ರಾಜ್ಯದ ಲಿಂಗಾಯತ ಮಂತ್ರಿಗಳು ಸ್ವಾರ್ಥಿಗಳು, ನಾಚಿಕೆಯಾಗೆಬೇಕು ಅವರಿಗೆ: ಶಿವಗಂಗಾ ಬಸವರಾಜ್, ಶಾಸಕ
ಜಾತಿ ಗಣತಿ ನಮ್ಮ ಪ್ರಣಾಳಿಕೆಯಲ್ಲಿತ್ತು ಹಾಗಾಗಿ ಅದನ್ನು ಜಾರಿಗೆ ತರಲೇಬೇಕು, ಅದು ಬೇರೆ ವಿಚಾರ, ಎಂದು ಹೇಳಿದ ಬಸವರಾಜ, ಆದರೆ ಯಾವೆಲ್ಲ ಸಮುದಾಯಗಳಿಗೆ ಅನ್ಯಾಯವಾಗಿದೆ ಅಂತ ಚರ್ಚೆಯಾಗಬೇಕಿದೆ, ಒಕ್ಕಲಿಗೆ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ಯಾಯವಾಗಿದೆ ಅಂತ ಗೊತ್ತಾಗಿದೆ, ಎಲ್ಲರಿಗೂ ನ್ಯಾಯಯುತವಾದ ಪ್ರಾತಿನಿಧ್ಯ ಸಿಗಬೇಕು ಎಂದರು.
ದಾವಣಗೆರೆ, ಏಪ್ರಿಲ್ 16: ಚನ್ನಗಿರಿಯ ಶಿವಗಂಗಾ ಬಸವರಾಜ ಕಾಂಗ್ರೆಸ್ ಪಕ್ಷದ ಕಿರಿಯ ಶಾಸಕರಲ್ಲಿ ಒಬ್ಬರು. ಜಾತಿ ಗಣತಿಯ (Caste Census) ಬಗ್ಗೆ ಅವರು ತಮ್ಮ ಅಸಮಾಧಾನವನ್ನು ಪದೇಪದೆ ಹೊರಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿರುವ ಲಿಂಗಾಯತ ಮಂತ್ರಿಗಳ ವಿರುದ್ಧ ಕಿಡಿಕಾರಿದ ಅವರು, ಜಾತಿ ಗಣತಿಯ ಬಗ್ಗೆ ಚರ್ಚೆ ಶುರುವಾದಾಗಿನಿಂದ ಬೇರೆ ಮಂತ್ರಿಗಳು ತಮ್ಮ ಸಮುದಾಯದ ಶಾಸಕರನ್ನು ಮತ್ತು ಮುಖಂಡರನ್ನು ಕರೆದು ಚರ್ಚೆ ಮಾಡಿದ್ದಾರೆ, ಅದರೆ ಒಬ್ಬ ಲಿಂಗಾಯತ ಮಂತ್ರಿಯೂ ಇದುವರೆಗೆ ಅದನ್ನು ಮಾಡಲಿಲ್ಲ, ನಾಚಿಕೆಯಾಗಬೇಕು ಅವರಿಗೆ, ಇಷ್ಟೊಂದು ಸ್ವಾರ್ಥ ಅವರಲ್ಲಿರಬಾರದು, ಈಶ್ವರ್ ಖಂಡ್ರೆಯವರಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡಲ್ಲ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿ: ಡಿಸಿಎಂ ಡಿಕೆ ಶಿವಕುಮಾರ್ಗೆ ಮಹತ್ವದ ಬೇಡಿಕೆ ಇಟ್ಟ ಒಕ್ಕಲಿಗ ಶಾಸಕರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
