ಹೊಸ ಕೇಸ್​ ಬಗ್ಗೆ ದರ್ಶನ್​ ಜತೆ ಲಾಯರ್​ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ

| Updated By: ಮದನ್​ ಕುಮಾರ್​

Updated on: Sep 25, 2024 | 7:00 PM

ನಟ ದರ್ಶನ್​ ಅವರನ್ನು ಬಳ್ಳಾರಿ ಜೈಲಿನಲ್ಲಿ ಇಂದು (ಸೆ.25) ಲಾಯರ್​ ಭೇಟಿ ಮಾಡಿದ್ದಾರೆ. ಗುರುವಾರ (ಸೆ.26) ಆರಂಭ ಆಗಲಿರುವ ಹೊಸ ಪ್ರಕರಣದ ತನಿಖೆಯ ಬಗ್ಗೆ ದರ್ಶನ್​ಗೆ ವಕೀಲರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಂದಾಜು 35 ನಿಮಿಷಗಳ ಕಾಲ ದರ್ಶನ್ ಜೊತೆ ವಕೀಲರು ಮಾತುಕಥೆ ನಡೆಸಿದ್ದಾರೆ. ಇನ್ನೊಂದೆಡೆ, ದರ್ಶನ್​ಗೆ ಜಾಮೀನು ಕೊಡಿಸಲು ಪ್ರಯತ್ನ ನಡೆಯುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳಿಂದ ಅಂದಾಜು 85 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈಗ ವಿಚಾರಣೆ ಆರಂಭಿಸಿದ್ದಾರೆ. ಈ ಹಣದ ಮೂಲದ ಬಗ್ಗೆ ದರ್ಶನ್​ ಉತ್ತರ ನೀಡಬೇಕಿದೆ. ಆ ವಿಚಾರಣೆಯ ಬಗ್ಗೆ ದರ್ಶನ್​ಗೆ ಸಲಹೆ ನೀಡಲು ಬಳ್ಳಾರಿ ಜೈಲಿಗೆ ಅವರ ಪರ ವಕೀಲರು ಭೇಟಿ ನೀಡಿದ್ದರು. ಆದರೆ ಭೇಟಿಯ ಬಳಿಕ ಅವರು ಮಾಧ್ಯಮಗಳ ಜೊತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on