AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ಭಾರೀ ವಾಹನಗಳ ಸಂಚಾರದ ಮೇಲೆ ನಿರ್ಬಂಧ

ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ಭಾರೀ ವಾಹನಗಳ ಸಂಚಾರದ ಮೇಲೆ ನಿರ್ಬಂಧ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2025 | 10:37 AM

Share

ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಅಲ್ಲಲ್ಲಿ ಸಂಭವಿಸುತ್ತಿರುವ ಭೂಕುಸಿತದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಸೋಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಿದೆ. ವಾಹನ ಯಾವುದಾದರೇನು ಭೂಕುಸಿತ ಉಂಟಾಗುತ್ತಿದ್ದರೆ ವಾಹನಗಳು ಓಡಾಡುವುದು ಅಪಾಯಕಾರಿಯೇ. ವಾಹನ ಸವಾರರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.

ಚಿಕ್ಕಮಗಳೂರು, ಜೂನ್ 17: ರಾಜ್ಯದಾದ್ಯಂತ ಮಳೆ ತನ್ನ ಪ್ರವರ ಮುಂದುವರಿಸಿದೆ. ಪಶ್ಚಿಮಘಟ್ಟ ಸಾಲು (Western Ghats Section), ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆ ಒಂದೇಸಮ ಸುರಿಯುತ್ತಿದೆ. ಚಿಕ್ಕಮಗಳೂರುನಲ್ಲಿ ಭಾರೀ ಮಳೆಯಾಗುತ್ತಿದ್ದು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿರುವ ಸಾಲ್ಮರ ಗ್ರಾಮದ ಮೂಲಕ ಹಾದುಹೋಗುವ ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭೂಕುಸಿತ ಉಂಟಾಗಿದೆ. ದೃಶ್ಯಗಳಲ್ಲಿ ಮನೆಯೊಂದು ಭೂಕುಸಿತದಿಂದ ಅಪಾರ ಹಾನಿಗೊಳಗಾಗಿರುವುದನ್ನು ನೋಡಬಹುದು. ಯಾವುದೇ ಸಾವು ನೋವು ಸಂಭವಿಸದಿರುವುದು ಅದೃಷ್ಟ. ಕೆಲ ಅಧಿಕಾರಿಗಳು ಹಾನಿಗೊಳಗಾಗಿರುವ ಮನೆ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:  ಬೆಂಗಳೂರು ಮಂಗಳೂರು ವಾಹನ ಸವಾರರೇ ಗಮನಿಸಿ: ಶಿರಾಡಿ ಘಾಟ್ ರಸ್ತೆಯ ಹಲವೆಡೆ ಭೂಕುಸಿತ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ