‘ವಿವೇಕ್​ ಮೂಗಲ್ಲಿ ರಕ್ತ ಬಂದಾಗ ನಮಗೆ ಗಾಬರಿ ಆಯ್ತು; ಅಜಯ್​ ರಾವ್​ ಅಲ್ಲೇ ಇದ್ದರು’: ರಂಜಿತ್​ ನೇರ ಮಾತು

ಶೂಟಿಂಗ್​ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡಿದ್ದ ರಂಜಿತ್​ ಅವರು ಈಗ ಚೇತರಿಸಿಕೊಂಡಿದ್ದು, ಟಿವಿ9 ಜೊತೆ ಮಾತನಾಡಿದ್ದಾರೆ. ‘ವಿವೇಕ್​ ಬಿದ್ದಾಗ ಅಜಯ್​​ ರಾವ್​ ಬರಲಿಲ್ಲ ಎಂದು ನಾನು ಅವರ ಮೇಲೆ ತಪ್ಪು ಹೊರಿಸುತ್ತಿಲ್ಲ. ಆದರೆ ಅವರ ಒಂದು ಮಾತಿಗೆ ಸ್ಪಷ್ಟನೆ ನೀಡಿದ್ದೇನೆ ಅಷ್ಟೇ’ ಎಂದು ರಂಜಿತ್​ ಹೇಳಿದ್ದಾರೆ.

‘ವಿವೇಕ್​ ಮೂಗಲ್ಲಿ ರಕ್ತ ಬಂದಾಗ ನಮಗೆ ಗಾಬರಿ ಆಯ್ತು; ಅಜಯ್​ ರಾವ್​ ಅಲ್ಲೇ ಇದ್ದರು’: ರಂಜಿತ್​ ನೇರ ಮಾತು
| Updated By: ಮದನ್​ ಕುಮಾರ್​

Updated on: Aug 14, 2021 | 5:37 PM

ರಚಿತಾ ರಾಮ್​ (Rachita Ram) ಮತ್ತು ಅಜಯ್​ ರಾವ್ (Ajay Rao)​ ನಟನೆಯ ‘ಲವ್​ ಯೂ ರಚ್ಚು’ (Love You Racchu) ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ವಿದ್ಯುತ್​ ತಂತಿ ತಗುಲಿ ಫೈಟರ್​ ವಿವೇಕ್​ (Fighter Vivek) ಮೃತಪಟ್ಟರು. ಆ ವೇಳೆ ನಟ ಅಜಯ್​ ರಾವ್​ ಅವರು ಸ್ಥಳದಲ್ಲಿ ಇದ್ದರೋ ಇಲ್ಲವೋ ಎಂಬ ಬಗ್ಗೆ ಅನೇಕರ ಮನದಲ್ಲಿ ಅನುಮಾನ ಇದೆ. ಆ ಬಗ್ಗೆ ಗಾಯಾಳು ರಂಜಿತ್​ ಮಾತನಾಡಿದ್ದಾರೆ. ‘ಅಜಯ್​​ ರಾವ್​ ಬರಲಿಲ್ಲ ಎಂದು ನಾನು ಅವರ ಮೇಲೆ ತಪ್ಪು ಹೊರಿಸುತ್ತಿಲ್ಲ. 200 ಮೀಟರ್​ ದೂರದಲ್ಲಿ ಇದ್ದೆ ಅಂತ ಅವರು ಹೇಳಿದ್ದನ್ನು ನ್ಯೂಸ್​ನಲ್ಲಿ ನೋಡಿದೆ. ಆ ಮಾತಿಗೆ ನಾನು ಸ್ಪಷ್ಟನೆ ನೀಡಿದ್ದೇನೆ ಅಷ್ಟೇ. ಅವರು ನಮ್ಮಿಂದ 10ರಿಂದ 15 ಮೀಟರ್​ ದೂರದಲ್ಲಿ ಇದ್ದರು. ಅವರಿಗೂ ಬರೋಕೆ ಆಗಲ್ಲ. ಯಾಕೆಂದರೆ ಅವರ ಕಾಲಿಗೆ ಪಟ್ಟಾಗಿದೆ’ ಎಂದು ರಂಜಿತ್​ ಹೇಳಿದ್ದಾರೆ.

‘ವಿವೇಕ್​ ಬಿದ್ದಾಗ ಎಲ್ಲರಿಗೂ ಗಾಬರಿ ಆಯಿತು. ಏನು ಮಾಡಬೇಕು ಎಂದು ಯಾರಿಗೂ ಗೊತ್ತಾಗಲಿಲ್ಲ. ಮುಖ್ಯವಾಗಿ, ವಿವೇಕ್​ಗೆ ಮೂಗಿನಲ್ಲಿ ರಕ್ತ ಬಂದಾಗ ಗಾಬರಿ ಹೆಚ್ಚಾಯಿತು. ಅವನಿಗೆ ಪ್ರಜ್ಞೆ ಇರಲಿಲ್ಲ. ನಮಗೆಲ್ಲ ಅದರಿಂದ ಶಾಕ್​ ಆಯಿತು. ಬಿದ್ದಾಗ ಅವನು ಸ್ವಲ್ಪ ಉಸಿರಾಡುತ್ತಿದ್ದ. ಆಸ್ಪತ್ರೆಗೆ ಬಂದು ಬೆಡ್​ನಲ್ಲಿ ಮಲಗುವವರೆಗೂ ಅವನು ನನ್ನ ಪಕ್ಕದಲ್ಲಿ ಇದ್ದ. ಡಾಕ್ಟರ್​ ಚಿಕಿತ್ಸೆ ಶುರುಮಾಡಿದ್ದರು. ಅವನು ಬದುಕಿದ್ದಾನೆ ಎಂದುಕೊಂಡಿದ್ದೆ. ಆದರೆ ನಾನು ಐಸಿಯುಗೆ ಹೋದ ಬಳಿಕ ಅವನು ಡೆತ್​ ಆಗಿದ್ದಾನೆ ಅಂತ ಗೊತ್ತಾಯಿತು’ ಎಂದು ಆ ದಿನವನ್ನು ರಂಜಿತ್​ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್​ಗೆ ನ್ಯಾಯ ಸಿಗುವವರೆಗೆ ಶೂಟಿಂಗ್​ಗೆ​ ಬರಲ್ಲ’; ಅಜಯ್​ ರಾವ್

Follow us