AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ

Fighter Vivek Death: ‘ಸೆಟ್​ನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳು ಇದ್ದವು. ಕ್ರೇನ್​ನವನು ಮಾಡಿದ ತಪ್ಪಿನಿಂದಾಗಿ ಹೀಗೆ ಆಯಿತು. ಇದನ್ನು ಯಾರೂ ಊಹಿಸಿರಲಿಲ್ಲ’ ಎಂದು ಅವಘಡದಲ್ಲಿ ಗಾಯಾಳು ಆಗಿರುವ ರಂಜಿತ್​ ಹೇಳಿದ್ದಾರೆ.

‘ಲವ್​ ಯೂ ರಚ್ಚು’ ಫೈಟರ್​ ವಿವೇಕ್​ ಸಾವಿಗೆ ಅಸಲಿ ಕಾರಣ ಏನು? ಪ್ರತ್ಯಕ್ಷದರ್ಶಿ ರಂಜಿತ್​ ತೆರೆದಿಟ್ಟ ಸತ್ಯ
ಫೈಟರ್​ ರಂಜಿತ್​
TV9 Web
| Edited By: |

Updated on: Aug 14, 2021 | 4:35 PM

Share

‘ಲವ್​ ಯೂ ರಚ್ಚು’ (Love You Racchu) ಸಿನಿಮಾ ಶೂಟಿಂಗ್​ ವೇಳೆ ಫೈಟರ್​ ವಿವೇಕ್​ (Fighter Vivek) ಸಾವನ್ನಪ್ಪಿದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಇಂಥ ಅಚಾತುರ್ಯಕ್ಕೆ ಕಾರಣ ಯಾರು ಎಂಬುದು ಜನರು ಪ್ರಶ್ನೆ. ಈ ದುರ್ಘಟನೆಯಲ್ಲಿ ಮೃತ ವಿವೇಕ್​ ಸ್ನೇಹಿತ ರಂಜಿತ್​ ಕೂಡ ಗಾಯಗೊಂಡಿದ್ದರು. ಅವರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಈಗ ಬಹುತೇಕ ಚೇತರಿಸಿಕೊಂಡಿರುವ ರಂಜಿತ್​ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಅಂದು ವಿವೇಕ್​ ಸಾವಿಗೆ ನಿಜಕ್ಕೂ ಕಾರಣ ಆಗಿದ್ದೇನು ಎಂಬುದನ್ನು ಅವರು ವಿವರಿಸಿದ್ದಾರೆ.

‘ಮಾಸ್ಟರ್​ ಕ್ಲೋಸ್​ಅಪ್​ ಶಾಟ್​ ತೆಗೆಯುತ್ತಿದ್ದರು. ನಾವು ಮಾನಿಟರ್​ ಮಾಡಿಕೊಳ್ಳುತ್ತಿದ್ವಿ. ವಿವೇಕ್ ರೋಪ್​ ಕೈಗೆ ಸುತ್ತಿಕೊಂಡಿದ್ದ. ಕೊಚ್ಚೆಯಲ್ಲಿ ಕ್ರೇನ್​ ಟೈರ್​ ಸಿಕ್ಕಿಕೊಂಡಿತ್ತು. ಅದಕ್ಕಾಗಿ ಗಾಡಿಯನ್ನು ಹಿಂದೆ-ಮುಂದೆ ಮಾಡುತ್ತಿದ್ದ. ಆಗ ಮರಕ್ಕೆ ಟಚ್​ ಆಯ್ತು. ಪಕ್ಕಕ್ಕೆ ಬಾ ಎಂದು ವಿವೇಕ್​ಗೆ ಹೇಳಿದೆ. ಸರಿ ಅಂತ ಅವನು ಸೈಡ್​ಗೆ ಬಂದ. ಗಾಡಿ ಮತ್ತೆ ಜರ್ಕ್​ ಹೊಡೆಯಿತು. ರೋಪ್​ ತೆಗೆಯೋಕೆ ಕೈ ಹಾಕುತ್ತಿದ್ದಂತೆಯೇ ವಿದ್ಯುತ್ ಲೈನ್​​ಗೆ ಕ್ರೇನ್​ ಟಚ್​ ಆಯಿತು. ​ನಾನು ಮತ್ತು ವಿವೇಕ್ ಇಬ್ಬರೂ ಕೆಳಗೆ ಬಿದ್ವಿ. ಅಷ್ಟು ಹೊತ್ತಿಗೆ ಅವರೆಲ್ಲರೂ ಬಂದು ಕಾರಲ್ಲಿ ಕೂರಿಸಿಕೊಂಡರು’ ಎಂದು ರಂಜಿತ್​ ಹೇಳಿದ್ದಾರೆ.

‘ಸೆಟ್​ನಲ್ಲಿ ಎಲ್ಲ ಮುಂಜಾಗ್ರತ ಕ್ರಮಗಳು ಇದ್ದವು. ಕ್ರೇನ್​ನವನು ಮಾಡಿದ ತಪ್ಪಿನಿಂದಾಗಿ ಹೀಗೆ ಆಯಿತು. ಇದನ್ನು ಯಾರೂ ಊಹಿಸಿರಲಿಲ್ಲ. ನಾಲ್ಕು ದಿನ ಶೂಟಿಂಗ್​ ಮಾಡಿದ್ವಿ. ಆಗಲೂ ಇದೇ ಕ್ರೇನ್​ ಆಪರೇಟರ್​ ಬಂದಿದ್ದ. ಆ ದಿನ ಪ್ಯಾಚ್​ ವರ್ಕ್​ ಮಾಡ್ತಾ ಇದ್ವಿ. ಮಳೆ ಬಂದಿತ್ತು. ಹಸಿ ನೆಲ್ಲದಲ್ಲಿ ಟೈರ್​ ಸಿಕ್ಕಿಕೊಂಡಿತು. ಅದೇ ನಮಗೆ ಮೈನಸ್​ ಪಾಯಿಂಟ್​ ಆಯಿತು. ಕ್ರೇನ್​ನವನು ಮಾಡಿದ ತಪ್ಪನಿಂದ ಇಡೀ ತಂಡಕ್ಕೆ ಕೆಟ್ಟ ಹೆಸರು’ ಎಂದು ರಂಜಿತ್​ ಹೇಳಿದ್ದಾರೆ.

‘ಹೈ-ಟೆನ್ಷನ್​ ವೈರ್ ತಾಗಿ ಈ ಅವಘಡ ಆಯಿತು ಎಂದು ಹೇಳಲಾಗುತ್ತಿದೆ. ಆ ಬಗ್ಗೆ ನಾನು ಸ್ಪಷ್ಟನೆ ನೀಡಬೇಕು. ಅದು ಹೈ-ಟೆನ್ಷನ್​ ವೈರ್​ ಅಲ್ಲ. ಒಂದು ವೇಳೆ ಹೈ-ಟೆನ್ಷನ್​ ವೈರ್ ಆಗಿದ್ದರೆ ನಾವೆಲ್ಲರೂ ಬೂದಿ ಆಗಿರಬೇಕಿತ್ತು. ತೋಟಕ್ಕೆ ಹಾಕಿದ್ದ ವಿದ್ಯುತ್​ ವೈರ್​ನಿಂದ ಈ ದುರ್ಘಟನೆ ಸಂಭವಿಸಿತು. ಇನ್​ಶ್ಯುರೆನ್ಸ್​ ಮಾಡಿಸಲು ಅಪ್ಲಿಕೇಷನ್​ ಪಡೆದುಕೊಂಡಿದ್ದರು. ಮಾಡಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಇನ್​ಶ್ಯುರೆನ್ಸ್​ ಇದ್ದಿದ್ದರೆ ವಿವೇಕ್​ ಕುಟುಂಬಕ್ಕೂ ಅನುಕೂಲ ಆಗಿರುತ್ತಿತ್ತು. ನನಗೂ ಸಹಾಯ ಆಗುತ್ತಿತ್ತು. ಆ ಬಗ್ಗೆ ಅಸೋಸಿಯೇಷನ್​ ಹಿರಿಯರು ಮಾತನಾಡಿದ ಮೇಲೆ ಗೊತ್ತಾಗುತ್ತದೆ’ ಎಂದಿದ್ದಾರೆ ರಂಜಿತ್​.

ಇದನ್ನೂ ಓದಿ:

ಫೈಟರ್​ ವಿವೇಕ್​ ಸಾವಿಗೆ ರಚಿತಾ ರಾಮ್ ಶ್ರದ್ಧಾಂಜಲಿ; ಓಂ ಶಾಂತಿ ಎನ್ನುವ ಬದಲು ಸಹಾಯ ಮಾಡಿ ಎಂದ ಜನರು

ಪೊಲೀಸರ ಕೈಗೆ ಸಿಗದ ಗುರು ದೇಶಪಾಂಡೆ; ಮೃತನ ಕುಟುಂಬಕ್ಕೆ 10 ಲಕ್ಷ ಪರಿಹಾರದ ಭರವಸೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?