವರೆಗೂ ದಂಡ, 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 2 ತಿಂಗಳಲ್ಲಿ ತನಿಖೆ, 3 ತಿಂಗಳಲ್ಲಿ ತೀರ್ಪು ನೀಡಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ರಚನೆಗೆ ಅವಕಾಶವಿದೆ. ಯುವಜನರ ಭವಿಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡಿಸುವುದು ಸರ್ಕಾರದ ಗುರಿಯಾಗಿದೆ. ಕಾಕ್ರೋಚ್ ಜನತಾ ಪಕ್ಷ (CJP) ಹಾಗೂ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಸುದೀರ್ಘ ಪ್ರತಿಭಟನೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಬಳಿಕ ಜುಲೈ 27ರಂದು ಕೇಂದ್ರ ಸರ್ಕಾರ ಈ ನೂತನ ತಿದ್ದುಪಡಿ ಮಸೂದೆಯನ್ನು ಸಂಸತ್ತಿಗೆ ತಂದಿತು.
- Nayana Rajeev
- Updated on: Jul 30, 2026
- 3:03 pm
ಪೊಲೀಸ್ ಪರೀಕ್ಷೆಗೆ ಟಫ್ ರೂಲ್ಸ್: ಮಾಂಗಲ್ಯಸರ, ಜನಿವಾರಕ್ಕೆ ಓಕೆ; ಕಳ್ಳದಾರಿ ಹಿಡಿದ್ರೆ ಲೈಫ್ಟೈಮ್ ಡಿಬಾರ್
ಪರೀಕ್ಷಾ ಅಕ್ರಮ ತಡೆಯಲು ಕರ್ನಾಟಕ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ KEA ಬಿಗಿ ನಿಯಮಗಳನ್ನು ಅಳವಡಿಸಿದೆ. OMR ಶೀಟ್ನಲ್ಲಿ 5ನೇ ಕಾಲಂ ಕಡ್ಡಾಯ, ಬಯೋಮೆಟ್ರಿಕ್ ಹಾಜರಾತಿ, ಸಿಸಿಟಿವಿ ಕಣ್ಗಾವಲು, ENT ವೈದ್ಯರ ತಪಾಸಣೆ ಸೇರಿವೆ. ಅಕ್ರಮ ಎಸಗಿದ 216 ಅಭ್ಯರ್ಥಿಗಳಿಗೆ ಶಾಶ್ವತ ನಿಷೇಧ ಹೇರಲಾಗಿದೆ. ಇದು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ದಾರಿ.
- Vinay Kashappanavar
- Updated on: Jul 30, 2026
- 12:01 pm
ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ವಿವಾದ: ಕೇಂದ್ರಕ್ಕೆ ಕ್ಷಮೆಯಾಚಿಸಿ ಸುರಕ್ಷತಾ ಕ್ರಮಗಳ ವಿವರಣೆ ಕೊಟ್ಟ ಮೆಟಾ
ಪ್ರಧಾನಿ ಮೋದಿ ಅವರ ವಿಡಿಯೋವನ್ನು ಮೆಟಾ ನಿರ್ಬಂಧಿಸಿದ ಪ್ರಕರಣ ಭಾರಿ ವಿವಾದ ಸೃಷ್ಟಿಸಿದೆ. AI ಮಾಡರೇಶನ್ ದೋಷದಿಂದ ಹೀಗಾಗಿದೆ ಎಂದು ಮೆಟಾ ಕ್ಷಮೆಯಾಚಿಸಿದ್ದರೂ, ಕೇಂದ್ರ ಸರ್ಕಾರ ಇದನ್ನು ತಿರಸ್ಕರಿಸಿದೆ. ದೇಶದ ಪ್ರಮುಖ ಖಾತೆಗಳಿಗೆ ಹೆಚ್ಚುವರಿ ಭದ್ರತೆ ಭರವಸೆ ನೀಡಿದ ಮೆಟಾಗೆ, ಕೇಂದ್ರವು ಉನ್ನತ ಮಟ್ಟದ ಸಭೆಗೆ ಸಮನ್ಸ್ ಜಾರಿ ಮಾಡಿದೆ. AI ಅವಲಂಬನೆಯ ಅಪಾಯಗಳ ಬಗ್ಗೆಯೂ ಚರ್ಚೆ ನಡೆದಿದೆ.
- Nayana Rajeev
- Updated on: Jul 30, 2026
- 8:25 am
Anti-paper Leak Bill Passed: ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಭಾರಿ ಗದ್ದಲ ಮತ್ತು ನಿಯಮಿತ ಘೋಷಣೆಗಳ ನಡುವೆಯೂ, ಲೋಕಸಭೆಯು ಬುಧವಾರ ಮಹತ್ವದ 'ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026'ಅನ್ನು ಅಂಗೀಕರಿಸಿದೆ.ಇತ್ತೀಚೆಗೆ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ (NEET-UG) ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಈ ಕಠಿಣ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಸಂಘಟಿತ ಪರೀಕ್ಷಾ ಮಾಫಿಯಾ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆಯಲ್ಲಿ ಭಾಗಿಯಾಗುವ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50ಲಕ್ಷ ರೂ. ವರೆಗೆ ಭಾರಿ ದಂಡ ವಿಧಿಸಲು ನೂತನ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
- Nayana Rajeev
- Updated on: Jul 29, 2026
- 3:41 pm
ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು: ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸಮರ್ಥಿಸಿಕೊಂಡ ಜೆಪಿ ನಡ್ಡಾ
ಜೆಪಿ ನಡ್ಡಾ ವಿದ್ಯಾರ್ಥಿ ಚಳವಳಿಯ ಮೇಲೆ ನಡೆದ ಪೊಲೀಸ್ ಕ್ರಮವನ್ನು ಸಮರ್ಥಿಸಿದ್ದು, ಪ್ರತಿಭಟನಾಕಾರರು ಬಂಧನ ಎದುರಿಸಲು ಸಿದ್ಧರಿರಬೇಕು ಎಂದಿದ್ದಾರೆ. ರಾಜ್ಯಸಭೆಯಲ್ಲಿ ಈ ಕುರಿತು ತೀವ್ರ ಚರ್ಚೆ ನಡೆದು, ವಿರೋಧ ಪಕ್ಷಗಳು ಪೊಲೀಸ್ ದೌರ್ಜನ್ಯವನ್ನು ಖಂಡಿಸಿದವು. ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಸಾರ್ವಜನಿಕ ಆಸ್ತಿ ರಕ್ಷಿಸುವುದು ಪೊಲೀಸರ ಕರ್ತವ್ಯ ಎಂದು ನಡ್ಡಾ ಹೇಳಿದರು. ತುರ್ತು ಪರಿಸ್ಥಿತಿ ವೇಳೆ ತಮ್ಮ ವಿದ್ಯಾರ್ಥಿ ಜೀವನದ ಬಂಧನವನ್ನೂ ಅವರು ಉಲ್ಲೇಖಿಸಿದರು.
- Nayana Rajeev
- Updated on: Jul 29, 2026
- 2:20 pm