AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವು ಬೆಳೆಗೆ ಬೆಂಬಲ ಘೋಷಿಸುವಂತೆ ಬೆಳೆಗಾರರಿಂದ ಶ್ರೀನಿವಾಸಪುರ ಬಂದ್, ವಾಹನ ಸಂಚಾರ ಅಸ್ತವ್ಯಸ್ತ

ಮಾವು ಬೆಳೆಗೆ ಬೆಂಬಲ ಘೋಷಿಸುವಂತೆ ಬೆಳೆಗಾರರಿಂದ ಶ್ರೀನಿವಾಸಪುರ ಬಂದ್, ವಾಹನ ಸಂಚಾರ ಅಸ್ತವ್ಯಸ್ತ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 11, 2025 | 10:19 AM

ಮಾವು ಬೆಳೆಗಾರರು ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಲ್ಲುಗಳನ್ನು ಇಟ್ಟು ಬಂದ್ ಮಾಡಿರುವರೆಂದು ನಮ್ಮ ವರದಿಗಾರ ಮಾಹಿತಿ ನೀಡಿದ್ದಾರೆ. ತಾಡಿಗೋಳ ಕ್ರಾಸ್, ರೋಜರನಹಳ್ಳಿ ಕ್ರಾಸ್ ಸೇರಿ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲು ಮತ್ತು ಬೆಂಬಲ ಬೆಲೆ ಘೋಷಣೆ ಮಾಡಲು ಅವರು ಒತ್ತಾಯಿಸುತ್ತಿದ್ದಾರೆ.

ಕೋಲಾರ, ಜೂನ್ 11: ಕೋಲಾರ ಜಿಲ್ಲೆಯ ರೈತಾಪಿ ಸಮುದಾಯ (farming community) ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆಗೆ ಈಡಾಗುತ್ತಾರೆ. ಶ್ರೀನಿವಾಸಪುರದ ಮಾವು ಬೆಳೆಗಾರರು ಇಂದು ಮಾವಿಗೆ ಬೆಂಬಲ ಬೆಲೆ ಆಗ್ರಹಿಸಿ ಶ್ರೀನಿವಾಸಪುರ ಬಂದ್​ಆಚರಿಸುತ್ತಿದ್ದಾರೆ. ಪಟ್ಟಣದ ಮುಖ್ಯರಸ್ತೆಯೊಂದರಲ್ಲಿ ಬೆಳೆಗಾರರು ತಾವು ಬೆಳೆದ ಮಾವಿನ ಫಸಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಕಾಲ ಮಳೆಯಿಂದಾಗಿ ಕೋಲಾರ ಜಿಲ್ಲೆ ರಾಜ್ಯದ ಇತರ ಭಾಗಗಳಲ್ಲಿ ಮಾವಿನ ಫಸಲು ಹಾಳಾಗಿದೆ. ಹಾಗಾಗಿ, ಮಾವಿನ ಬೆಳೆಗೆ ಬೆಂಬಲ ಬೆಲೆ ಘೋಷಿಸಲೇಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:  ಮಾವು ಇಳುವರಿ ಕುಸಿತ: ಬಂಪರ್ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 11, 2025 10:18 AM