AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?

‘ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಈ ರೀತಿ ಆಗಿದೆ. ಘಟನೆ ನಡೆದಾಗ ಹತ್ತಿರದಲ್ಲೇ ಅಜಯ್​ ರಾವ್​ ಟೆಂಟ್​ನೊಳಗೆ ಕುಳಿತಿದ್ದರು. ಆದರೂ ಸಹಾಯಕ್ಕೆ ಬರಲಿಲ್ಲ’ ಎಂದು ಗಾಯಾಳು ರಂಜಿತ್​ ಹೇಳಿದ್ದಾರೆ.

‘ಅಜಯ್​ ರಾವ್​ ಅಲ್ಲೇ ಇದ್ರೂ ಸಹಾಯಕ್ಕೆ ಬರಲಿಲ್ಲ’: ಗಾಯಾಳು ರಂಜಿತ್​ ಆರೋಪ; ಅಜಯ್​ ಪ್ರತಿಕ್ರಿಯೆ ಏನು?
ಅಜಯ್​ ರಾವ್​
TV9 Web
| Edited By: |

Updated on: Aug 10, 2021 | 12:39 PM

Share

‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಚಿತ್ರೀಕರಣದ ವೇಳೆ ಫೈಟರ್​ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಸೋಮವಾರ (ಆ.9) ಸಾಹಸ ಸನ್ನಿವೇಶದ ಶೂಟಿಂಗ್​ ಸಂದರ್ಭದಲ್ಲಿ ಫೈಟರ್​ ವಿವೇಕ್​ (Fighter Vivek) ಅವರು ವಿದ್ಯುತ್​ ತಗುಲಿ ಮೃತಪಟ್ಟರು. ಮತ್ತೋರ್ವ ಫೈಟರ್​ ರಂಜಿತ್​ ಅವರಿಗೂ ವಿದ್ಯುತ್​ ಶಾಕ್​ ತಗುಲಿದ್ದು, ಅವರಿಗೆ ರಾಜರಾಜೇಶ್ವರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಂಜಿತ್​ ಹೇಳಿಕೆ ನೀಡಿರುವ ವಿಡಿಯೋ ಲಭ್ಯವಾಗಿದೆ. ಈ ಅವಘಡಕ್ಕೆ ನಿಜಕ್ಕೂ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಘಟನೆ ನಡೆದಾಗ ಹೀರೋ ಅಜಯ್​ ರಾವ್​ (Ajay Rao) ಅವರು ಸ್ಥಳದಲ್ಲೇ ಇದ್ದರೂ ಕೂಡ ಸಹಾಯಕ್ಕೆ ಬರಲಿಲ್ಲ ಎಂದು ರಂಜಿತ್​ ಆರೋಪಿಸಿದ್ದಾರೆ.

ವಿವೇಕ್​ ಮೃತಪಟ್ಟಿರುವ ಸುದ್ದಿ ಹೊರಬಿದ್ದ ಬಳಿಕ ಮಾಧ್ಯಮಗಳಿಗೆ ಅಜಯ್​ ರಾವ್​ ಹೇಳಿಕೆ ನೀಡಿದ್ದರು. ‘ನಾನು 200 ಮೀಟರ್​ ದೂರದಲ್ಲಿದ್ದೆ. ಹುಡುಗರ ಬಂದು ಹೇಳಿದಾಗ ವಿಷಯ ತಿಳಿಯಿತು’ ಎಂದು ಹೇಳಿದ್ದರು. ಆದರೆ ರಂಜಿತ್​ ಹೇಳಿರುವ ಪ್ರಕಾರ ಅಜಯ್​ ರಾವ್​ ಅವರು ಕೇವಲ 10-20 ಮೀಟರ್​ ಅಂತರದಲ್ಲೇ ಇದ್ದರು! ‘ಇದರಲ್ಲಿ ಫೈಟ್​ ಮಾಸ್ಟರ್​ ವಿನೋದ್​ ಅವರ ತಪ್ಪು ಇಲ್ಲ. ಕ್ರೇನ್​ ಆಪರೇಟರ್​ ತಪ್ಪಿನಿಂದಾಗಿ ಈ ರೀತಿ ಆಗಿದೆ. ಘಟನೆ ನಡೆದಾಗ ಹತ್ತಿರದಲ್ಲೇ ಇರುವ ಟೆಂಟ್​ನೊಳಗೆ ಅಜಯ್​ ರಾವ್ ಕುಳಿತಿದ್ದರು. ಆದರೂ ಸಹಾಯಕ್ಕೆ ಬರಲಿಲ್ಲ’ ಎಂದು ರಂಜಿತ್​ ಹೇಳಿದ್ದಾರೆ.

ರಂಜಿತ್​ ಅವರ ಈ ಹೇಳಿಕೆ ಬಗ್ಗೆ ಅಜಯ್​ ರಾವ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಘಟನೆ ನಡೆದಾಗ ಹೀರೋಯಿಸಂ ತೋರಿಸೋಕೆ ಆಗಲ್ಲ. ಅಲ್ಲಿ ಆಗಲೇ ಜನರು ಗುಂಪು ಸೇರಿದ್ದರು. ಹುಡುಗರು ಬಂದು ಹೇಳುವವರೆಗೆ ನನಗೆ ಏನೂ ತಿಳಿದಿರಲಿಲ್ಲ. ನಾನು ಬರಬೇಕಿತ್ತು ಎಂದು ಭಾವುಕನಾಗಿ ರಂಜಿತ್​ ನಿರೀಕ್ಷಿಸಿದ್ದರಲ್ಲಿ ತಪ್ಪಿಲ್ಲ. ರಂಜಿತ್​ ಅವರನ್ನು ಭೇಟಿ ಮಾಡೋಕೆ ನಾನು ಆಸ್ಪತ್ರೆಗೆ ಹೋಗಿದ್ದೆ. ಆದರೆ ಅಲ್ಲಿ ನಮ್ಮನ್ನು ಐಯುಸಿ ಒಳಗೆ ಬಿಡಲಿಲ್ಲ. ನಿನ್ನೆಯಿಂದಲೂ ನಾನು ಎಲ್ಲರಿಗೂ ಉತ್ತರ ನೀಡುತ್ತಿದ್ದೇನೆ. ಮೃತ ವಿವೇಕ್ ಅವರ​ ಚಿಕ್ಕಪ್ಪನ ಬಳಿಕ ನಾನು ಮಾತನಾಡಿದ್ದೇನೆ. ಅವರ ಜೊತೆಗೆ ನಾನಿದ್ದೇನೆ’ ಎಂದು ಅಜಯ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ:

ಮುಂಜಾಗ್ರತ ಕ್ರಮ ಕೈಗೊಂಡಿರಲಿಲ್ಲ, ವಿವೇಕ್​ಗೆ ನ್ಯಾಯ ಸಿಗುವವರೆಗೆ ಶೂಟಿಂಗ್​ಗೆ​ ಬರಲ್ಲ’; ಅಜಯ್​ ರಾವ್

ಫೈಟರ್​​ ಸಾವು ಪ್ರಕರಣ: ನಿರ್ಮಾಪಕ ಗುರು ದೇಶಪಾಂಡೆ ಪರಾರಿ; ಐವರ ವಿರುದ್ಧ ಎಫ್​ಐಆರ್​

(Fighter Vivek Death: Love You Racchu hero Ajay Rao reaction to Ranjith allegations)

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ